Home / ಕವನ / ಕವಿತೆ / ಶಾಂತಿ ಸಮರಸದ ತೊರೆಯಲ್ಲಿ

ಶಾಂತಿ ಸಮರಸದ ತೊರೆಯಲ್ಲಿ

“ಒಂದೇತ್ ಜಗತ್ ಭೂಷಣೆ ಸುವರ್‍ಣ ಚೇತನವೇ
ಜಗದಾತ್ರಿ ದಾತೆಯೆ ಶರಣೆಂಬೆವೂ ನಿನಗೆ ಮಾತೆಯೆ
ಕರ ಮುಗಿವೆವು ನಿನಗೆ”
ಜನನಿಽಽ ಜಗದಾತ್ರೆಯೆ
ಓಂ ಶಾಂತಿಃ ಓಂ ಶಾಂತಿಃ

ಶಾಂತಿ ಸಮರಸದ ತೊರೆಯಲ್ಲಿ
ಭದ್ರ ಬುನಾದಿಯ ಸೆರೆಯಲ್ಲಿ
ಸನಾತನ ಸಮನ್ವಯ ಗುಡಿಯೊಳಗಣ ಮೂರ್‍ತವೆ ಇಲ್ಲಿ
ಹೇಳೇಳು ಮನವೇ ದನಿ ಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ಭಾತೃತ್ವದ ತುಂಬು ದೋಣಿಯಲ್ಲಿ
ಮಮತೆಯ ಮಡಿಲಂದದಿ ತೂಗಿ
ಮುನ್ನಡೆದಿದೆ ಜೀವನ ಕಣ್ಸೆಳೆದಿದೆ ಹೂಮನ
ಹೇಳೀಳು ಮನವೇ ದನಿ ಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ವರ್ತಮಾನದ ವೈಭವ ಶಿಖರಕೇರಿ
ಭೂತ ಭವಿಷ್ಯತೆಯ ಕರತಾಳದಲ್ಲಿ ಕೂಡಿ
ಮಾನವತೆಯ ನಮ್ರತೆಯ ಭಾವನ ಸ್ವರ ತಾಳದಲ್ಲಿ
ಹೇಳೀಳು ಮನವೇ ದನಿಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ಶುಭ್ರತೆಯ ಕೀರ್ತಿ ಹೊಸ್ತಿಲಲ್ಲಿ ಉಜ್ವಲ ಅಮರತ್ವದಡಿಯಲಿ
ಹಸನಾಗಿಹ ಕೀರ್ತಿ ಹೊಸ್ತಿಲಲ್ಲಿ ಉಜ್ವಲ ಅಮರತ್ವದಡಿಯಲಿ
ಐಕ್ಯತೆಯ ಹಿರಿಮೆಯಲಿ ನಲಿದಾಡಿಹುವುದು ಹೂಮನ
ಭವ್ಯತೆಯ ಸೋಗಿನಲಿ ಹೇಳೇಳು ಮನವೇ ದನಿಗೂಡಿಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ಋಷ್ಯ ಮುಖ ಕಲ್ಪತರು ಗರಿಮೆಯ ತಾಣದಲ್ಲಿ
ಶಿಲ್ಪ ಸೌಂದರ ಮೇಳೈಸುವ ಆಗರದಲ್ಲಿ
ಭಾರತೀಯ ಹೃತ್ಕಮಲಕೆ ತಲೆಬಾಗಿ ಹಾಡಿ
ಹೇಳೇಳು ಮನವೆ ದನಿಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...