Home / ಕವನ / ಕವಿತೆ / ಅಮಾನುಷ

ಅಮಾನುಷ

ದೇವರು, ಧರ್ಮವೆಂದರೆ ಸಾಕು
ಶಾಕಿನಿ, ಢಾಕಿನಿ ಪಿಶಾಚಿಗಳಾಗುವರು
ಮನುಷ್ಯರನ್ನು ಹೆಣ್ಣು, ಗಂಡನ್ನದೆ, ಶಿಶುಗಳನ್ನೂ ಬಿಡದೆ
ಜೀವದಲ್ಲಿದ್ದಂತೆಯೇ
ಹಸಿ ಹಸಿ ಮಾಂಸ, ಖಂಡಗಳನ್ನು ಹರಿಹರಿದು ಜಗಿಯುತ್ತ
ಬಿಸಿ, ಬಿಸಿ ರಕ್ತವನ್ನು ಗಟ ಗಟ ಕುಡಿಯುತ್ತ
ಮೂಳೆಗಳನ್ನು ಕಟ ಕಟ ಕಡಿಯುತ್ತ
ಭಯಂಕರ ಉನ್ಮಾದದ ನಗೆ ನಗುತ್ತ
ಹೃದಯ ವಿಜ್ರಾವಕವಾಗಿ ಕಿರಿಚುತ್ತ
ಪ್ರಳಯದ ಕುಣಿತದಲ್ಲಿ ತೊಡಗುವರು.

ನಾನಾ ಕಾರಣಗಳಿಗಾಗಿ
ಇವರ ಸುಲಭ ತುತ್ತಾಗುವರು
ಪ್ರೀತಿ ಪಾತ್ರರಾಗುವವರೆಂದರೆ ಹೆಂಗಸರು, ಮಕ್ಕಳು.

ಮಕ್ಕಳ ಒಂದೊಂದೇ ಎಳೆಯ ಭಾಗವನ್ನು
ಕತ್ತರಿಸಿ, ಕತ್ತರಿಸಿ,
ವಿಕೃತ ಭಕ್ತಿಯಲ್ಲಿ,
ಬಹು ಅಕ್ಕರೆಯಿಂದ,
ನಿಧಾನವಾಗಿ, ವಿಧಿಪೂರ್ವಕವಾಗಿ ನೈವೇದ್ಯ ಮಾಡುವರು
ಪ್ರಸಾದವೆಂದು ಕಣ್ಣಿಗೊತ್ತಿಕೊಂಡು
ಚಿಗುರೆಲೆಯಂತೆ ಮೆಲ್ಲುವರು
ಕೆಟ್ಟ ಪ್ರೀತಿ ಹೊಂದುವರು.

ಹೆಂಗಸನ್ನು, ಅದರಲ್ಲೂ ಗಂಡ ಸತ್ತವಳನ್ನು
ಅವಳದೆಲ್ಲವನ್ನೂ ಕಾಲಕಸ ಮಾಡಿ
ಕೊರಡುಮಾಡಿ,
ಸ್ವರ್ಗಾರೋಹಣ ಮಾಡಿಸುವೆನೆಂದು
ಸತ್ತವನ ಜೊತೆಗೆ ಸಿದಿಗೆ ಬದಿಗೆಗೆ ಕಟ್ಟಿ
ಸಕಲ ಭಾಜಾ ಭಜಂತ್ರಿಯಲ್ಲಿ
ಅಮಾನುಷ ಮಂತ್ರ, ಘೋಷಣೆಗಳ ಒದರುತ್ತ
ದುರ್ವ್ಯಕ್ತಿಗಳು ಮೆರವಣಿಗೆಯಲ್ಲಿ ಹೊತ್ತು ತಂದು
ವಾಸನೆ ಬರದಿರಲೆಂದು
ಸುವಾಸನಾ ಕಟ್ಟಿಗೆಗಳಿಂದ ನಿರ್ಮಿಸಿದ ಚಿತೆಯ ಮೇಲಿಟ್ಟು
ಕೆಂಪು ಕಣಿಗಲೆ ಹೂವುಗಳಲ್ಲಿ ಅರ್ಚಿಸಿ,
ಸತ್ತವರ ಅಪೂರ್ವ ಮೌನ ಗೋಷ್ಠಿಯಲ್ಲಿ
ಯಮ ಕಿಂಕರರ ಕಾವಲಿನಲ್ಲಿ
ಪೆಟ್ರೋಲ್ ಸುರಿದು ಧಗ್ಗನೆ ಉರಿ ಹೊತ್ತಿಸಿ
ಚಿಟಿಲ್, ಚಿಟಿಲ್ ಅಂತ ಉರಿ ಧಗ, ಧಗ ಉರಿಯುತ್ತಿದ್ದರೆ
ಇವರಿಗೆ ಎಲ್ಲಿಲ್ಲದ ಹುರುಪು
ಆ ಪಾಪದ ಹೆಣ್ಣು ಮಗಳು ಉರಿ, ಸಂಕಟ ತಾಳಲಾರದೆ
ಕಿರಿಚಾಡುವುದನ್ನು, ಒದರಾಡುವುದನ್ನು
ಸುಮ್ಮನೆ ಕಣ್ಣು ಬಿಟ್ಟು ಕೊಂಡು ನೋಡುತ್ತ
ಜೈ, ಜೈ ಕಾರ ಹಾಕುತ್ತಿರುತ್ತಾರೆ.
ಅವಳು ಪೂರ್ಣವಾಗಿ ಸುಟ್ಟು ಬೂದಿಯಾಗಿ
ಅದು ತಣ್ಣಗಾಗಿ ಆರುವವರೆವಿಗೆ
ಆ ಕಾಲಿನ ಭಾರ ಈ ಕಾಲಿಗೆ ವರ್ಗಾಯಿಸದಂತೆ
ಕಾದಿರುತ್ತಾರೆ.

ನಂತರ, ಪ್ರೇತ ಗೀತೆ ಹಾಡುತ್ತ, ಹೆಜ್ಜೆ ಹಾಕುತ್ತ
ಪ್ರದಕ್ಷಿಣೆ ಬಂದು
ಅಮಾನವೀಯ ಧನ್ಯತೆಯ ಕುರುಹಾಗಿ
ಆ ಚಿತಾ ಭಸ್ಮವನ್ನು ಮಸ್ತಕಗಳಲ್ಲಿ ಧರಿಸುವವರು ಯಾರೋ!
ಉಡಿಗಳಲ್ಲಿ ತುಂಬಿ ಕೊಳ್ಳುವವರು ಯಾರೋ!
ಭವಿಷ್ಯ ವಿರದವರ ಕೆಟ್ಟ ಸಡಗರವ
ನೋಡ ಬಾರದು!!
ಈ ಮನುಷ್ಯರು ಒಳ್ಳೆಯದಕ್ಕೆಂದರೆ ತಲೆ ಹೊಯ್ದರೂ
ಮುಂದೆ ಬರುವುದಿಲ್ಲ.
ಇಂತಹುದಕ್ಕಾದರೆ ನೀನ ಕರಿ ಬೇಡ ಹಿಂಡು, ಹಿಂಡು ಬರುತ್ತಾರಲ್ಲಾ
ಏನಿದು!
ಥೂ!! ಇಂತಾ ಜನ್ಮ ಏಳೇಳು ಜನ್ಮಕ್ಕೂ… ಕೊಟ್ಟರೂ…
ನನಗೆ ಬೇಡ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...