Home / ಕವನ / ಕವಿತೆ / ಆಶಾಬೀ

ಆಶಾಬೀ

ಜೀವನದಲ್ಲಿ ಕೇವಲ
ಹಸಿವು, ನೋವುಂಡು
ಬೆಳೆದವಳು ಆಶಾಬೀ.

ಹಸಿವಿನ ಕ್ರೂರ ಕೂಗನ್ನು
ಕೇಳಲಾರದೇ ಒಂದು ದಿನ
ತನ್ನೆರಡು ಹಸಳೆಗಳೊಡನೆ
ನೀರಿನ ಪಾಲಾದಳು.

ಆದರೆ, ಸಾವು ವಿಚಿತ್ರ.
ಅಲ್ಲಿಯೂ ಅವಳಿಗೆ ಸಹಕರಿಸಲಿಲ್ಲ.
ತನ್ನ ಕರುಳ ಕುಡಿಗಳ
ಕತ್ತನ್ನು ಹಿಸುಕಿದ ಅವಳು
ಕೊನೆಗೂ ಬದುಕಿಕೊಂಡಳು,
ಆದರೆ, ಕಾನೂನಿನ ಕ್ರೂರ
ಕೈಗಳಿಗೆ ಸಿಲುಕಿ
ನಲುಗಿ ಹೋದಳು.

ಜೈಲಿನ ಕಂಬಿಗಳ ಹಿಂದೆ
ಕ್ರೂರವಾದ ಬದುಕು
ಕತ್ತಲ ಕೋಣೆಯಲ್ಲಿ
ನಿರ್ವಾಹವಿಲ್ಲದೇ
ದಿನ ನೂಕುತ್ತಿದ್ದಳು.

ಸಾಯಲು ಕಾನೂನು
ಸಮ್ಮತಿಸುತ್ತಿಲ್ಲ.
– ಬದುಕಲು ಅವಳಿಗೆ ಇಷ್ಟವಿಲ್ಲ.
ಬಡತನದ ಬೇಗೆಯಲಿ
ಬೆಂದು ಹೋದ ಆಶಾಬಿಯ
ಎರಡು ಆಶೆಯ ಕುಡಿಗಳೂ
ಈಗ ಕಮರಿ ಹೋಗಿದ್ದವು.

ಬದುಕಲು ಮನಸ್ಸು ಒಪ್ಪದು
ಸಾಯಲು ಕಾನೂನು ಬಿಡದು
ಅಸಹಾಯಕತೆಯ ನಿಟ್ಟುಸಿರು
ಅವಳನ್ನು ಸುಟ್ಟು ಬಿಡುತ್ತಿತ್ತು.
ಮುದ್ದು ಕಂದಂಮ್ಮಗಳ ನೆನಪು
ಅವಳ ಕರುಳನ್ನು ಕೊರೆಯುತ್ತಿತ್ತು.

ಪುಟ್ಟ ಕಂದಮ್ಮಗಳ
ಕಪಟವರಿಯದ
ಮುದ್ದು ಮುಖಗಳ ನೆನಪು
ರಕ್ತ ಹೆಪ್ಪುಗಟ್ಟಿಸುತ್ತದೆ.
ಕಣುಗಳೂ ಸದಾ ಹಸಿ ಹಸಿ.

ಆದರೆ ಮರುಕ್ಷಣವೇ ಅವಳ ಕೈಗಳು
ಕಬ್ಬಿಣದಂತೆ ಗಟ್ಟಿಯಾಗುತ್ತವೆ.
ತನ್ನನ್ನು ಈ ಸ್ಥಿತಿಗೆ ದೂಡಿದ
ನಾಚಿಕೆಯಿಲ್ಲದ ವ್ಯವಸ್ಥೆಯ
ವಿರುದ್ಧ ಹೋರಾಡಲು
ತನ್ನ ನಿರಪರಾಧಿ ಕೂಸುಗಳಿಗೆ

ನ್ಯಾಯ ದೊರಕಿಸಿ ಕೊಡಲು
ಅವರ ಹಸಿವನ್ನು ನೀಗಿಸಲು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...