Home / ಕವನ / ಕವಿತೆ / ಬೆವರುಗಳ್ಳರು

ಬೆವರುಗಳ್ಳರು

ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ.
ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ.
ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ.

ಬೆವರದಿದ್ದರೆ-
ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು
ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದು
ಮನಕ್ಕೆ ಆನಂದ ಸಿಗಲಾರದು

ಈ ಬೆವರ ಹನಿಗಳು ಅಡೆತಡೆಯಿಲ್ಲದೆ
ಹರಿದು ತಾವು ನಡೆದಾಡುವ ನೆಲವ ನೆನೆಸಿ
ತಂಪುಗೊಳಿಸಿ ಫಲವು ಫಲಿಸಿ
ಮತ್ತೊಬ್ಬರ ಮನವ ತಣಿಸುತಿರೆ….

ಇನ್ನು ಕೆಲವರಲ್ಲಿ ಹೊರ ಬರದ ಬೆವರು
ಒಳಗೊಳಗೆ ಹೆಪ್ಪು ಗಟ್ಟಿ ಮಲಗಿರಲು
ಇಂತಹವರು ಬದುಕನ್ನು
ತಮ್ಮ ಬೆವರಿನಲ್ಲಿ ತೇಲಿಸಲಾರರು
ಬೇರೆಯವರ ಬೆವರಿನಲ್ಲಿ ಅಟ್ಟಹಾಸದಿಂದ
ಕೇಕೆ ಹಾಕಿ ಕುಣಿಯುತ್ತಾರೆ ಬದುಕುತ್ತಾರೆ ಕೂಡ

ಈ ದೇಹದಲ್ಲಿ ರಕ್ತ ಬೆವರು ಬೇರೆ ಬೇರೆ
ಶುದ್ಧ ರಕ್ತಕೆ ಸುರಿಯಲೇಬೇಕು ಬೆವರು ಹೊರಗೆ
ಎಷ್ಟೋ ಜನ ಗುಲಾಮರು ಕೂಲಿ ಕಾರ್ಮಿಕರು ರೈತರು
ಬೆವರುವುದೇ ಬದುಕೆಂದು ತಿಳಿದು
ಅದರಲ್ಲೇ ಹೂತು ಹೋಗಿದ್ದಾರೆ

ಒಂದು ಚೂರು ಬೆವರದ ದೇವರು
ಬ್ರಹ್ಮಜ್ಞಾನಿಗಳೂ ಏಸಿ ರೂಮಿನಲ್ಲಿ ಕುಳಿತವರು
ರಾಜಕೀಯ ಮಂದಿಗಳಿಗೇನು ತಿಳಿದೀತು
ಬೆವರ ಮಹಿಮೆ ಬೆವರ ಬೆಲೆ

ಬೆವರ ಸುರಿಸದವರು ಸೃಷ್ಟಿಸಿದ ಧರ್ಮಗ್ರಂಥಗಳು
ಬೆವರ ಹನಿಗಳಿಗೆ ನೇಣಾದವು ಕುಣಿಕೆಯಾದವು
ಅನ್ನ ಸೃಷ್ಟಿಸುವ ಸದಾಕಾಲ ದುಡಿಯುವ ದೇಹಗಳು
ಗಮ್ಮೆಂದು ಸುರಿಸುವ ಬೆವರು
ಅಮೃತಕೆ ಸಮಾನ

ದುಡಿತದ ಬೆವರಿನಲಿ ವಿದ್ಯುತ್‌ ಸಂಚಾರವಿದೆ
ನಿರಂಕುಶ ಮನವಿದೆ ದಣಿವಿದೆ ರುಚಿಯಿದೆ
ಹೊಸದಿಟ್ಟ ಹೆಜ್ಜೆಯಿದೆ ಹೊಸ ಹುರುಪಿದೆ
ಹಾಡುಗಳಿವೆ ದನಿಯಿದೆ ಹೊಸ ಬೆಳಕಿದೆ
ಬೆವರಿಂದಲೇ ಹುಟ್ಟಿದವು ವಿವಿಧ ಹೋರಾಟಗಳು

ಶತಶತಮಾನಗಳಿಂದ
ವೈಭವದಿಂದ ಉಣ್ಣುತ್ತಾ ಢೇಕರಿಸುತ್ತಾ ಬಂದವರ
ಬೆವರೇ ನಿಜ ಬೆವರೆಂದು ನಂಬಿಸಿ
ಮತ್ತೊಬ್ಬರ ಸಮಾಧಿ ಮೇಲೆ
ಸೌಧ ಕಟ್ಟುವವರೇ ಹೆಚ್ಚು

ಏಸಿ ರೂಮಿನಲಿ ಕುಳಿತ ಇವರು
ತಮ್ಮ ಬೆವರಿನ ಜಲ ರಂದ್ರಗಳಿಗೆ
ವಿವಿಧ ಬಗೆಯ ಅತ್ತರು ಲೋಶನ್‌ಗಳು
ಸೆಂಟ್‌ಗಳನ್ನು ಜಡೆದು ತುಂಬಿ
ಬೆವರ ಬೆಲೆ ಕಳೆದವರು

ಬೆವರ ಪರಂಪರೆಗೆ ಕಿಚ್ಚು ಇಟ್ಟವರು
ಇವರು ಬೆವರುಗಳ್ಳರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...