Home / ಕವನ / ಕವಿತೆ / ಬಾಳ ದಿಬ್ಬಣ

ಬಾಳ ದಿಬ್ಬಣ

ಬಾಳ ದಿಬ್ಬಣವು ಹೊರಟಿಹುದು ಅಂದದಲಿ
ಗೋಳ ಜೀವನದ ವಾದ್ಯದಿಂದುಸುರುತಲಿ…
ಮುಂದೆ ಬದುಕಿನ ಸೋಗ
ಕಂಡು ಮೆರೆಯಲು ಬೇಗ

ಜೀವನದ ಬಂಡಿಯನು ಹೊಡೆಯುತಲಿ
ಜೀವಿಕೆಯ ಸುಗಮತೆಯನರಸುತಲಿ…
ಕಲ್ಲು-ಮುಳ್ಳಿನ ಹಾದಿ
ಗೆಲ್ಲು-ಸೋಲಿನ ಬೀದಿ.

ಬದುಕಿನುದ್ದಕು ಇಹುದೆಂದು
ಅದುವೆ ಜೀವನದ ಸೊಗಸೆಂದು
ಉಳಿದುಳಿದು ನುಡಿಸುತಲಿ
ಅಳವಡಿತ ಭಾವದಲಿ…

ಮುಂದಿಹುದು ಕಳೆಹೀನ ಪಥವೆಂದು
ಬಂದಿಹುದು ರಸಹೀನ ಜಗಕೆಂದು,
ಬಂಧನವು ಬಡತನದ ಹಗಲಿರುಳು ಬಿಡದೆಂದು

ಅರಿತಿದ್ದು ಕಳೆಗೊಟ್ಟು ಸಾಗುತಲಿ
ಪರಿಪರಿಯ ಗಾನವನು ಮಾಡುತಲಿ…
ಸುರುಸುರುಳಿ ಹೊರಹೊರಳಿ ರಾಗಿಸುವ ನಾಗಸರ
ತರುಗಳನು ಮೋದಿಸಿ ಪರವಶ ಪಡಿಸುತಿದೆ,

ಮರುಕಳಿಸಿ ಪದಪಿಂದ ಪಾಡಿತಿದೆ
ಕಿರುಗವನ ಮರಗಳಿಗೆ ಅರುಹುತಿದೆ
ಮರುಗಳಿಗೆ ತಡವರಿಸೆ ಗೀತಸುಧೆ…
ಹುರುಪಳಿದ ಮಧುಬನವು ನಿಡುಸುಯ್ಯುತಿದೆ…..

ಬರಸಿಡಿಲು ದಡಲೆಂದು ಬಡಿದರೂ
ಚರಚರನೆ ಮಳೆಗಾಳಿ ಸುರಿದರೂ
ಗರಬಡಿದ ದಿಬ್ಬಣವು ಸಾಗಿಹುದು, ಬಾಳ-
ಚರಮ ಸೀಮೆಯ ಕೊನೆಯಂಚನರಸುತಲಿ….

‘ಬದುಕು’-‘ಭಾಗ್ಯ’ಗಳೆಂಬ ವಧೂ-ವರರನು
ಸದಭಿಮಾನದ ಹುರುಪಿಂದ ಮುನ್ನಡೆಸುತಲಿ
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...