Home / ಕವನ / ಕವಿತೆ / ರೂಪಕನ್ವರ

ರೂಪಕನ್ವರ

ಭಾರತ ಮಾತೆಯೇ
ನಿನ್ನ ಕರುಳ ಕುಡಿಗಳು
ನಿನ್ನದೇ ಮಾಂಸ
ಹಂಚಿಕೊಂಡಿರುವ
ತುಣುಕುಗಳನು
ಬೆಂಕಿಗೆ ದೂಡಿ,
ಸತಿಯಾಗಿಸುವದ ಕಂಡು
ಸುಮ್ಮನೇಕಿರುವೆ?

ಪತಿಸತ್ತರೆ ಸತಿ
ಚಿತೆಯೇರಬೇಕು
ಬದುಕಿರುವಾಗಲೇ
ಬದುಕನ್ನು ಜಿವುಟಿ
ಕರಕಾಗಿಸಿದ ಗಂಡು
ಸತ್ತ ಮೇಲೂ ಅವಳ
ಬೆನ್ನು ಬಿಡಲಿಲ್ಲ
ಬದುಕಗೊಡಲಿಲ್ಲ ಮಾತೆ?

ನಿನ್ನ ಸತಿಯಾಗಿಸಿ,
ಚಿತೆಯೇರಿಸಿ,
ದೇವಿಯಪಟ್ಟ ಕಟ್ಟಿ
ನಿನ್ನ ಸಮಾಧಿಯಮೇಲೆ
ಹೆಣಭಾರದ ಕಲ್ಲನ್ನಿಟ್ಟು
ಪೂಜೆಗೈವರು ಇವರು
ಹೊಟ್ಟೆ ಹೊರೆವರಿವರು.

ಪುರಿಯ ಜಗದ್ಗುರು
ಸತಿ ಧರ್ಮ – ಶಾಸ್ತ್ರಗಳ
ಮರೆಯಲ್ಲಿ
ಕನ್ವರಳ ಕತ್ತು ಹಿಸುಕಿದರು.
ಪತಿಗೆ ಧರ್ಮವಿಲ್ಲ –
ಸತಿಗೆ ಚಿತೆಯೇರಲು
ಬೋಧಿಸುವ ಇವರನು
ಸುಟ್ಟು ಬಿಡು ಕನ್ವರ.

ನಿನ್ನ ಕೊಂದವರ ಕತ್ತುಗಳಿಗೆ
ಕರಗಸವಾಗಿ ಕೊರೆಯುತ್ತ
ನಿನ್ನ ಕನಸುಗಳನು
ವಾಸ್ತವಕ್ಕಿಳಿಸಲು
ಮತ್ತೇ ಹುಟ್ಟಿ ಬಾ ಕನ್ವರ,
ಹೋರಾಟದ ಸಂಕೇತವಾಗಿ
ನಿಲ್ಲು ಬಾ ಕನ್ವರ.

ಆಗ ಮುಂಬರು ಪೀಳಿಗೆ
ಮಾಸ್ತಿಗಲ್ಲುಗಳ ಅರ್ಥ
ಹುಡುಕಿ ನೋಡುತ್ತಾರೆ,
ಧರ್ಮಲಂಡರ ಬಂಡವಾಳ
ಬೀದಿಗೆಳೆಯುತ್ತಾರೆ.

ನಿನ್ನ ಬದುಕನ್ನೇ ನುಂಗಿದ
ಅವರ ಧರ್ಮ ಶಾಸ್ತ್ರಗಳಿಗೆ
ಬೆಂಕಿಯಿಡುತ್ತಾರೆ.
ವಿಜಯದ ಕಹಳೆ ಊದುತ್ತಾರೆ.
ಏಕೆಂದರೆ ಅವರೀಗ
ಮನುಷ್ಯರಾಗಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...