Home / ಲೇಖನ / ಇತರೆ / ರಸ್ತೆಗಿಳಿಯಲಿದೆ ೫ ಕೋಟಿಯ ‘ಮೇಬ್ಯಾಚ್’ ಕಾರು

ರಸ್ತೆಗಿಳಿಯಲಿದೆ ೫ ಕೋಟಿಯ ‘ಮೇಬ್ಯಾಚ್’ ಕಾರು

ಈ ಕಾರು ಇನ್ನು ೬ ತಿಂಗಳಲ್ಲಿ ಭಾರತೀಯ ಹೆದ್ದಾರಿಗಳಲ್ಲಿ ಚಲಿಸಲಿದೆ. ಡೈಮ್ಲರ್ ಕ್ರೈಸೃರ್ ಕಂಪನಿ ಮರ್ಸಿಡಿಸ್‌ಬೆಂಜ್ ಕಾರುಗಳ ತಯಾರಿಕೆಗೆ ಪ್ರಸಿದ್ಧವಾಗಿದೆ. ಈ ಕಂಪನಿಯು ಪ್ರತಿವರ್ಷ ಕೇವಲ ೧,೦೦೦ ಮೇಬ್ಯಾಚ್‍ಗಳನ್ನು ಉತ್ಪಾದಿಸಬೇಕೆಂದು ಮಿತಿಹಾಕಿ ಕೊಂಡಿದೆ. ಆದರೆ ಈ ಕಾರಿನಲ್ಲಿ ೫ ಕೋಟಿ ಬೆಲೆ ಬಾಳುವಂಥಾದ್ದೇನಿದೆ ಎಂಬ ಪ್ಪಶ್ನೆ ಸಾಮಾನ್ಯವಾಗಿ ಮೂಡುತಿದೆ. ಹಾಗಾದರೆ ನೋಡಿ – ಇದರಲ್ಲಿಯ ಆಂತರೀಕ ವಿನ್ಯಾಸಗಳನ್ನು ೨೦ ವಿಧಗಳಲ್ಲಿ ಬದಲಿಸಬಹುದು. ಬಳಸಲಾಗುವ ಚರ್ಮಕ್ಕೆ ವಿವಿಧ ಆಯ್ಕೆಗಳಿವೆ. ಮರದಲ್ಲಿ೩ ವಿಧ ಮತ್ತು ಬಾಹ್ಯ ಬಣ್ಣದಲ್ಲಿ ೧೭ ವಿಧಗಳಲ್ಲಿ ಆಯ್ಕೆಮಾಡಿಕೊಳ್ಳಬಹುದು. ಎರಡು ಡಜನ್‌ಗೂ ಹೆಚ್ಚು ಆಧುನಿಕ ತಾಂತ್ರಿಕ ಐಷಾರಾಮವನ್ನು ಒಳಗೊಂಡಿದೆ. ಸೀಟ್‌ಗಳಲ್ಲಿಯೇ ವೆಂಟಿಲೇಷನ್ ಇದೆ, ೨.೬೮ ಮೀಟರ್ ಒಳಭಾಗದಲ್ಲಿ ಮಲ್ಟಿಪಲ್ ಡಿ.ವಿ.ಡಿ. ಪ್ಲೇಯರ್ಗಳಿವೆ. ಒಂದು ಟಿ.ವಿ. ಒಂದು ಪ್ರಿಜ್, ಎರಡು ಹ್ಯಾಂಡ್‌ಸಟ್‌ಗಳು ಕಾರ್ಡ್‌ಲೆಸ್ ಫೋನ್‌ಗಳಿವೆಯಲ್ಲದೇ ಬೆಳಕಿಗೆ ಬಣ್ಣಬದಲಿಸಬಲ್ಲ ಮೇಲ್ಚಾವಣಿ, ವಿಶೇಷ ಅಳತೆಯ ಲಗೇಜ್‌ಸೆಟ್, ವಿಶಿಷ್ಟ ಗಾಲ್ಫ್ ಬ್ಯಾಗ್, ಇವೆಲ್ಲವೂ ಮೆಬ್ಯಾಚ್ ವೈಶಿಷ್ಟತೆಯ ಕೆಲವು ಅಂಶಗಳು. ೫೫೧೩ ಸಿ.ಸಿ. ೫೫೦ ಬಿ.ಹೆಚ್.ಪಿ. ಮತ್ತು ಟ್ವಿನ್‌ಟರ್ಬೋದ ಈ ಪೆಟ್ರೋಲ್ ಕಾರು ಕೇವಲ ೫.೪ ಸೆಕೆಂಡುಗಳಲ್ಲಿ ೧೦೦ ಕಿ.ಮೀ. ವೇಗದಲ್ಲಿಚಲಿಸುತ್ತದೆ! ಗರಿಷ್ಟವೆಂದರೂ ಗಂಟೆಗೆ ೨೫೦ ಕಿ.ಮೀ. ವೇಗದಲ್ಲಿ ಓಡಬಲ್ಲದು. ಈ ಕಾರಿನಲ್ಲಿರುವವರ ಸುರಕ್ಷತೆಗಾಗಿ ಅನೇಕ ವ್ಯವಸೆಗಳಿದ್ದು ಅದರಲಿ ೧೦ ಏರ್‌ಬ್ಯಾಗ್‌ಗಳ ವ್ಯವಸ್ಥೆ ಇದೆ. ಇಂಥಹ ಅತ್ಯಮೂಲ್ಯವಾದ ಅದ್ಭುತ ಕಾರನ್ನು (ನಮ್ಮ ದೇಶದಲ್ಲಿ) ಯಾರು ಖರೀದಿಸಬಲ್ಲರು, ಯಾರು ಒಳಗೆ ಕುಳಿತು ಐಷಾರಾಮಿಗಳಾಗಬಲ್ಲರು, ಯಾರು ಬಳೆಸಬಲ್ಲರು ಎಂಬುವುದು ಕೆಲವೇ ದಿನಗಳಲ್ಲಿ ತಿಳಿಯುತ್ತದೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...