Home / ಲೇಖನ / ಇತರೆ / ವಚನ ವಿಚಾರ – ಇದು ಇದ್ದರೆ ಅದು

ವಚನ ವಿಚಾರ – ಇದು ಇದ್ದರೆ ಅದು

ಅಂಬುವಿಲ್ಲದಿರ್‍ದಡೆ ಅಂಬುಜವನಾರು ಬಲ್ಲರು
ನೀರಿಲ್ಲದಿರ್‍ದಡೆ ಹಾಲನಾರು ಬಲ್ಲರು
ನಾನಿಲ್ಲದಿರ್‍ದಡೆ ನಿನ್ನನಾರು ಬಲ್ಲರು
ನಿನಗೆ ನಾ
ನನಗೆ ನೀ
ನಿನಗೂ ನನಗೂ ಬೇರೊಂದು ನಿಜವುಂಟೆ
ನಿಃಕಳಂಕ ಮಲ್ಲಿಕಾರ್‍ಜುನಾ

[ಅಂಬು-ನೀರು, ಅಂಬುಜ-ತಾವರೆ, ನೀರಿಲ್ಲದಿರ್‍ದಡೆ-ನೀರಿಲ್ಲದಿದ್ದರೆ]

ಇದು ಮೋಳಿಗೆ ಮಾರಯ್ಯನ ವಚನ. ಅರ್‍ಥ ಅನ್ನುವುದು ಇರುವುದು ದ್ವಂದ್ವಗಳಲ್ಲೇ. ವ್ಯತ್ಯಾಸಗಳೇ ಇರದಿದ್ದರೆ ಅರ್ಥವೂ ಇಲ್ಲ, ಬೇಕಾಗಿಲ್ಲ.

ಅಂಬು ಇರದಿದ್ದರೆ ಅಂಬುಜ ಯಾರಿಗೆ ಗೊತ್ತಾಗುತ್ತದೆ? ಹೇಗೆ ಇರುತ್ತದೆ? ನೀರು ಇರುವುದರಿಂದಲೇ ಹಾಲು ಅನ್ನುವ ಪದಾರ್‍ಥಕ್ಕೆ ಅರ್‍ಥ ಮತ್ತು ಬೆಲೆ. ನಾನೇ ಇರದಿದ್ದರೆ ನೀನು ಅನ್ನುವುದಕ್ಕೆ ಅರ್‍ಥವೆಲ್ಲಿ? ನಾನು ಇರದಿದ್ದರೆ ನಿನ್ನನ್ನು ಅರ್‍ಥಮಾಡಿಕೊಳ್ಳುವವರಾದರೂ ಯಾರು? ‘ನಾನು’ ಅನ್ನುವುದು ಇರುವುದರಿಂದಲೇ ‘ನೀನು’ ಅನ್ನುವುದಕ್ಕೆ ಅರ್‍ಥ. ನಿಜ. ಆದರೆ ಈ ಎಲ್ಲ ಇಮ್ಮೈ ದ್ವಂದ್ವಗಳಿಗೂ ಇರುವ ನಿಜ ಮಾತ್ರ ಒಂದೇ.

ನನಗೂ ನಿನಗೂ ಬೇರೊಂದು ನಿಜವುಂಟೆ ಎಂದು ದೇವರನ್ನು ಕೇಳುತ್ತಾನೆ. ನನ್ನ ಸತ್ಯ ಬೇರೆ, ನಿನ್ನ ಸತ್ಯ ಬೇರೆ ಅನ್ನುವುದು ನಿಜವಲ್ಲ. ಸತ್ಯ ಅನ್ನುವುದು ಒಂದೇ, ಎರಡೆಂಬಂತೆ ಕಾಣುವ ದ್ವಂದ್ವಗಳೆಲ್ಲಕ್ಕೂ ಸತ್ಯವೇ ಆಧಾರ. ಅದನ್ನು ಹೇಳುವುದಲ್ಲ ಕಾಣಲು ಸಾಧ್ಯವಾಗಬೇಕು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...