Home / ಕವನ / ಕವಿತೆ / ಸತ್ತವನ ಮನೆಯಲ್ಲಿ

ಸತ್ತವನ ಮನೆಯಲ್ಲಿ

ಸತ್ತವನ ಮನೆಯಲ್ಲಿ ಸಂಜೆ
ಅವರಿವರು ತಂದಿಟ್ಟ
ಬಗೆ ಬಗೆಯ ಊಟ
ಅವರಿವರು ತಂದಿಟ್ಟ
ಹಲವು ಹತ್ತು ಸಮಸ್ಯೆ.
ಸಂತಾಪಕೆ ಬಂದವರ
ಮಾತು ನಗೆ ಕೇಕೆ
ಸರಸ ಸಂಭಾಷಣೆ!
ನವ ವಿಧವೆ ಸೊಂಟದಲ್ಲಿ
ಬೀಗದ ಕೈಗೊಂಚಲು ಭದ್ರ.
ಮಗ ಮಗಳು ಸೊಸೆ ಅಳಿಯ
ಎಲ್ಲರದೂ ಒಂದೇ ಚಿಂತೆ
ಚಿತೆ ಏರಿದವನ ಅಸ್ತಿ
ಲಪಟಾಯಿಸುವ ಸಂಚು.
ಗೃಹ ಕಲಹ, ಶೀತಲ ಯುದ್ಧ
ಎಲ್ಲ ಈಗಲೇ ಆಗಬೇಕು
ಬಿಸಿ ಆರುವ ಮುನ್ನ
ತಟ್ಟಿದರೆ ತಾನೆ ಕಬ್ಬಿಣ ಮೆದು.
ಸಾಲ ಕೊಡದವರೂ ಬಂದರು ವಸೂಲಿಗೆ.
ಆಫೀಸಿನಿಂದ ಬಂತು ವಂತಿಗೆ
ಮರಣೋತ್ತರ ನಿಧಿ
ಗ್ರಾಚ್ಯುಟಿ ಜತೆಗೆ ಭವಿಷ್ಯ ನಿಧಿ.
ನಿಧಿ ಕಂಡು ಎಲ್ಲರ ಮುಖ
ಅರಳಿತು – ಮರೆಯಿತು ದುಃಖ
ಅಳುವರಾರಿಲ್ಲ ಇಲ್ಲಿ
ಆಸಯೊಂದೇ ತುಂಬಿತ್ತು,
ಎಲ್ಲರ ಕಣ್ಣುಗಳಲ್ಲಿ.
ಸತ್ತವನ ಫೋಟೋ ಬಂತು
ಹೂವಿನ ಹಾರ, ಊದುಬತ್ತಿ
ಪುರೋಹಿತರ ಮಂತ್ರ-ತಂತ್ರ
ಎಲ್ಲ ಸಾಂಗೋಪಾಂಗ
ಸತ್ತವ ಮೇಲಿಂದ ನೋಡಿ ನೊಂದ
ಯಾರಿಗೂ ಬೇಡವಾದ ನಾನು
ಈ ಸುಖಕ್ಕೆ ಸಾಯಬೇಕಿತ್ತೇನು?
*****
೩೧-೦೫-೧೯೯೩

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...