Home / ಕವನ / ಕವಿತೆ / ಶ್ರಾವಣ ಬಂತೆಂದರೆ

ಶ್ರಾವಣ ಬಂತೆಂದರೆ

ಶ್ರಾವಣ ಮಾಸ ಬಂತೆಂದರೆ
ಸಿಗದು ಉಪಾಹಾರ ಜಳಕವಿಲ್ಲದೆ
ಎರಡು ದಿನಕ್ಕೊಮ್ಮೆ ಮಾಡುತ್ತಿದ್ದ ಜಳಕ
ನೀರಿಲ್ಲದಿದ್ದರೂ ಈಗ ದಿನವೂ ಜಳಕ

ದೇವರ ಪೂಜೆ ಮಾಡದಿದ್ದ ನಾನು
ಅವರ ಮೈ ತೊಳೆಯುವುದೀಗ ನನ್ನ ಸರದಿ

ಶ್ರಾವಣ ನೆಪದಲ್ಲಾದರೂ ಎಚ್ಚರಿಸುವಳು
ಮಾಡದ ತಪ್ಪಿಗೆ ಮನ್ನಿಸೆಂದು
ದೇವರಲ್ಲಿ ಬೇಡಿಕೊಳ್ಳಿ ಎಂದು

ಇಷ್ಟವಿಲ್ಲದಿದ್ದರೂ ಸಂಜೆ
ಬಿಡದೇ ಕರೆದೊಯ್ಯುವಳು ನನ್ನ
ದೇವಸ್ಥಾನಕೆ ಜೊತೆಯಲಿ

ಮುಗಿದರೂ ಶ್ರಾವಣ ಮಾಸ
ದೇವರಿಗೆ ಮಾಡಿಸುವಳು ಅಭಿಷೇಕ
ನನಗೆ ಮಾತ್ರ ನಿತ್ಯ ಅಭಿಷೇಕ
ಮಾಡಿ ದೇವರಿಗೆ ಪೂಜೆ ಎಂದು

ಶ್ರಾವಣ ಕಳೆಯುವ ತನಕ
ನಾನು ಪಕ್ಕಾ ಬ್ರಹ್ಮಚಾರಿ ಗೊತ್ತಾ!

ಆದರೂ
ಬಂತೆಂದರೆ ಶ್ರಾವಣ
ನನಗದೇನೋ ಸಂಭ್ರಮ ಮಹದಾನಂದ

ಮಾಡುವಳು ರುಚಿ ರುಚಿ ಅಡುಗೆ
ಬಗೆ ಬಗೆ ತಿಂಡಿ ತಿನಿಸು
ಕಡುಬು ಪಾಯಸ ಖೀರು ಕೋಸುಂಬರಿ
ನಾ ತಿನ್ನುವೆ ಚಪ್ಪರಿಸಿ

ಕೈ ಬಳೆ ಸದ್ದಿನಲಿ ಮಾಡಿದಡುಗೆ
ಘಮ-ಘಮಿಸುತಲಿ
ಅದೇನೋ ಪರಿಮಳದಾಕರ್ಷಣೆ ಅದರಲಿ

ಓರೆಗಣ್ಣಿನಲಿ ನೋಡುತ ಪ್ರೀತಿಯಲಿ
ಬಡಿಸಿದರೆ ಪಾಯಸದ ರುಚಿ ಸಿಗದು ಬೇರೆಲ್ಲೂ

ಅವಳ ನಡಿಗೆಯ ಗೆಜ್ಜೆಯ ಸಪ್ಪಳದಲಿ
ಸಿರಿಲಕ್ಷ್ಮಿ ಇಲ್ಲೆಂದೆನಿಸದಿರದು ಮನೆಯಲಿ

ನನಗದು ಕೋಟಿ ರುಪಾಯಿಗೂ ಮಿಗಿಲು
*****
೫-೯-೨೦೧೦ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...