Home / ಲೇಖನ / ಇತರೆ / ಆತ್ಮ ಸೌಂದರ್ಯ

ಆತ್ಮ ಸೌಂದರ್ಯ

ಪ್ರಿಯ ಸಖಿ,
ಇಂದು ನಾವು ಬಹಿರಂಗದ ಆಡಂಬರ, ಡಾಂಭಿಕತೆ, ಸೋಗಿನ ಸುಳಿಗೆ ಸಿಲುಕಿ ನಿಜವಾದ ಆತ್ಮಸೌಂದರ್ಯವನ್ನು ಮರೆತುಬಿಟ್ಟದ್ದೇವೆ. ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಯವರು ತಮ್ಮ ಒಂದು ಹಾಡಿನಲ್ಲಿ
ಅರಿಯಲಿಲ್ಲವಲ್ಲ
ಆತ್ಮನ ಮರೆತು ಕೆಟ್ಟರೆಲ್ಲಾ
ಹೊರಗಣ ಸೋಗೆಯ
ತಿಂದೊಳಗಿನ
ರಸದಿರವನರಿಯದಿಹ ಕುರಿಯಂತೆಲ್ಲಾ
ಎಂದಿದ್ದಾರೆ. ಕುರಿ ಸೋಗೆಯನ್ನು ಜಗಿದು ಉಗಿಯುತ್ತದೆ. ಅದಕ್ಕೆ ಆ ಗರಿಯೊಳಗಿನ ರಸದ ಅರಿವು ಇರುವುದೇ ಇಲ್ಲ. ಹಾಗೇ ನಾವು ಆತ್ಮದ ಔನ್ನತ್ಯವನ್ನು ಮರೆತು ಹೊರಗಿನ ಆಡಂಬರಕ್ಕೆ ಮನಸೋತು ಹೋಗಿದ್ದೇವೆ ಎನ್ನುತ್ತಾರೆ.

ನಮ್ಮ ಎಲ್ಲ ಧರ್ಮಗಳೂ ಆತ್ಮೋದ್ಧಾರಕ್ಕೆ ಹೆಚ್ಚಿನ ಮಹತ್ವ ನೀಡಿವೆ. ಬಹಿರಂಗ ಶುದ್ಧಿಗಿಂತಾ ಅಂತರಂಗ ಶುದ್ಧಿಯೇ ಮುಖ್ಯವಾದುದು. ದೇವರಿಗಾಗಿ ಕೋರಿಕೆಗೆ ಗಂಟೆಗಟ್ಟಲೆ ಪೂಜೆ, ಜಪ, ತಪ, ಧ್ಯಾನಗಳನ್ನು ಮಾಡಿಯೂ ಮನಸ್ಸನ್ನು ಕೇಂದ್ರೀಕರಿಸಲಾಗದ ಮೇಲೆ ಅಂತಹಾ ಪೂಜೆ, ಧ್ಯಾನಗಳಿಂದ ಪ್ರಯೋಜನವೇನು? ದೇಹವನ್ನು ನಾನಾ ವಿಧವಾದ ವಸ್ತ್ರ, ಆಭರಣ, ಪ್ರಸಾಧನಗಳಿಂದ ಸಿಂಗರಿಸಿ ಅದನ್ನೇ ನಾವು ಸೌಂದರ್ಯವೆಂದುಕೊಂಡು ಬೀಗುತ್ತೇವೆ. ಆದರೆ ನಿಜವಾದ ಆತ್ಮ ಸೌಂದರ್ಯಕ್ಕೆ ಇಂತಹ ಯಾವುದೇ ಆಡಂಬರವೂ ಬೇಡ.

ಹಾಗಾದರೆ ಸಖೀ ಈ ಆತ್ಮಸೌಂದರ್ಯವೆಂದರೆ ಏನು? ಅದನ್ನು ವೃದ್ಧಿಸಿಕೊಳ್ಳುವುದು ಹೇಗೆ? ನಾವು ಒಳ್ಳೆಯದೆಂದು ನಂಬಿರುವ ತತ್ವಗಳು, ಮೌಲ್ಯಗಳು, ಗುಣಗಳು ಇವುಗಳ ಅಳವಡಿಕೆಯೇ ಆತ್ಮದ ಸಿಂಗಾರದೊಡವೆಗಳು. ಒಳ್ಳೆಯದನ್ನು ಕುರಿತು ಆಲೋಚಿಸುವ, ಒಳ್ಳೆಯದನ್ನು ಮಾಡುವ, ಒಳ್ಳೆಯ ರೀತಿಯಲ್ಲಿ ನಡೆಯುವ ಬದುಕಿಗೆ ಯಾವ ಸೋಗೂ ಬೇಕಿಲ್ಲ. ಇಂದಿನ ಬದುಕಿನ ಅಧೋಗತಿಗೆ ಕಾರಣವೇ ನಾವು. ಆತ್ಮವನ್ನು ನಿರ್ಲಕ್ಷಿಸಿರುವುದು ಬುದ್ಧಿಪ್ರಧಾನವಾದ, ವ್ಯಾವಹಾರಿಕ ಬದುಕೇ ನಮಗಿಂದು ಮಹತ್ವದ್ದಾಗಿರುವುದರಿಂದಲೇ ನಮ್ಮ ಸುತ್ತಲೂ ಅನಾಚಾರ ಹೆಚ್ಚಾಗಿ ಶಾಂತಿ ನೆಮ್ಮದಿಗಳು ಕಾಣೆಯಾಗಿವೆ.

ನಿಜವಾದ ಆತ್ಮಸೌಂದರ್ಯದ ಬಗೆಗೆ ಮನುಜ ತಿಳಿದುಕೊಂಡು ಎಚ್ಚೆತ್ತು ಆಡಂಬರದ ಹಾದಿಯನ್ನು ಬಿಟ್ಟು ಸತ್ಯದ ಹಾದಿಯಲ್ಲಿ ನಡೆಯತೊಡಗಿದಾಗ ನಿಜವಾಗಿ ನಾವು ‘ಆತ್ಮ’ ಹೊಂದಿದವರಾಗುತ್ತೇವೆ. ಇಂತಹ ಶಾಶ್ವತವಾದ ಆತ್ಮ ಸೌಂದರ್ಯವನ್ನು ಪಡೆಯುವೆಡೆಗೆ ಹಂತಹಂತವಾಗಿಯಾದರೂ ಸರಿ ನಾವು ಹೆಜ್ಜೆ ಹಾಕೋಣ. ಅಲ್ಲವೇ ಸಖೀ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...