Home / ಕವನ / ಕವಿತೆ / ಮುಂಬಯಿ ಬದುಕು

ಮುಂಬಯಿ ಬದುಕು

ಹಾಳು ಬೀದಿ ಬಸದಿಯಲಿ
ಗೋಳು ಕ್ಷಯ ಹಿಡಿದ
ಬಾಳಿಗೆ ದೊಂಗಾಲು ಬಿದ್ದು
ಕ್ರಿಮಿಗಳೋಪಾದಿ ಕೊಳೆವ
ನರ ನಾರಾಯಣರ ಬಾಳು
ಬಾಳೆ? ನೋಡಿರೈ ಅವರ

ಜೀವಂತ ಮರಣ
ಗುರಿರಹಿತ ಪಯಣ
ಉದಾಸೀನ ನಯನ, ನಿಶ್ಯಕ್ತ ಹರಣ
ಜೀವನದ ಅಲೆದಾಟ
ರೇಗಾಟ, ಕೂಗಾಟ, ನಿಜವನ್ನೆ ಸುಳಿವಾಟ

ಹರಕಲು ಗೇಹ
ಬಡಕಲು ದೇಹ
ನರಕ ಅದು, ಅಲ್ಲಿಲ್ಲ ನೇಹ!

ಹದಿಬದೆಯ ವ್ಯಾಪಾರ
ಅದರೊಳಗು ತಕರಾರ
ಕುಲ ಲಜ್ಜೆಗಳ ಮಾರಿ ತಾಯ್ತನದ ವ್ಯಭಿಚಾರ –
ಒಣದಾದ ತುಟಿಯಲ್ಲಿ
ಹಿರಿದಾದ ಮೇಲುನಗೆ
ತೆಳ್ಳನೆಯ ಉಸಿರು
ಬಡತನದ ಹೊಗೆ-ಧಗೆ
ಕಣ್ಣು ಕಾಂತಿ ಹೀನ
ಬಯಕೆಗಳ ಬಹುಬಗೆ –
ಗಿರಿಣಿಗಳ ಎಡೆಯಲ್ಲಿ
ಜಜ್ಜಿರುವ ನರರು
ಮೈರುಧಿರ ಬೆವರೆಂದು
ಸುರಿಸುವರು ಅವರು
ಅವರ ಸುಖ-ಅಳು
ಅದಕ್ಕೆಲ್ಲ ಹೆರರು –

ದಣಿದ ದೇಹಕೆ ಸುಖದ ಮೋಹ
ಉಸ್ಸೆನಲು ಓಡುವುದು ಗುಡಿಯೆಡೆಗೆ
ಬಹುದೂರ ಮನೆ
ಉದ್ದ ದಾರಿ ಅದಕಿಲ್ಲ ಕೊನೆ
ಮನದ ಕಿರುಕುಳ-ತಾಪ
ಮನೆಯಲ್ಲ ಅದು ಒಂದು ಕೂಪ

ಬರಿಹೊಟ್ಟೆ ಅರೆನಗ್ನ
ಅರೆಜೀವ ಕೂಸು
ನೂರು ಬಣ್ಣವ ಬಳಿಯೆ
ಕೈಲಿಲ್ಲ ಕಾಸು

ಕಂದಿ ಕಮರಿದ ಎಳೆ ಜೀವಗಳ
ಮೇಲೆ ನಾಡು ಕಟ್ಟಿಹದು ಕನಸು!
ವಯೋವೃದ್ದ ಹೆಗಲಲ್ಲಿ
ಬಡತನದ ಭಾರ
ನೆರೆಬಿದ್ದ ಹಣೆಯಲ್ಲಿ
ವಿವಶತೆಯ ಸಾರ
ನಿಡಿದುಸಿರ ಎಡೆಯಲ್ಲಿ
ಸಾವೆಷ್ಟು ದೂರ!
ಬರೆ ಎಳೆದ ಕಾಯ
ನರ-ನಾಡಿ ಗಾಯ
ತಿಕ್ಕಾಟ ಮನದಲ್ಲಿ
ಕದಡಿರುವ ಧ್ಯೇಯ
ಜಗವಲ್ಲ, ಇದು ಒಂದು
ವಿಧಿ ಬಗೆದ ಹೇಯ!

ಯೌವನಕೆ ಬೆಲೆಯಿಲ್ಲ
ಬರಿದೆ ಹೋಹುದು ತಡವರಿಸಿ
ಬವಣೆಯಲಿ ಬದುಕೆಲ್ಲ
ಬೆಳಕು-ಇದೆ ಸತ್ಯ-ಇದೆ
ಪುಲಿಯ ಬಳಿಯಲಿ ಹಸುವಂತೆ
ಶೌರ್‍ಯ ಸಹನೆಯ ಬಲವಿಲ್ಲ

ಬಲಹೀನ ಕೈಯಿಂದ
ಕಾತರದ ಕಣ್ಣಿಂದ
ಛಲಹೀನ ಒಲವನ್ನು
ಆತುರದ ಸೆಳವಿಂದ
ಬಯಸುತಿದೆ ಹಸುಗೂಸು
ದಯಾದಾನಿವರರಿಂದ…..

ಅರೆ! ದೂರಿದ್ದವರೆ,
ಬಳಿ ಬಂದು ನೋಡಿ
ನಿರ್ಜಿವ ನರರಿಂಗೆ
ಜೀವದಾನವ ಮಾಡಿ
ಉಳಿಸೋಣ ನಾಡನ್ನು
ನಾವೆಲ್ಲ ಕೂಡಿ…..!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...