Home / ಕವನ / ಕವಿತೆ / ಅವಳುಂಟು ಅವಳ ರೆಕ್ಕೆಯುಂಟು

ಅವಳುಂಟು ಅವಳ ರೆಕ್ಕೆಯುಂಟು

ಬಾನಂಗಳದಲಿ ಹಾರುವ ಹಕ್ಕಿಗೆ
ಇದೆ ಅದರದೇ ರೆಕ್ಕೆ, ಪುಕ್ಕ, ಕೊಕ್ಕು
ಸ್ವಚ್ಛಂದ ಆಗಸದಲಿ ಗಡಿಗಳಿಲ್ಲದೆ ಲೋಕ
ನಿರ್ಭಂಧಗಳಾಚೆ ತಂಬೆಲರ ತಾಣ.

ಕಟ್ಟು ಕಟ್ಟಳೆ ಲಕ್ಷ್ಮಣರೇಖೆಗಳಾಚೆ
ಬಚ್ಚಿಟ್ಟ ಬೇಗುದಿಗಳ ಗಾಳಿಗೆ ತೂರಿ
ಹಗುರವಾಗುತ್ತಿದ್ದಾಳೆ ಅವಳು
ಇಷ್ಟಿಷ್ಟೇ ಗೋಡೆಗಳ ಲಂಘಿಸುತ್ತಿದ್ದಾಳೆ.

ಕಟ್ಟಿದ್ದ ಹುತ್ತದಲ್ಲಿ ಹಾವಿನ ಸಹವಾಸ,
ಸಾಕಿನ್ನು ಮನೆವಾಸ, ವನವಾಸ,
ಭೂಮಿಪುತ್ರರ ಸಹವಾಸವೂ ಸಾಕು.
ರಾಮ ರಾಜ್ಯದಲ್ಲಿ ಆಜ್ಞೆಪಾಲನೆ ಸಾಕು.

ದುಃಷ್ಯಂತನ ಪ್ರೇಮದುಂಗುರದಲಿ
ನಂಬಿಕೆಯಿಟ್ಟು ನಿರಾಶಳಾಗಿದ್ದು ಸಾಕು,
ಶಾಪಿತ ಅಹಲ್ಯೆ ಕಲ್ಲಾಗುವುದು ಸಾಕು,
ಸೀರೆ ಸೆಳೆಯುವ ಅಪಮಾನ ಸಾಕು ಸಾಕು.

ಬಿರುಮುಡಿಯ ಎತ್ತಿ ಕಟ್ಟಿದ ದೌಪದಿ
ಕಟ್ಟಳೆಗಳ ಮೆಟ್ಟಿ ನಿಂತಿದ್ದಾಳೆ ನೋಡು,
ಲಕ್ಷ್ಮಣ ರೇಖೆಗಳ ದಾಟಿ ಬಂದಿದ್ದಾಳೆ
ಆಕಾಶದಂಗಳಕೆ ಲಗ್ಗೆಯಿಟ್ಟಿದ್ದಾಳೆ.

ಎಲ್ಲ ನಿರ್ಭಂಧಗಳ ಕಿತ್ತೊಗೆದು
ಸೂರ್ಯ ಶಿಕಾರಿಗೆ ಹೊರಟ್ಟಿದ್ದಾಳೆ
ಸ್ವಚ್ಛಂಧ ಆಗಸದಲ್ಲಿ ಹಾರುತ್ತಿದ್ದಾಳೆ
ಮಾನವತೆಯ ಮೇರುಶಿಖರ ಏರುತ್ತಿದ್ದಾಳೆ,
ಏಕೆಂದರೆ ಅವಳುಂಟು ಅವಳ ರೆಕ್ಕೆಯುಂಟು
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...