Home / ಲೇಖನ / ಇತರೆ / ಹೊಸ ಹಾಡು

ಹೊಸ ಹಾಡು

ಪ್ರಿಯ ಸಖಿ,Sangeeta
ಗಳಿಗೆ ಗಳಿಗೆಗೂ ಹೊಸ ಹೊಸರೀತಿಗೆ
ಈ ಜಗವೋಡುತಿದೆ
ಹಳತ ನೋಡಿ ತಾ ಕಿಲಕಿಲ ನಗುತಲಿ
ಓ ಜಗವೋಡುತಿದೆ
ಕವಿ ಪುತಿನ ಅವರ ‘ಹೊಸಹಾಡು’ ಕವನದ ಈ ಸಾಲುಗಳನ್ನು ಕೇಳಿದ್ದೀಯಲ್ಲವೇ? ಬದುಕು ನಿಂತ ನೀರಲ್ಲ ಅದು ನಿರಂತರ ಹೊಸತರ ಅನ್ವೇಷಕ.  ರೀತಿನೀತಿಗಳಿಗೆ ಜಗತ್ತು ಒಡ್ಡಿಕೊಳ್ಳುತ್ತಾ ಸಾಗುತ್ತಿದೆ. ಜೊತೆಗೇ ಹಳತೆಲ್ಲವನ್ನೂ ಗೇಲಿಮಾಡಿ ನಗುತ್ತಲೂ ಇರುತ್ತದೆ. ಕವಿ ಇಲ್ಲಿ ಹಾಗಿದ್ದರೆ ಹಳತೆಲ್ಲವೂ ವ್ಯರ್ಥವೇ? ಹೊಸತು ಯಾವುದೇ ಆದರೂ ಸರಿಯೇ? ಅದರ ಪೂರ್ವಪರ ವಿವೇಚಿಸದೇ ಅದನ್ನು ಅಪ್ಪಿಕೊಳ್ಳುವುದು ಸರಿಯೇ? ಎಂದು ಚಿಂತಿಸುತ್ತಾರೆ.

ಹೊಸತರಲ್ಲಿ ಗುಣಾವಗುಣಗಳಿರುವಂತೆ ಹಳತರಲ್ಲಿ ಕೂಡ ಗುಣಾವಗುಣಗಳಿವೆ. ಹೊಸತು-ಹಳತು ಎರಡರ ಧನಾತ್ಮಕ ಗುಣಗಳನ್ನೂ ಹೀರಿಕೊಂಡು ನಡೆದಾಗ ಮಾತ್ರ ಜಗತ್ತು ಪ್ರಗತಿಯನ್ನು ಸಾಧಿಸುತ್ತದೆ. ಷೋಪೆನ್ ಹಾರ್ ಎಂಬ ಚಿಂತಕ ‘ಹೊಸದು ಬರುವುದು. ಯಾವಾಗಲೂ ಹಳೆಯದರ ಆಧಾರದ ಮೇಲೆಯೇ’ ಎನ್ನುತ್ತಾರೆ. ವಿವೇಚನೆಯಿಲ್ಲದೇ, ಹೂಸತೆನ್ನುತ್ತಾ ವಿಜ್ಞಾನ, ತಂತ್ರಜ್ಞಾನದ ಹೆಸರಿನಲ್ಲಿ ಪ್ರಗತಿಯನ್ನು ಸಾಧಿಸಿದ್ದೇನೆಂದುಕೊಳ್ಳುತ್ತಾ ತನ್ನ ವಿನಾಶವನ್ನು ತಾನೇ ತೋಡಿಕೊಂಡರೆ ಅದು ಮೂರ್ಖತನವಲ್ಲವೇ? ಕವನದ ಕೊನೆಯಲಿ ಕವಿ
ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ
ಈ ಜಗವೋಡುತಿದೆ
ಪ್ರಗತಿಯ ಹಂತಕೊ?
ಪ್ರಣಯ ದುರಂತಕೋ?
ಎಂದು ಪ್ರಶ್ನಿಸುತ್ತಾರೆ. ಹೊಸತೆಲ್ಲವನ್ನೂ ವಿವೇಚನೆಯಿಲ್ಲದೇ ಒಪ್ಪಿಕೊಂಡು ನಡೆದಾಗ ಅದು ನಮ್ಮನ್ನು ಪ್ರಳಯದ ಅಂಚಿಗೂ ತಂದು ನಿಲ್ಲಿಸಬಹುದಲ್ಲವೇ?

ಪ್ರಿಯ ಸಖಿ, ಹೊಸತೇ ಆಗಲಿ, ಹಳತೇ ಆಗಲಿ ಎಲ್ಲವನ್ನೂ ವಿವೇಚನೆಯ ಮೂಸೆಯಲ್ಲಿ ಬೇಯಿಸಿ ಉತ್ತಮವಾದುದನ್ನು ತೆಗೆದುಕೊಂಡು ಕೆಟ್ಟದನ್ನು ಬಿಟ್ಟಾಗ ಮಾತ್ರ ಪ್ರಗತಿ ಸಾಧ್ಯ. ಕಣ್ಣುಮುಚ್ಚಿ ಎಲ್ಲವನ್ನೂ ಸ್ವೀಕರಿಸಿದಲ್ಲಿ ಖಂಡಿತಾ ಪ್ರಳಯವೇ! ನಮ್ಮ ಕವಿವಾಣಿಯೇ ಹೇಳಿಲ್ಲವೆ? ‘ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು’ ಎಂದು ಬರಿಯ ಹಳತಿನಿಂದ ಅಥವಾ ಬರಿಯ ಹೊಸತಿನಿಂದ ವಿನಾಶ ಖಿಂಡಿತಾ ಎರಡರ ಸಮನ್ವಯವೇ ನಿಜವಾದ ಪ್ರಗತಿ ನೀನೇನೆನ್ನುತ್ತಿ ಸಖಿ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...