Home / ಕವನ / ಕವಿತೆ / ಬಾಡಿಗೆ ತಾಯಂದಿರು

ಬಾಡಿಗೆ ತಾಯಂದಿರು

ಸಿಗುತ್ತದೆ ಈ ಪುಣ್ಯಭೂಮಿಯಲಿ
ತಾಯಂದಿರ ಗರ್ಭಗಳು ಬಾಡಿಗೆಗೆ
ತಾಯ್ತನದ ಬಯಕೆಗಳ ಅದುಮಿಟ್ಟು
ದುಡ್ಡು ಕೊಟ್ಟವರಿಗೆ ಹೆತ್ತು ಕೊಡುವರು
ಇಲ್ಲಿ ಬಾಡಿಗೆ ತಾಯಂದಿರು

ಬಸಿರಲಿ ಮೂಡಿದ ಮಗು
ಒದ್ದು ಮೈ ಬದಲಿಸುವ ಚಲನೆ
ತಾಯ್ತನದ ಖುಷಿಯ ಘಳಿಗೆಯಲಿ
ಕಲ್ಲಾಗಿ ಕನಸಿಗೆ ನಿಷೇಧ ಹೇರುವರು.
ಹಿಂಸೆಯ ಶಿಲುಬೆಗೇರುವರು
ಇಲ್ಲಿ ಬಾಡಿಗೆ ತಾಯಂದಿರು.

ಕನಲುವ, ಮಗ್ಗಲು ಬದಲಿಸುವ
ಮುಲುಕುವ, ಹೊಟ್ಟೆಗೆ ಒದೆಯುವ,
ಕಂದನ ಕೈಸರಬೇಕೆಂದರೆ
ಸತ್ತ ಹೃದಯ ತಾಯಿಯವಳು
ಗಂಡನ ಸಾಲ ತೀರಿಸಲು
ಕೇವಲ ಬಾಡಿಗೆ ಗರ್ಭವಾದವಳು.

ಹೆತ್ತ ಕೂಸಿಗೆ ಅವಡುಗಚ್ಚಿ ಕೊಡುವಳು
ಉಕ್ಕಿ ಹರಿವ ಹಾಲಿನ ತೊರೆಯ
ಮನಸು ಕಲ್ಲಾಗಿಸಿ ಆವಿಯಾಗಿಸುವಳು
ಕೊಟ್ಟ ಮಕ್ಕಳ ಮರಳಿ ನೋಡಳು
ಹೊಟ್ಟೆ ಹೊರೆಯಲವಳು
ಸಂತೆಯಲಿ ಗರ್ಬವಿಟ್ಟವಳು

ಅವಳದೆಂತಹ ಹಣೆಬರಹ ನೋಡು
ಹೆತ್ತ ಮಗುವಿಗೆ ಎತ್ತಿ ಮುದ್ದಿಸಲಾರಳು
ತನ್ನದೇ ಕುಡಿ, ತನ್ನಾತ್ಮದ ತುಣುಕನು
ಕರುಳಿಲ್ಲದ ಮಾರುಕಟ್ಟೆಯಲ್ಲಿಟ್ಟು
ಜಾಗತೀಕರಣದ ಹೊಸ ಉದ್ಯಮದಲಿ
ಕೇವಲ ಬಾಡಿಗೆ ತಾಯಾದವಳು.

ಪ್ರಭುವೆ! ಕಣ್ಣಲ್ಲಿ ಕನಸುಗಳ ಕೊಡಬೇಡವೆಂದು
ಕಣ್ಣು ರೆಪ್ಪೆ ಗಟ್ಟಿ ಮುಚ್ಚಿಕೊಳ್ಳುವಳು
ತೇಲಿ ಬರುವ ಕನಸುಗಳಿಗೆ ನಿಷೇಧ ಹೇರುವಳು
ಬಸಿರೋದ್ಯಮದಲಿ ಗರ್ಭ ಮಾರಾಟಕ್ಕಿಡುವಳು
ಮಮತೆಯ ಕತ್ತು ಹಿಸುಕಿದ ಅವಳು,
ಕೇವಲ ಬಾಡಿಗೆ ತಾಯಿಯಾದವಳು.

ದೇವತೆಯೆಂದು ಪೂಜಿಸಿದವರೇ
ಅವಳ ಕ೦ಡು ಇಂದೇಕೆ ನಗುವಿರಿ?
ತಾಯ್ತಾನದ ಘನತೆ ಮಾರಾಟದ ಸರಕಾಗಿಸಿ
ಘನತೆಯ ಬದುಕು ಬೀದಿಪಾಲಾಗಿಸಿ
ಕೇವಲ ಬಾಡಿಗೆ ತಾಯಾಗಿಸಿದಿರಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...