Home / ಲೇಖನ / ಇತರೆ / ವಚನ ವಿಚಾರ – ಸಂಬಂಧ

ವಚನ ವಿಚಾರ – ಸಂಬಂಧ

ಕೈ ಕೈದ ಹಿಡಿದು ಕಾದುವಾಗ
ಕೈದೊ ಕೈಯೊ ಮನವೊ
ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ
ಅಂಗವೊ ಲಿಂಗವೊ ಆತ್ಮನೊ
ಕಾಲಾಂತ ಭೀಮೇಶ್ವರಲಿಂಗವನರಿದುದು

[ಕೈದ-ಆಯುಧವನ್ನು]

ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ.

ಆಯುಧ ಹಿಡಿದು ಯುದ್ಧಮಾಡುವುದುಂಟಲ್ಲ, ಆಗ ಕಾದುತ್ತಿರುವುದು ಆಯುಧವೋ, ಆಯುಧ ಹಿಡಿದ ಕೈಯೋ, ಅಥವಾ ಮನಸ್ಸೋ? ದೇಹ ಮತ್ತು ದೇವರ ಸಂಬಂಧ ಅನ್ನುವುದುಂಟಲ್ಲ, ಆ ಸಂಬಂಧ ದೇಹದ್ದೋ, ದೇಹದೊಳಗಿನ ಮತ್ತು ದೇಹದ ಮೇಲಿರುವ ಲಿಂಗದ್ದೋ ಅಥವಾ ಆತ್ಮದ್ದೋ?

ಈ ವಚನ ಇರುವ ರೀತಿಯಲ್ಲೇ ವಚನಕಾರನ ನಿಲುವೂ ಸ್ಪಷ್ಟವಾಗಿಯೇ ಇದೆ. ಆಯುಧ ತನ್ನಷ್ಟಕ್ಕೇ ಕಾದಲಾರದು, ಹಿಡಿಯುವ ಕೈ ಬೇಕು; ಮತ್ತೆ ಅದಕ್ಕಿಂತ ಮಿಗಿಲಾಗಿ ಕಾದುವ ಮನಸ್ಸು ಬೇಕು. ಹಾಗೆ ನೋಡಿದರೆ ಯುದ್ಧದಲ್ಲಿ ತೊಡಗುವುದಕ್ಕೆ ಮನಸ್ಸೇ ಮುಖ್ಯ ಕಾರಣ. ಹಾಗೆಯೇ ಅಂಗ, ಲಿಂಗ ಇವೆಲ್ಲಕ್ಕಿಂತ ಒಳಗಿನ ಆತ್ಮ, `ನಾನು’, ಅನ್ನುವುದೇ ಮುಖ್ಯ.

ನಾವು ಕಣ್ಣಿಗೆ ಕಾಣುವ ಸ್ಕೂಲವಾದದ್ದನ್ನು ಮಾತ್ರ ಗಮನಿಸಿ ಸೂಕ್ಷ್ಮವಾದದ್ದನ್ನು ಲೆಕ್ಕಿಸುವುದೇ ಇಲ್ಲ. ಕಾದುವಾಗ ಮತ್ತು ದೇವರನ್ನು ಅರಿಯುವಾಗ ಸ್ಥೂಲವಾಗಿ ಬೇರೆ ಬೇರೆಯಾಗಿ ಕಾಣುವ ಸಂಗತಿಗಳಿಗೆಲ್ಲ ಇರುವ ಬಿಡಿಸಲಾರದ ಸಂಬಂಧವೇ ಮುಖ್ಯ. ಹೀಗೆ ಸಂಬಂಧದ ಸ್ವರೂಪವನ್ನು ಅರಿಯುವುದೇ ಆಧ್ಯಾತ್ಮ ಎಂದು ಡಕ್ಕೆಯ ಬೊಮ್ಮಣ್ಣ ಹೇಳುತ್ತಿರುವಂತಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...