Home / ಕವನ / ಕವಿತೆ / ವೃದ್ಧಾಪ್ಯ – ಧೈರ್ಯ

ವೃದ್ಧಾಪ್ಯ – ಧೈರ್ಯ

ಚಿಂತಿಸದಿರು ಮನುಜ ಚಿಂತಿಸದಿರು
ನೀ ಒಂಟಿ ಎಂದು ಕೊರಗದಿರು || ಪ ||

ಹೆತ್ತವರ ಮರೆತರೆಂದು
ನೀವು ಕೊರಗದಿರಿ ಹೆತ್ತವರೆ
ಹಾಕದಿರಿ ಶಾಪ ಮಕ್ಕಳಿಗೆ
ನೀವು ಹೆತ್ತು ಹೊತ್ತು ಬೆಳೆಸಿದ
ಕುಡಿಗಳಲ್ಲವೇ ಅವು ನಿಮ್ಮ ಕುಡಿಗಳಲ್ಲವೇ?

ಹೆತ್ತವರ ನೋವು ಅರಿವಾಗದು ಇಂದು
ತಿಳಿಯುವುದು ಆ ನೋವು ಮುಂದೆ
ತಮಗೂ ಮಕ್ಕಳಾಗಿ ಹೊರ ದೂಡಿದಂದು
ಚಿಂತಿಸದಿರಿ ನಿಮಗೂ ಜೀವನವಿದೆ ಮುಂದೆ
ನೋವಿನಲ್ಲೂ ನಗುವ ಕಾಣುತ್ತ ಸಾಗಿ ಎಂದೆಂದೂ

ನೀವು ನಿತ್ಯವೂ ಜೀವ ತೇಯುವುದು
ಮಕ್ಕಳ ಸುಮಧುರ ಜೀವನಕ್ಕಾಗಿ
ಆ ಮಕ್ಕಳೂ ಮುಂದೆ ಜೀವ ತೇಯುವರು
ತಮ್ಮ ಮಕ್ಕಳ ಸುಮಧುರ ಜೀವನಕ್ಕಾಗಿ
ಈ ಸತ್ಯವನ್ನು ಅರಿತಾಗ ನೀ ಮರುಗಬೇಕೇನು?

ಕೆಲವರ ಬಾಳಿನಲ್ಲಿ ಬರುವ ಈ ಕಹಿಯು
ತಿಳಿಯಿರಿ ಇದೊಂದು ಸಾಮಾನ್ಯ ಪ್ರಕ್ರಿಯೆಯು
ಸಹಜವಾಗಿ ನೋಡು ನೀನು ಇದನ್ನು
ನಮ್ಮಂತೆಯೇ ಇಹುದು ನಮ್ಮ ಮಕ್ಕಳ ಬಾಳ್ವೆಯು
ಎನ್ನುವ ಮರ್ಮ ತಿಳಿದರೆ ಸವಿ ಬಾಳು ನಿನ್ನದು

ನಿನ್ನ ಬಲವ ನೀ ನಂಬಿ ಬದುಕು
ಬಲವಿರುವ ತನಕ ಕಾಯಕವ ಬಿಡದಿರು
ಬಂದ ಆದಾಯವನ್ನ ಯಾರಿಗೂ ಹಂಚದಿರು
ಬಲವಿಲ್ಲದಾಗ ನಿನಗದು ಆಶ್ರಯದ ಸೂರು
ಅದು ಇಲ್ಲವೆಂದಾದರೆ ವೃದ್ಧಾಶ್ರಮಕ್ಕೆ ಸೇರು

ಚಿಂತಿಸದಿರು ಮನುಜ ಚಿಂತಿಸದಿರು
ನೀ ಒಂಟಿ ಎಂದು ಕೊರಗದಿರು || ಪ ||
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...