Home / ಲೇಖನ / ವಿಜ್ಞಾನ / ವೈದ್ಯಕೀಯ ಬರಹಗಳ ಅಕ್ಷಯ ಬಂಢಾರ

ವೈದ್ಯಕೀಯ ಬರಹಗಳ ಅಕ್ಷಯ ಬಂಢಾರ

ಇಂದು ಜಗತ್ತಿನಾದ್ಯಂತ ಪ್ರತಿವರ್ಷ ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದ ಸು. ೨೦ ಲಕ್ಷ ಬರಹಗಳು ನಾನಾ ವೈದ್ಯಕೀಯ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ವೈದ್ಯರು ಮತ್ತು ಆಸ್ಪತ್ರೆಗಳು ವೈದ್ಯಕೀಯಕ್ಕೆ ಸಂಬಂಧಪಟ್ಟ ಬರಹಗಳ ಬಗ್ಗೆ ವಿವರವಾದ ಮಾಹಿತಿ ಯಾವುದೇ ಸಮಯದಲ್ಲಿ ದೊರೆಯುವಂತಾಗಲು ಕಂಪ್ಯೂಟರ್‌ನ ಮೊರೆ ಹೋಗಬೇಕಿತ್ತು. ೧೯೬೪ರಲ್ಲಿ ಕಂಪ್ಯೂಟರ್‌ವೊಂದನ್ನು ವೈದ್ಯಕೀಯಕ್ಕೆ ಸಹಾಯಕರ ರೂಪದಲ್ಲಿ ಬಳೆಸಲಾಯಿತು. ಇದಕ್ಕಾಗಿಯೇ ‘ಇಂಡೆಕ್ಸ್ ಮೆಡಿಕಸ್’, ಎಂಬ ಸಾಪ್ಟವೇರ್‌ಅನ್ನು ಸಿದ್ದಪಡಿಸಲಾಯಿತು. ಈ ಸಾಫ್ಟ್‌ವೇರ್ ಅನ್ನು ವೈದ್ಯಕೀಯ ಬರಹಗಳ ವಿಷಯಗಳ ಆಧಾರದ ಮೇಲೆ ಪಟ್ಟಿ ಮಾಡಲಾಯಿತು. ನಂತರದ ದಿನಗಳಲ್ಲಿ ಸುಧಾರಣೆಯನ್ನು ಪಡೆದ ಈ ಸಾಫ್ಟ್‌ವೇರ್ ಬರಹಗಳ ಪಟ್ಟಿಯ ಜೊತೆಗೆ ಪ್ರತಿಬರಹದ ವಿವರಗಳ ಸಂಪೂರ್ಣ ಮಾಹಿತಿ ನೀಡು ವಂತಾಯಿತು. ಸಾಫ್ಟ್‌ವೇರ್ ನಲ್ಲಾದ ಸುಧಾರಣೆಯೊಂದಿಗೆ ಅದರ ಹೆಸರೂ ಬದಲಾವಣೆ ಕಂಡು ಇಂಡೆಕ್ಸ್ ಮೆಡಿಕಸ್ನಿಂದ “ಮೆಡಾಲಾರ್ಸ್” ಎಂದಾಯಿತು. Medalars ಎಂಬುವುದು Medical Literature and Analysis and Retrieval System ಎಂಬುದರ ಸಂಕ್ಷಿಪ್ತರೂಪ.

೧೯೭೦ರ ನಂತರ ಮೆಡಾಲಾರ್ಸ್‌ನ ಉಪಯೋಗ ಜಗತ್ತಿನ ಯಾವುದೇ ಭಾಗದಲ್ಲಿ ಕುಳಿತು ಕಂಪ್ಯೂಟರನ ಮೇಲೆ ಕೇಬಲ್‌ಗಳ ಮೂಲಕ ಸಂಪರ್ಕಿಸಿ ಪಡೆಯುವಂತಾಗಲು ‘ಮೆಡೆಲೈನ್’ ಎಂಬ ಅಂತರರಾಷ್ಟ್ರೀಯ ಸೇವಾ ಜಾಲ ಪ್ರಾರಂಭವಾಯಿತು. ಇಂದು ಪ್ರಂಪಚದಾದ್ಯಂತ ವೈದ್ಯರು ತಮ್ಮ‌ಇಚ್ಚಾನುಸಾರ ಬೇಕಾದ ಬರಹಗಳನ್ನು ಈ ಕಂಪ್ಯೂಟರ್ ಯುಕ್ತ ವೈದ್ಯಕೀಯ ಬರಹಗಳ ಬಂಡಾರದಿಂದ ಹೆಕ್ಕಿ ತೆಗೆದು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವಂತಾಗಿದೆ. ಸು. ೩೪೦೦ ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ವೈದ್ಯಕೀಯ ವಿಷಯಗಳು ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ ಸು. ೫೦ ಲಕ್ಷ ಕ್ಕೂ ಹೆಚ್ಚು ಬರಹಗಳು (ಎಲ್ಲ ವಿವರಗಳೊಂದಿಗೆ) ಈ ಬರಹಗಳ ಬಂಡಾರದಲ್ಲಿ ಲಭ್ಯವಾಗುತ್ತವೆ, ಇದೊಂದು ವೈದ್ಯಕೀಯ ‘ವಿಶ್ವಕೋಶ’ವೆಂದೇ ಹೇಳಬಹುದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...