Home / ಕವನ / ಕವಿತೆ / ಹೋಗಲೆಲ್ಲಿ ಜನ ಸಾಮಾನ್ಯರು?

ಹೋಗಲೆಲ್ಲಿ ಜನ ಸಾಮಾನ್ಯರು?

ಬರುತ್ತಿದ್ದಾರೆ ಜಾಗ್ರತೆ
ಹಗಲು ದರೋಡೆಕೋರರು
ಜನ ಸಾಮಾನ್ಯರ ಸುಲಿಗೆ ಮಾಡೋ
ಕಲಿಯುಗದ ಬಕಾಸುರರು.

ಮನೆಕಟ್ಟುವಾಗ ಬರುತ್ತಾರೆ
ಕಾರ್ಪೊರೇಶನ್‌ನ ಸುಲಿಗೆದಾರರು,
ಕಟ್ಟಿದ ಮೇಲೆ ಬರುತ್ತಾರೆ
ತೆರಿಗೆ ಹೇರುವ ಲಂಚಾವತಾರಿಗಳು.

ರಸ್ತೆಗಿಳಿದರೆ ಬರುತ್ತಾರೆ ಸರಗಳ್ಳರು
ವಾಹನಗಳ ನಿಯಂತ್ರಿಸುವವರು
ಪರಿಸರ ರಕ್ಷಣೆಗೆ ನಿಂತವರು
ಲೆಕ್ಕವಿಲ್ಲದೆ ಬೊಕ್ಕಸ ತುಂಬುವ ಅ-ರಕ್ಷಕರು.

ರಾಜಧಾನಿಯಲಿ ದೇಶದ ಬೊಕ್ಕಸ ನುಂಗುವವರು
ಶೇರು ಮಾರುಕಟ್ಟೆಯಲಿ
ಹಣಕಾಸಿನ ವ್ಯವಸ್ಥೆಯನು ತಲೆಕೆಳಗು ಮಾಡುವವರು
ಜನಸಾಮಾನ್ಯರ ರಕ್ತ ಹೀರುವ ಜೀರುಂಡೆಗಳು.

ದೇಶದ ತುಂಬೆಲ್ಲ ಉಗ್ರಗಾಮಿಗಳು
ಎಲ್.ಟಿ.ಟಿ. ಪಡೆಯುವರು
ತಮ್ಮನ್ನೇ ಬಲಿಕೊಡಲು ಸಿದ್ಧರಾಗಿರುವರು.
ಕೋಮುಗಲಭೆ ಹುಟ್ಟಿಸುವ ಜಾತಿಮತದ ಭೂತ ಹಿಡಿದವರು.

ಪೇಪರು ತುಂಬ ಕಾಡುಗಳ್ಳರು,
ದಂತ ಚೋರರು, ನರಹಂತಕರು,
ಜನರ ಕದ್ದು ಜೋಳಿಗೆ ತುಂಬುವ ವೀರಪ್ಪನಂತವರು
ಕೈಗೆ ಸಿಗದೆ ನುಸುಳಿ ಹೋಗುವ ಕಳ್ಳ ಸುಳ್ಳರು.

ಇವೆರಲ್ಲರ ಹಿಂದೆ ಇರುತ್ತಾರೆ
ಕೊಟ್ಟುಕೊಂಬುವ ಲೆಕ್ಕ ಬರವ
ಬೆಕ್ಕು ಸಂನ್ಯಾಸಿ ದೇಶಭಕ್ತರು
ಬೀಜಾಸುರನ ಸಂತತಿಯ ರಾಜಕಾರಣಿಗಳು.
ಬೇಲಿಯೆ ಹೊಲವ ಮೇದರೆ
ಹೋಗಲೆಲ್ಲಿ ಜನಸಾಮಾನ್ಯರು?
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...