ಪದವಾಗುವ ಪ್ರೀತಿ

ಕಾಡುತ್ತಿವೆ ರಾತ್ರಿಗಳು
ಹಗಲು ಕಟ್ಟಿದ ಇರುಳ ಕೋಟೆ
ಒಳಗೆ ಒಂದೇ ಸಮ ಕತ್ತಿವರಸೆ
ಪ್ರಾಣ ಹೋಗದ ಸಾವುಗಳು
ಸದ್ದು ಮಾಡದ ನೋವುಗಳ.

ಕತ್ತಲ ಸೋನೆ ಚರಿತ್ರೆಯಲ್ಲಿ
ತೋಯ್ದ ಮೆದುಳ ನೆಲದಲ್ಲಿ
ಮನಸ್ಸಿನ ಬೀಜ ಬಿರಿದು
ತಿಕ್ಕಾಟವಾಗುತ್ತಲೇ ತೆಕ್ಕೆಯಾಗುವ ರೀತಿ
ಪರದಾಡುತ್ತಲೇ ಪದವಾಗುವ ಪ್ರೀತಿ!

ಉರಿವ ಒಲೆ ಮೇಲೆ ತಲೆ ಬಾಣಲೆ
ಕೊತ ಕೊತ ಕುದಿಯಲ್ಲಿ ಎದ್ದು ಬಿದ್ದೇಳುವ ಎದೆ
ಹೆಚ್ಚಾದರೆ ಸೀದ ವಾಸನೆ ಕಚ್ಚುತ್ತದೆ
ಕಮ್ಮಿಯಾದರೆ ಅರೆ ಬರೆ ಹಸಿ-
ವು ಹೆಚ್ಚುತ್ತದೆ.

ಈ ವೈಪರೀತ್ಯದ ಉರಿ ಗಾಯ ಕಾಣುವುದಿಲ್ಲ
ಮೋಡ ಮುಚ್ಚಿದ ಬೆಳಕು ನೋವು ನಿಲ್ಲುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಬಯಿ ಮತ್ತು ವ್ಯಾಸರಾಯ ಬಲ್ಲಾಳ – ‘ಉತ್ತರಾಯಣ’ದ ಮೂಲಕ
Next post ಸಂಸಾರವೆಂಬ ಸಾಗರದಲ್ಲಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…