ಅಗಲಿದ ಗೆಳೆಯನಿಗೊಂದು ಪತ್ರ

ಓ ಗೆಳೆಯಾ
ನನ್ನ ನಿನ್ನ ವಯಸ್ಸಿನ ಅಂತರ
ಅಜಗಜಾಂತರ ಆದರೂ!
ನೀನಾದಿ ಸ್ನೇಹ ಜೀವಿ

ಓ ಗೆಳೆಯಾ ನೀ ಹೋಗಿ
ಮಾಸಗಳಳಿದು ವರ್‍ಷಗಳುರುಳುತಿಹವು
ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ
ಯಾರ ಮನದಲ್ಲೂ ಮಾಸಿಲ್ಲ

ನಿನ್ನ ಹೆಸರು ಸದಾ ಹಚ್ಚ ಹಸಿರು
ನಿನ್ನಾ ಕಾವ್ಯದಲಿ, ನಿನ್ನಾ ಕಾದಂಬರಿಯಲಿ

ಬೇದೂರು ಭಟ್ಟರ ಕಾರಿನಲಿ ಹಾಸನ
ಮಂಗಳೂರಿನ ಸಾಹಿತ್ಯ ಸಮ್ಮೇಳನಕೆ
ಹೋದ ನೆನಪು ಮತ್ತೆ ಬರತಾವೇನ?

ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲಿ
ಮೊದಲನೇ ಕುರ್ಚಿ ಸಾರುತಿಹುದು ನಿನ್ನ ಇರುವಿಕೆಯ

ಅಭಿಮಾನಿ ಬಳಗವೊಂದು
ಮೊನ್ನೆ ನಡೆಸಿದ ಕವಿಗೋಷ್ಠಿಯಲಿ
ಹಿರಿಯ ಕಿರಿಯ ಕವಿಗಳು ವಾಚಿಸಿದ
ಕವನಗಳಲಿ ನಿಮ್ಮದೇ ಗುಣಗಾನ

ಸಾಗರದ ಗಾಂಧಿನಗರದಲ್ಲಿ
ನೀವಿದ್ದ ಮನೆಯ ರಸ್ತೆಗೆ
ನಿಮ್ಮ ಹೆಸರಿಡಲು ಒತ್ತಾಯಿಸಿದನೊಬ್ಬ
ಅಭಿಮಾನಿ ಸಭೆಯಲಿ

ಹೇಳು ಗೆಳೆಯಾ
ಅಲ್ಲಿ ಏನು ನಡೆಸಿದ್ದೀ? ಕಾದಂಬರಿ ಬರೆಯುತ್ತಿದ್ದೀ?
ಇಲ್ಲ, ಮಕ್ಕಳ ಕಥೆ ಬರೆಯುತ್ತಿದ್ದೀ?
ನಿನಗೆ ಬರುತ್ತಿಲ್ಲವೇ ನಮ್ಮೆಲ್ಲರ ನೆನಪು!

ಮಹಾಬಲೇಶ್ವರ ಭಟ್ಟ, ಪಂಪಣ್ಣ, ಸಿಜಿಕೆ,
ತಿರುಮಲ, ಸಾಕೆ, ವಿಟಿ ಇಲ್ಲಿ ಎಲ್ಲರೂ
ನನ್ನ ಕೇಳುತಿಹರು ‘ಹೇಗೆ ಇರುವರು ಉಡುಪರು’? ಎಂದು

ಮೌನವಾಚರಿಸದೇ ಉತ್ತರ ಬರೆ ಗೆಳೆಯ
ವಿಳಂಬಿಸದೇ ಉತ್ತರ ಬರೆ ಬೇಗ ಈ ಪತ್ರಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮಿ
Next post ಗಂಡಸ್ಕತ್ರಿ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…