Home / ಲೇಖನ / ವಿಜ್ಞಾನ / ವಾಟರ್‌ಬೈಕ್ ಕಥೆ

ವಾಟರ್‌ಬೈಕ್ ಕಥೆ

ಪೆಟ್ರೋಲ್- ಡಿಸೇಲ್ ಇತ್ಯಾದಿ ಬಳಕೆಯ ಬದಲು ಪರ್‍ಯಾಯ ಇಂಧನದ ಬಳಕೆಯ ಬಗ್ಗೆ ಸುದೀರ್‍ಘ ಚಿಂತನೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇದೆ.

ಹಣ ಉಳಿಸುವ ಆಲೋಚನೆ ಒಂದೆಡೆಯಾದರೆ, ಪೆಟ್ರೋಲ್ ಡಿಸೇಲ್ ಕೊರತೆಯನ್ನು ನೀಗಿಸುವ ಯೋಚನೆಯು ನಿರಂತರವಾಗಿ ಸಾಗುತ್ತಲೇ ಇದೆ.

ಆದರೆ… ಇಷ್ಟು ವರ್ಷಗಳಾದರೂ ಹರ್ಷದ ಸುದ್ದಿ ಮಾತ್ರ ಇಲ್ಲವೇ ಇಲ್ಲ ಎನಬೇಡಿ!

ಬ್ರೆಜಿಲ್‌ನ ಸಾವೋಪೌಲೊದ ರಿಕಾರ್‍ಡೋ ಜಿವಡೋ ನೀರಿನಿಂದ ಬೈಕ್ ಓಡಿಸುತ್ತಿದ್ದಾನೆ! ಬರೋಬ್ಬರಿ ಒಂದು ಲೀಟರ್ ನೀರಿಗೆ ಈತನಲ್ಲಿರುವ ಬೈಕ್ ೩೦೦ ಮೈಲಿ ಓಡುವುದು. ಇವರು ಇಂಧನದ ಬದಲು ನೀರನ್ನು ತುಂಬಿಸಿ ಬೈಕ್ ಓಡಿಸುವ ವೀಡಿಯೋವನ್ನು ಕೂಡಾ ಈಗಾಗಲೇ ಬಿಡುಗಡೆಗೊಳಿಸಿರುವರು.

ಇವರ ಬಳಿ ಇರುವ ಬೈಕಿನ ಹೆಸರು- ಟಿ ಪವರ್ ಎಚ್‌ಓ ಎಂದು. ಇದೊಂದು ಸುಂದರ ವಾಟರ್ ಬೈಕ್, ಅಂದರೆ ನೀರ ಮೇಲೆ ಚಲಿಸುವುದಲ್ಲ. ರಸ್ತೆ ಮೇಲೆ ಸಲಿಸಾಗಿ ಓಡುವುದು.

ಸಾವೋಪೌಲೊದ ರಿಕಾರ್‍ಡೊ ಅವರ ಸಂಶೋಧನೆಯ ಪ್ರಕಾರ ಬೈಕ್‌ನಲ್ಲಿ ಕಾರ್ ಬ್ಯಾಟರಿಯೊಂದನ್ನು ಅಳವಡಿಸಿರುವರು. ಇದರಿಂದಾಗಿ ಇದು ವಿದ್ಯುತ್ ಉತ್ಪಾದಿಸಿ ನೀರಿನ ಕಣಗಳಿಂದ ಜಲಜನಕ ಪ್ರತ್ಯೇಕಿಸುತ್ತದೆ. ಹೀಗಾಗಿ ದಹನ ಕ್ರಿಯೆಯುಂಟಾಗಿ, ಅದರಿಂದ ಬಿಡುಗಡೆಯಾಗುವ ಶಕ್ತಿಯಿಂದ ಬೈಕ್ ಓಡುವುದು!

ಅಬ್ಬಾ! ಇಂಧನ ಉಳಿತಾಯ ಹಾಗೂ ವಾಯುಮಾಲಿನ್ಯ ಇತ್ಯಾದಿ ತಪ್ಪಿಸಿ ಪರ್‍ಯಾಯ ಇಂಧನದ ವ್ಯವಸ್ಥೆಯಾಗುವ ಎಲ್ಲ ಮೂಲಗಳನ್ನು ಈಗಾಗಲೇ ಸಂಶೋಧಿಸಲಾಗಿದೆ.

ಆದ್ದರಿಂದ ಇವೆಲ್ಲ ಪರ್‍ಯಾಯ ಇಂಧನಗಳಾಗಿ ಎಲ್ಲ ಕಡೆ ಬಳಕೆಯಾದರೆ ಬಹಳಷ್ಟು ಸಮಸ್ಯೆಗಳು ಇಲ್ಲವಾಗಿ ಹೊಸಹೊಸ ಆವಿಷ್ಕಾರಗಳಿಗೆ ಎಡೆ ಮಾಡಿಕೊಡುತ್ತವೆಂದು ಭಾವಿಸಲಾಗಿದೆ.

ಅಂತೂ ಇಂತೂ ನಾವು ನೀವು ಕಾಯೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...