Home / ಕವನ / ಕವಿತೆ / ಬೆವರುಗಳ್ಳರು

ಬೆವರುಗಳ್ಳರು

ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ.
ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ.
ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ.

ಬೆವರದಿದ್ದರೆ-
ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು
ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದು
ಮನಕ್ಕೆ ಆನಂದ ಸಿಗಲಾರದು

ಈ ಬೆವರ ಹನಿಗಳು ಅಡೆತಡೆಯಿಲ್ಲದೆ
ಹರಿದು ತಾವು ನಡೆದಾಡುವ ನೆಲವ ನೆನೆಸಿ
ತಂಪುಗೊಳಿಸಿ ಫಲವು ಫಲಿಸಿ
ಮತ್ತೊಬ್ಬರ ಮನವ ತಣಿಸುತಿರೆ….

ಇನ್ನು ಕೆಲವರಲ್ಲಿ ಹೊರ ಬರದ ಬೆವರು
ಒಳಗೊಳಗೆ ಹೆಪ್ಪು ಗಟ್ಟಿ ಮಲಗಿರಲು
ಇಂತಹವರು ಬದುಕನ್ನು
ತಮ್ಮ ಬೆವರಿನಲ್ಲಿ ತೇಲಿಸಲಾರರು
ಬೇರೆಯವರ ಬೆವರಿನಲ್ಲಿ ಅಟ್ಟಹಾಸದಿಂದ
ಕೇಕೆ ಹಾಕಿ ಕುಣಿಯುತ್ತಾರೆ ಬದುಕುತ್ತಾರೆ ಕೂಡ

ಈ ದೇಹದಲ್ಲಿ ರಕ್ತ ಬೆವರು ಬೇರೆ ಬೇರೆ
ಶುದ್ಧ ರಕ್ತಕೆ ಸುರಿಯಲೇಬೇಕು ಬೆವರು ಹೊರಗೆ
ಎಷ್ಟೋ ಜನ ಗುಲಾಮರು ಕೂಲಿ ಕಾರ್ಮಿಕರು ರೈತರು
ಬೆವರುವುದೇ ಬದುಕೆಂದು ತಿಳಿದು
ಅದರಲ್ಲೇ ಹೂತು ಹೋಗಿದ್ದಾರೆ

ಒಂದು ಚೂರು ಬೆವರದ ದೇವರು
ಬ್ರಹ್ಮಜ್ಞಾನಿಗಳೂ ಏಸಿ ರೂಮಿನಲ್ಲಿ ಕುಳಿತವರು
ರಾಜಕೀಯ ಮಂದಿಗಳಿಗೇನು ತಿಳಿದೀತು
ಬೆವರ ಮಹಿಮೆ ಬೆವರ ಬೆಲೆ

ಬೆವರ ಸುರಿಸದವರು ಸೃಷ್ಟಿಸಿದ ಧರ್ಮಗ್ರಂಥಗಳು
ಬೆವರ ಹನಿಗಳಿಗೆ ನೇಣಾದವು ಕುಣಿಕೆಯಾದವು
ಅನ್ನ ಸೃಷ್ಟಿಸುವ ಸದಾಕಾಲ ದುಡಿಯುವ ದೇಹಗಳು
ಗಮ್ಮೆಂದು ಸುರಿಸುವ ಬೆವರು
ಅಮೃತಕೆ ಸಮಾನ

ದುಡಿತದ ಬೆವರಿನಲಿ ವಿದ್ಯುತ್‌ ಸಂಚಾರವಿದೆ
ನಿರಂಕುಶ ಮನವಿದೆ ದಣಿವಿದೆ ರುಚಿಯಿದೆ
ಹೊಸದಿಟ್ಟ ಹೆಜ್ಜೆಯಿದೆ ಹೊಸ ಹುರುಪಿದೆ
ಹಾಡುಗಳಿವೆ ದನಿಯಿದೆ ಹೊಸ ಬೆಳಕಿದೆ
ಬೆವರಿಂದಲೇ ಹುಟ್ಟಿದವು ವಿವಿಧ ಹೋರಾಟಗಳು

ಶತಶತಮಾನಗಳಿಂದ
ವೈಭವದಿಂದ ಉಣ್ಣುತ್ತಾ ಢೇಕರಿಸುತ್ತಾ ಬಂದವರ
ಬೆವರೇ ನಿಜ ಬೆವರೆಂದು ನಂಬಿಸಿ
ಮತ್ತೊಬ್ಬರ ಸಮಾಧಿ ಮೇಲೆ
ಸೌಧ ಕಟ್ಟುವವರೇ ಹೆಚ್ಚು

ಏಸಿ ರೂಮಿನಲಿ ಕುಳಿತ ಇವರು
ತಮ್ಮ ಬೆವರಿನ ಜಲ ರಂದ್ರಗಳಿಗೆ
ವಿವಿಧ ಬಗೆಯ ಅತ್ತರು ಲೋಶನ್‌ಗಳು
ಸೆಂಟ್‌ಗಳನ್ನು ಜಡೆದು ತುಂಬಿ
ಬೆವರ ಬೆಲೆ ಕಳೆದವರು

ಬೆವರ ಪರಂಪರೆಗೆ ಕಿಚ್ಚು ಇಟ್ಟವರು
ಇವರು ಬೆವರುಗಳ್ಳರು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ