Home / ಕವನ / ಕವಿತೆ / ಶ್ರಾವಣ ಬಂತೆಂದರೆ

ಶ್ರಾವಣ ಬಂತೆಂದರೆ

ಶ್ರಾವಣ ಮಾಸ ಬಂತೆಂದರೆ
ಸಿಗದು ಉಪಾಹಾರ ಜಳಕವಿಲ್ಲದೆ
ಎರಡು ದಿನಕ್ಕೊಮ್ಮೆ ಮಾಡುತ್ತಿದ್ದ ಜಳಕ
ನೀರಿಲ್ಲದಿದ್ದರೂ ಈಗ ದಿನವೂ ಜಳಕ

ದೇವರ ಪೂಜೆ ಮಾಡದಿದ್ದ ನಾನು
ಅವರ ಮೈ ತೊಳೆಯುವುದೀಗ ನನ್ನ ಸರದಿ

ಶ್ರಾವಣ ನೆಪದಲ್ಲಾದರೂ ಎಚ್ಚರಿಸುವಳು
ಮಾಡದ ತಪ್ಪಿಗೆ ಮನ್ನಿಸೆಂದು
ದೇವರಲ್ಲಿ ಬೇಡಿಕೊಳ್ಳಿ ಎಂದು

ಇಷ್ಟವಿಲ್ಲದಿದ್ದರೂ ಸಂಜೆ
ಬಿಡದೇ ಕರೆದೊಯ್ಯುವಳು ನನ್ನ
ದೇವಸ್ಥಾನಕೆ ಜೊತೆಯಲಿ

ಮುಗಿದರೂ ಶ್ರಾವಣ ಮಾಸ
ದೇವರಿಗೆ ಮಾಡಿಸುವಳು ಅಭಿಷೇಕ
ನನಗೆ ಮಾತ್ರ ನಿತ್ಯ ಅಭಿಷೇಕ
ಮಾಡಿ ದೇವರಿಗೆ ಪೂಜೆ ಎಂದು

ಶ್ರಾವಣ ಕಳೆಯುವ ತನಕ
ನಾನು ಪಕ್ಕಾ ಬ್ರಹ್ಮಚಾರಿ ಗೊತ್ತಾ!

ಆದರೂ
ಬಂತೆಂದರೆ ಶ್ರಾವಣ
ನನಗದೇನೋ ಸಂಭ್ರಮ ಮಹದಾನಂದ

ಮಾಡುವಳು ರುಚಿ ರುಚಿ ಅಡುಗೆ
ಬಗೆ ಬಗೆ ತಿಂಡಿ ತಿನಿಸು
ಕಡುಬು ಪಾಯಸ ಖೀರು ಕೋಸುಂಬರಿ
ನಾ ತಿನ್ನುವೆ ಚಪ್ಪರಿಸಿ

ಕೈ ಬಳೆ ಸದ್ದಿನಲಿ ಮಾಡಿದಡುಗೆ
ಘಮ-ಘಮಿಸುತಲಿ
ಅದೇನೋ ಪರಿಮಳದಾಕರ್ಷಣೆ ಅದರಲಿ

ಓರೆಗಣ್ಣಿನಲಿ ನೋಡುತ ಪ್ರೀತಿಯಲಿ
ಬಡಿಸಿದರೆ ಪಾಯಸದ ರುಚಿ ಸಿಗದು ಬೇರೆಲ್ಲೂ

ಅವಳ ನಡಿಗೆಯ ಗೆಜ್ಜೆಯ ಸಪ್ಪಳದಲಿ
ಸಿರಿಲಕ್ಷ್ಮಿ ಇಲ್ಲೆಂದೆನಿಸದಿರದು ಮನೆಯಲಿ

ನನಗದು ಕೋಟಿ ರುಪಾಯಿಗೂ ಮಿಗಿಲು
*****
೫-೯-೨೦೧೦ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...