Home / ಕಥೆ / ಕಾದಂಬರಿ / ವಾಗ್ದೇವಿ – ೨೭

ವಾಗ್ದೇವಿ – ೨೭

ಗೆಳೆಯರೀರ್ವರೂ ಗಂಡಭೇರುಂಡ ಪಕ್ಷಿಗಳಂತೆ ಹಗಲು ರಾತ್ರಿ ಒಟ್ಟಿ ನಲ್ಲಿ ಇದ್ದು ವಿವಿಧ ಪ್ರಸ್ತಾವಗಳನ್ನು ಮಾಡುತ್ತಾ ಸಮಯ ಕಳೆದರು. ಅವರು ರಾಜನ ಕುಲಗುರುವಾದ ಸ್ವಯಂಜ್ಯೋತಿ ಗುರುಗಳ ಮಠಕ್ಕೆ ಹೋಗಿ, ಆ ಸನ್ಯಾಸಿಯನ್ನು ಕಂಡರು. ಅಪರಾಜಿತನು ವೇದವ್ಯಾಸ ಉಪಾ ಧ್ಯನ ಗುರ್ತು ಸನ್ಯಾಸಿಗೆ ಹೇಳಿದನು. ಅವರು ಹಿಂದೆ ಅವನನ್ನು ರಾಜನ ದರ್ಬಾರಿನಲ್ಲಿ ನೋಡಿದ ನೆನಪು ಒಂದು ಸಂತೋಷಪಟ್ಟರು. ತಮ್ಮ ಮಠದ ಮೇಲೆ ಅಭಿಮಾನವಿಟ್ಟು ಇಲ್ಲಿವರೇಗೆ ಒಂದ ಗೀರ್ವಾಣಭಾಷಾಗ್ರಗಣ್ಯಗೆ ಸಾಭಿಮಾನ ಮಾಡಿ, ಬಿಡಾರ ಸಾಹಿತ್ಯಗಳನ್ನು ಒದಗಿಸಿಕೊಟ್ಟು ಚಂದವಾಗಿ, ಪರಾಮರ್ಶಿಸೆಂದು ಮಠದ ಕಾರ್ಯಸ್ಥ ಶಿವರಾಮ ಸೆಟ್ಟಗೆ ಆಜ್ಞಾಸಿಸಿದರು. ಕಾರ್ಯಸ್ಥನು ಗುರುವಿನ ಅಪ್ಪಣೆಯನ್ನು ನಡೆಸಿದನು. ವಿಪ್ರಗೆ ಭೋಜನಾದಿ ಸತ್ಕಾರಗಳು ಅವನ ನಿರೀಕ್ಷಣೆಯನ್ನು ಮಿಗುವ ರೀತಿಯಲ್ಲಿ ಆದವು ಸ್ವಯಂ ಜ್ಯೋತಿ ಪರಮಹಂಸರು ಸಂಸ್ಕೃತದಲ್ಲಿ ಕಡಿಮೆ ಪಾಂಡಿತ್ಯವುಳ್ಳ ವರಲ್ಲ. ವೇದ ವ್ಯಾಸ ಉಪಾಧ್ಯನು ಆವರ ಒಟ್ಟ ನಲ್ಲಿ ಎರಡು ಮೂರು ದಿವಸ ತರ್ಕಮಾಡಿ ನೋಡಿದಾಗ ತನ್ನಷ್ಟು ದೊಡ್ಡ ಸಂಸ್ಕೃತ ಪಂಡಿತವಿಲ್ಲವೆಂಬಂತ ತಾಳಿಕೊಂಡ ಗರ್ವವು ವ್ಯರ್ಥವಾಗಿತೋರಿ ಸನ್ಯಾಸಿಯ ಪ್ರಾಜ್ಞತೆಗೆ ಮೆಚ್ಚಿದನು. ಉಪಾ ಧ್ಯನ ಪಾಂಡಿತ್ಯವು ಸಾಮಾನ್ಯವಾದುದಲ್ಲವೆಂದು ಸ್ವಯಂಜ್ಯೋತಿ ಗುರು ವರ್ಯರು ನಿಶ್ಚೈಸಿ ಒಳ್ಳೇ ವಸ್ತ್ರಾಲಂಕಾರಗಳನ್ನು ಅವನಿಗೆ ಉಚಿತವಾಗಿ ಕೊಟ್ಟು, ಸನ್ಮಾನಿಸಿದರು. “ವಿಶೇಷವೇನಾದರೂ ಅರಿಕೆ ಮಾಡಲಿಕ್ಕಿದೆಯೋ” ಎಂದು ವಿಚಾರಿಸಿದಾಗ ಅಪರಾಜಿತ ಸೆಟ್ಟಿಯು ಪ್ರಣಾಮಮಾಡಿ, ಈ ಬ್ರಾಹ್ಮಣನು ಸನ್ನಿಧಾನದ ಭೇಟಿಗೆ ಬಂದ ಉದ್ದೇಶವನ್ನು ಸಂಪೂರ್ಣವಾಗಿ ವಿವರಿಸಿದನು.

“ಲೌಕಿಕ ವಿಚಾರವನ್ನೇ ಬಿಟ್ಟು ನಿರ್ವಾಣವನ್ನು ಹೊಂದಲಪೇಕ್ಷಿತ ನಾದ ಪರಮಹಂಸನೊಬ್ಬನು ಇಂಥಾ ವಾಭಾಟದಲ್ಲಿ ಮಾಡತಕ್ಕದ್ದೇನೂ ಇಲ್ಲವು. ಆದರೆ ಈ ರಾಜ್ಯದಲ್ಲಿ ಒಡ್ಡೋಲಗದ ಕ್ರಮಕ್ಕನುಸರಿಸಿ ಮತ ಸಂಬಂಧವಾದ ವಿವಾದಗಳಲ್ಲ ರಾಜದ್ವಾರದಲ್ಲಿ ಅರಸನು ತನ್ನ ಕುಲಗುರು ವನ್ನು ಮಂತ್ರಾಲೋಚಕನಾಗಿ ತನ್ನ ಅರ್ಧಾಸನದಲ್ಲಿ ಕುಳ್ಳಿರಿಸುವ ಪದ್ಧ ತಿಯು ಪರಂಪರೆಯಾಗಿ ನಡೆದು ಬರುತ್ತದೆ. ಅವನ ಅಭಿಪ್ರಾಯವನ್ನು ಸ್ವೀಕರಿಸುವುದಕ್ಕೆ ಅರಸು ಸರ್ವಧಾ ಬದ್ದನಲ್ಲ. ನೃಪಾಲನು ತನಗೆ ಯುಕ್ತ ವೆಂತ ಕಾಣುವ ವಿಧಿಯನ್ನು ಕೊಡುತ್ತಾನೆ. ಅವನ ಸ್ವಾತಂತ್ರ್ಯಕ್ಕೆ ಯಾವ ನೊಬ್ಬ ಮಂತ್ರಾಲೋಚಕನ ತಡೆಯೂ ಇರುವುದಿಲ್ಲ.” ಹೀಗೆ ಸನ್ಯಾಸಿಯು ಹೇಳಿದುದರಿಂದ ವೇದವಾಸ್ಯನು ಕಂಗೆಟ್ಟನು. ಅಪರಾಜಿತ ಸೆಟ್ಟಿಯು ಪುನಃ ಪ್ರಣಾಮಮಾಡಿ ಶರಣಾಗತನಾದ ಹಾರುವಗೆ ಅಭಯವಾಗಬೇಕೆಂದು ಸೆರಗು ಒಡ್ಡಿ ಬೇಡಿಕೊಂಡನು: “ಜನಧರ್ಮ ಪಾಲಿಸು?” ಎಂದು ಅಪರಾ ಜಿತಗೆ ಆಜ್ಞೆಯಾಯಿತು. ಬಳೆಕ ಅವರು ತನ್ನ ನೌಕರನೊಬ್ಬನನ್ನು ಕಳು ಹಿಸಿ ಅರಮನೆಯ ಭಕ್ಷಿ ಆದಿರಾಜನನ್ನು ಕರೆಸಿ ಅವನ ಕೂಡೆ ಅಂತರಂಗದಲ್ಲಿ ಏನೋ ಮಾತಾಡಿ ವೇದವ್ಯಾಸ ಉಪಾಧ್ಯನನ್ನು ಅವನ ಸಂಗಡ ಕಳು ಹಿಸಿದರು.

ಅಪರಾಜಿತನು ಅವರಿಬ್ಬರ ಹಿಂದೆಯೇ ಹೋದನು. ಆದಿರಾಜನು ಆ ಬ್ರಾಹ್ಮಣನನ್ನೂ ಅವನ ಸಂಗಡಿಗನನ್ನೂ ಮನೆಗೆ ಕರಕೊಂಡು ಹೋಗಿ ದಿವಾನ ಕಚೇರಿಯ ಒಬ್ಬ ಕಾರ್ಕೂನನನ್ನು ಕರತರಿಸಿ ಅವನ ಕೂಡೆ ಸ್ನೇಹ ಭಾವದಿಂದ ಸಂಭಾಷಣೆಮಾಡಿ ವೇದವ್ಯಾಸ ಉಪಾಧ್ಯನ ಛಲನಡೆಯಲಿಕ್ಕೆ ಉಪಾಯ ನಡೆಸಬೇಕೆಂದು ಅಪೇಕ್ಷಿಸಿದನು. ಅರಸನ ಒಡ್ಡೋಲಗದಲ್ಲಿ ಪೇಚಾಡುವ ಕಾಲವು ಇನ್ನೂ ಒದಗಲಿಲ್ಲ ಆಯಾ ಊರಿನವರು ಒಗ್ಗ ಟ್ಟಾಗಿ ಮತ ವಿರುದ್ಧವಾದ ಕಾರ್ಯವನ್ನು ನಡೆಸಕೂಡದೆಂದು ಕಟ್ಟು ಮಾಡಲಿಕ್ಕೆ ಸ್ವತಂತ್ರಿಕರಾಗಿರುತ್ತಾರೆ. ಅವರ ಕಟ್ಟು ಮುರಿಯುವುದು ಅನ್ಯ ರಿಗೆ ಅಸಾಧ್ಯ. ಒಂದುವೇಳೆ ಅಂಥಾ ಕಟ್ಟಿನಿಂದ ತಡೆಯಲ್ಲಟ್ಟವನು ದ್ರವ್ಯ ಬಲದಿಂದ ಕಲಹ ಹೊಡೆದಾಟ ಮುಂತಾದ ಉಪದ್ರವ ಕೊಡಲಿಕ್ಕೆ ನೋಡುವುದಾದರೆ ಸ್ಥಳಿಕ ಕಾರ್ಬಾರಿ ಕೊತ್ವಾಲರು ತಮ್ಮ ಅಧಿಕಾರವನ್ನು ನಡೆಸದೆ ಇರಲಿಕ್ಕಿಲ್ಲ. “ಜಗಲಿ ಹಾರದ ಬಡ್ಡಿ ಗಗನ ಹಾರ್ಯಾಳೆ” ಎಂಬಂತೆ ಇಷ್ಟು ಸಣ್ಣ ವ್ಯವಸ್ಥೆ ಮಾಡಲಿಕ್ಕೆ ಬುದ್ಧಿ ಚಾತುರ್ಯವಿಲ್ಲದವನು ರಾಜನ ಒಡ್ಡೋ ಲಗಕ್ಕೆ ಬಂದು, ಏನು ಮಾಡುವ ಹಾಗಿದೆ? ಕಾರ್ಕೂನನ ಈ ಪ್ರತಿವಾಕ್ಯ ವನ್ನು ಅಪರಾಜಿತ ಸೆಟ್ಟಿಯು ವೇದವ್ಯಾಸ ಉಪಾಧ್ಯಗೆ ವಿವರಿಸಿ ಹೇಳಿ ತನ್ನ ಸಂಗಡ ಬಂದರೆ ಮುಂದಿನ ಉಪಾಯ ಸುಲಭವಾಗಿದೆಯೆಂದು ಅವ ನಿಗೆ ಧೈರ್ಯ ಕೊಟ್ಟನು. ಆದಿರಾಜಗೆ ಅವರಿಬ್ಬರೂ ನಮಸ್ಕಾರ ಮಾಡಿ, ಅಲ್ಲಿಂದ ಹೊರಟು ಕ್ಷಿಪ್ರ ಕುಮುದಪುರಕ್ಕೆ ಬಂದರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...