Home / ಲೇಖನ / ಇತರೆ / ವಚನ ವಿಚಾರ – ಸುಮ್ಮನೆ ದುಃಖ

ವಚನ ವಿಚಾರ – ಸುಮ್ಮನೆ ದುಃಖ

ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು
ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು
ಇದಾರಕ್ಕೆ ಆರಕ್ಕೆ
ಇದೇನಕ್ಕೆ ಏನಕ್ಕೆ
ಮಾಯದ ಬೇಳುವೆ ಹುರುಳಿಲ್ಲ
ಕೊಂದು ಕೂಗಿತ್ತು ನೋಡಾ ಗುಹೇಶ್ವರ

[ಆರಕ್ಕೆ-ಬೇಳುವೆ, ಆಶ್ಚರ್ಯ, ಗೊಂದಲ, ಮರುಳು]

ಅಲ್ಲಮನ ವಚನ. ಯಾರಿಗೋ ಸಂಪತ್ತು ಬಂದರೆ ಯಾರೋ ಯಾತಕ್ಕೋ ಚಿಂತಿಸುತ್ತಾರೆ. ಯಾರಿಗೋ ಬಡತನ ಬಂದರೆ ಯಾಕೋ ಸುಮ್ಮನೆ ಮರುಗುತ್ತಾರೆ. ಇದು ಯಾಕೆ, ಇದು ಏಕೆ, ಇದೇ ಮಾಯೆ. ಎಲ್ಲರನ್ನೂ ಕಾಡಿಸುವ ಮಾಯೆ. ಜಗತ್ತಿನ ಅತಿ ಶ್ರೀಮಂತರ ಬಗ್ಗೆ ತಿಳಿಯುವ ಅಸೆ, ಅವರನ್ನು ಕುರಿತು ಕಾಮೆಂಟ್ ಮಾಡುವ ಚಪಲ. ಯಾರಿಗೋ ದುಃಖ ಒದಗಿದರೆ ಅವರಿಗಾಗಿ ಅಯ್ಯೋ ಅನ್ನುತ್ತಿದ್ದೇವೆ ನಾವು ಎಂಬುದು ಎಲ್ಲರಿಗೂ ತಿಳಿಯಲಿ ಎಂಬ ಚಪಲ. ಇತರರ ಶ್ರೀಮಂತಿಕೆ, ಇತರರ ದುಃಖ ಇವುಗಳೇ ನಮ್ಮ ಮನಸ್ಸಿನ ಲೋಕದ ಬಹುಪಾಲು ತುಂಬಿಕೊಂಡಿರುವುದೇ ಒಂದು ವಿಚಿತ್ರ. ಹಾಗಾಗಬಾರದಿತ್ತು ಅಯ್ಯೋ ಅನ್ನುವ ಸಹಾನುಭೂತಿಗೆ ಅರ್ಥವಿಲ್ಲ. ಹಾಗೆಯೇ ಇನ್ನೊಬ್ಬರ ಹಿರಿಮೆ ಕಂಡು ಕೊಂಡಾಡುವುದೋ ಕರುಬುವುದೋ, ಅದಕ್ಕೂ ಅರ್ಥವಿಲ್ಲ. ಆದರೆ ಈ ಅರ್ಥವಿಲ್ಲದ ಚಿಂತೆಗಳೇ ನಮ್ಮನ್ನು ಆಕ್ರಮಿಸಿಕೊಳ್ಳುವುದೇಕೆ?

ಅಲ್ಲಮನಂತೆಯೇ ಬಸವ ಕೂಡ “ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮ” ಎಂದಿರುವುದುಂಟು. ನಾವು ಯಾವುದನ್ನು ತೀರ ಸರಳವಾಗಿ ಮರುಕ ಮತ್ತು ಸಂತೋಷ ಅನ್ನುತ್ತೇವೋ ಅವೆಲ್ಲ ಎಷ್ಟು ಅರ್ಥಹೀನ ಅನ್ನುವುದನ್ನು ಈ ವಚನ ಹೇಳುತ್ತಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...