Home / ಕವನ / ಕವಿತೆ / ಆಶಾಬೀ

ಆಶಾಬೀ

ಜೀವನದಲ್ಲಿ ಕೇವಲ
ಹಸಿವು, ನೋವುಂಡು
ಬೆಳೆದವಳು ಆಶಾಬೀ.

ಹಸಿವಿನ ಕ್ರೂರ ಕೂಗನ್ನು
ಕೇಳಲಾರದೇ ಒಂದು ದಿನ
ತನ್ನೆರಡು ಹಸಳೆಗಳೊಡನೆ
ನೀರಿನ ಪಾಲಾದಳು.

ಆದರೆ, ಸಾವು ವಿಚಿತ್ರ.
ಅಲ್ಲಿಯೂ ಅವಳಿಗೆ ಸಹಕರಿಸಲಿಲ್ಲ.
ತನ್ನ ಕರುಳ ಕುಡಿಗಳ
ಕತ್ತನ್ನು ಹಿಸುಕಿದ ಅವಳು
ಕೊನೆಗೂ ಬದುಕಿಕೊಂಡಳು,
ಆದರೆ, ಕಾನೂನಿನ ಕ್ರೂರ
ಕೈಗಳಿಗೆ ಸಿಲುಕಿ
ನಲುಗಿ ಹೋದಳು.

ಜೈಲಿನ ಕಂಬಿಗಳ ಹಿಂದೆ
ಕ್ರೂರವಾದ ಬದುಕು
ಕತ್ತಲ ಕೋಣೆಯಲ್ಲಿ
ನಿರ್ವಾಹವಿಲ್ಲದೇ
ದಿನ ನೂಕುತ್ತಿದ್ದಳು.

ಸಾಯಲು ಕಾನೂನು
ಸಮ್ಮತಿಸುತ್ತಿಲ್ಲ.
– ಬದುಕಲು ಅವಳಿಗೆ ಇಷ್ಟವಿಲ್ಲ.
ಬಡತನದ ಬೇಗೆಯಲಿ
ಬೆಂದು ಹೋದ ಆಶಾಬಿಯ
ಎರಡು ಆಶೆಯ ಕುಡಿಗಳೂ
ಈಗ ಕಮರಿ ಹೋಗಿದ್ದವು.

ಬದುಕಲು ಮನಸ್ಸು ಒಪ್ಪದು
ಸಾಯಲು ಕಾನೂನು ಬಿಡದು
ಅಸಹಾಯಕತೆಯ ನಿಟ್ಟುಸಿರು
ಅವಳನ್ನು ಸುಟ್ಟು ಬಿಡುತ್ತಿತ್ತು.
ಮುದ್ದು ಕಂದಂಮ್ಮಗಳ ನೆನಪು
ಅವಳ ಕರುಳನ್ನು ಕೊರೆಯುತ್ತಿತ್ತು.

ಪುಟ್ಟ ಕಂದಮ್ಮಗಳ
ಕಪಟವರಿಯದ
ಮುದ್ದು ಮುಖಗಳ ನೆನಪು
ರಕ್ತ ಹೆಪ್ಪುಗಟ್ಟಿಸುತ್ತದೆ.
ಕಣುಗಳೂ ಸದಾ ಹಸಿ ಹಸಿ.

ಆದರೆ ಮರುಕ್ಷಣವೇ ಅವಳ ಕೈಗಳು
ಕಬ್ಬಿಣದಂತೆ ಗಟ್ಟಿಯಾಗುತ್ತವೆ.
ತನ್ನನ್ನು ಈ ಸ್ಥಿತಿಗೆ ದೂಡಿದ
ನಾಚಿಕೆಯಿಲ್ಲದ ವ್ಯವಸ್ಥೆಯ
ವಿರುದ್ಧ ಹೋರಾಡಲು
ತನ್ನ ನಿರಪರಾಧಿ ಕೂಸುಗಳಿಗೆ

ನ್ಯಾಯ ದೊರಕಿಸಿ ಕೊಡಲು
ಅವರ ಹಸಿವನ್ನು ನೀಗಿಸಲು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...