Home / ಲೇಖನ / ಇತರೆ / ವಚನ ವಿಚಾರ – ಊರ್ವಶಿ ಮತ್ತು ಹಂದಿ

ವಚನ ವಿಚಾರ – ಊರ್ವಶಿ ಮತ್ತು ಹಂದಿ

ಊರ್ವಸಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರಲ್ಲದೆ
ಹಂದಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರೆ
ಹುಡು ಹುಡು ಎಂದಟ್ಟುವರಲ್ಲದೆ
ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರಲ್ಲದೆ
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರೆ
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ ಆ ಹಂದಿಗಿಂತ ಕರಕಷ್ಟ
ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ

ಮೋಳಿಗೆ ಮಾರಯ್ಯನ ಹೆಂಡತಿ ಮೋಳಿಗೆ ಮಹಾದೇವಿಯ ವಚನ ಇದು. ಪಚ್ಚಕರ್ಪೂರವು ಸುಗಂಧಭರಿತ ನಿಜ. ಊರ್ವಶಿ ಕರ್ಪೂರವನ್ನು ಮೆದ್ದು ಮುದ್ದುಕೊಟ್ಟರೆ ರುಚಿ, ಅದೇ ಹಂದಿ ಕರ್ಪೂರವನ್ನು ಮೆದ್ದು ಮುತ್ತುಕೊಟ್ಟರೆ ಅಸಹ್ಯ. ವಚನಗಳೇನೋ ದೊಡ್ಡ ಮಾತುಗಳು ನಿಜ. ಆದರೆ ನಡೆ, ನುಡಿಗಳಲ್ಲಿ ಪಕ್ವವಾದವರು ಅವನ್ನು ಓದಿ, ಹೇಳಿದರೆ ಹಿತ, ಹಾಗಲ್ಲದವರು ಹೇಳಿದರೆ ಹಂದಿಗಿಂತ ಅಸಹ್ಯ ಈ ಮಾತನ್ನು ಓದುಗರ ಜವಾಬ್ದಾರಿ ಎಂದೂ ವಿವರಿಸಿಕೊಳ್ಳಬಹುದು. ಕನ್ನಡವನ್ನು ಓದಲು ಬಂದ ಮಾತ್ರಕ್ಕೆ ಕನ್ನಡದಲ್ಲಿ ಬರೆದಿರುವುದೆಲ್ಲಾ ಅರ್ಥವಾಗಬೇಕೆಂದಿಲ್ಲ. ಓದುಗರ ಮನಸ್ಸೂ ಪಕ್ವವಾಗಿದ್ದಾಗ ಓದಿದ್ದಕ್ಕೆ ಹೊಸ ಅರ್ಥ ಹೊಳೆದು ಅದನ್ನು ಅವರು ಹೇಳಿದರೆ ಕೇಳುವವರಿಗೂ ಊರ್ವಶಿಯ ಚುಂಬನದಂತೆ ಹಿತವಾಗಿರುತ್ತದೆ.

ನಮ್ಮ ಕಾಲದ ದುರಂತವೆಂದರೆ ಯಾರು ಏನೇ ಹೇಳಿದರೂ ಓದುಗರಿಗೆ ಯಾವ ಜವಾಬ್ದಾರಿಯೂ ಇಲ್ಲ, ಅರ್ಥವತ್ತಾಗಿ ಹೇಳುವುದು ಲೇಖಕರ, ಮಾತನಾಡುವವರ ಜವಾಬ್ದಾರಿ ಎಂದು ಭ್ರಮಿಸಿರುವುದು. ಕೇಳಿದ ಓದಿದ ಮಾತಿನ ಬಗ್ಗೆ ಕಟು ಟಿಪ್ಪಣಿ ಮಾಡುವ ಮೊದಲು ಓದುಗರು ತಾವು ಊರ್ವಶಿಯಂಥವರೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದೇನೋ! ತೀರ ಇಷ್ಟು ಸಂಕುಚಿತ ಅರ್ಥದಲ್ಲಿ ಅಲ್ಲದಿದ್ದರೂ ಸ್ವೀಕರಿಸುವವರ ಯೋಗ್ಯತೆಯನ್ನು ಈ ವಚನ ಎತ್ತಿ ಹೇಳುತ್ತಿರುವುದು ಗಮನಾರ್ಹವೆಂದೇ ತೋರುತ್ತದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ