Home / ಲೇಖನ / ಇತರೆ / ಮನಸಿನಾಳವು ಮಿಗಿಲು

ಮನಸಿನಾಳವು ಮಿಗಿಲು

ಪ್ರಿಯ ಸಖಿ,

ಪ್ರಪಂಚದಲ್ಲೇ ಅತಿ ಶ್ರೇಷ್ಠ ಜೀವಿ ಮಾನವನೆನ್ನುತ್ತಾರೆ. ಏಕೆಂದರೆ ಅವನು ಚಿಂತಿಸಬಲ್ಲ, ಮಾತಾಡಬಲ್ಲ, ವಿವೇಚಿಸಬಲ್ಲ  ಎಲ್ಲಕ್ಕಿಂತಾ ಹೆಚ್ಚಾಗಿ ಎಲ್ಲವನ್ನೂ ಪ್ರೀತಿಸಬಲ್ಲ ಮನಸ್ಸೊಂದು ಅವನಲ್ಲಿದೆ. ಅದೇ ಅವನ ಹಿರಿಮೆಯನ್ನು ಹೆಚ್ಚಿಸಿದೆ. ಕವಿ ಕುವೆಂಪು ಅವರು ತಮ್ಮ ಒಂದು ಕವನದಲ್ಲಿ,

ಕಡಲಿನಾಳವು ಮಿಗಿಲುManasu
ಕಡಲಿಗಿಂತಲು ಮಿಗಿಲು
ಮನಸಿನಾಳ
ಬಾನಿನಗಲವು ಮಿಗಿಲು
ಬಾನಿಗಿಂತಲು ಮಿಗಿಲು
ಮನುಜನೆದೆಯು

ಎಂದಿದ್ದಾರೆ. ಕಡಲಿನ ಆಳವನ್ನು ಬಾನಿನ ಅಗಲವನ್ನು ಯಾರಿಂದಲೂ ಅಳೆಯಲಾಗಲಿಲ್ಲ. ಅದಕ್ಕಿಂತಾ ಆಳ ಹಾಗೂ ಅಗಲವಾದದ್ದು ಮಾನವನ ಮನಸ್ಸು ಎಂದಿದ್ದಾರೆ ಕವಿ. ನಿಜಕ್ಕೂ ಹೀಗಾದರೆ ಎಷ್ಟು ಚೆನ್ನ ಅಲ್ಲವೇ ಸಖೀ? ಈ ಮಟ್ಟಕ್ಕೆ ನಮ್ಮ ಮನಸ್ಸನ್ನು ನಾವು ಉಪಯೋಗಿಸಿಕೊಳ್ಳುತ್ತಿದ್ದೇವೆಯೇ? ಎಂದು ಒಂದು ಪ್ರಶ್ನೆ ಹಾಕಿಕೊಳ್ಳಲೇಬೇಕು. ನಮ್ಮ ಜನ್ಮವನ್ನು ವ್ಯರ್ಥವಾಗಿಸುತ್ತಿರುವುದನ್ನು ಕಂಡೇ ದಾಸರು “ಮನುಜ ಜನ್ಮ ದೊಡ್ಡದು ಅದ ಹಾನಿ ಮಾಡಬೇಡಿರೋ
ಹುಚ್ಚಪ್ಪಗಳಿರಾ” ಎಂದಿರುವುದು.

ಒಳಿತು-ಕೆಡಕುಗಳೆರಡೂ ವ್ಯಕ್ತಿಯೊಬ್ಬನಲ್ಲಿ ಸಮಪ್ರಮಾಣದಲ್ಲಿ ಮಿಳಿತವಾಗಿರುತ್ತದೆ. ಯಾವುದಕ್ಕೆ ನಾವು ಬದುಕಿನಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡುತ್ತಾ ಹೋಗುತ್ತೇವೋ ಅದು ನಮ್ಮಲ್ಲಿ ಒಂದಾಗುತ್ತಾ ಹೋಗುತ್ತದೆ. ನಮ್ಮ ವ್ಯಕ್ತಿತ್ವವಾಗಿ, ಗುಣವಾಗಿ ನಾವು ಬೆಳೆದಂತೆಲ್ಲಾ ಬೆಳೆಯ ತೊಡಗುತ್ತದೆ. ನಾವು ಮನಃಪೂರ್ವಕವಾಗಿ ತಿರಸ್ಕರಿಸಿದ್ದು ನಮ್ಮಿಂದ ಕಳೆದುಹೋಗುತ್ತಾ ಬರುತ್ತದೆ. ಆದ್ದರಿಂದಲೇ ಇಲ್ಲಿ ಆಯ್ಕೆಗೆ ಹೆಚ್ಚಿನ ಮಹತ್ವವಿದೆ.

ಸಾಫೋಕ್ಲಿಸ್ ಹೀಗೆ ಹೇಳುತ್ತಾನೆ. “ಅದ್ಭುತಗಳು ಅನೇಕ. ಆದರೆ ಮನುಷ್ಯನನ್ನು ಮೀರಿದ ಅದ್ಭುತ ಇಲ್ಲ” ಎಂದು ವ್ಯಕ್ತಿಯೊಬ್ಬನಲ್ಲಿ ಎಷ್ಟೊಂದು ಅದ್ಭುತ ಶಕ್ತಿಗಳು ಇರಬಹುದು. ಅದನ್ನು ಕಂಡುಕೊಳ್ಳುವ ಜವಾಬ್ದಾರಿ ವ್ಯಕ್ತಿಯದೇ ಆಗಿರುತ್ತದೆ. ಅವನು ಮನಸ್ಸು ಮಾಡಿದರೆ ಯಾವುದನ್ನೂ ಸಾಧಿಸಬಲ್ಲ. ತನ್ನಲ್ಲಿರುವ ಒಳಿತನ್ನು, ಪ್ರೀತಿಯನ್ನು ಜಾಗೃತಗೊಳಿಸಿ ಕಡಲಿನ ಆಳಕಿಂತಲೂ ಮಿಗಿಲು, ಬಾನಿನಗಲಕ್ಕಿಂತಲೂ ಮಿಗಿಲಾದ ಮನಸ್ಸನ್ನು ಹೊಂದಿದರೆ ಸಾಮಾನ್ಯ ಮಾನವನೂ ವಿಶ್ವಮಾನವನಾಗುವುದರಲ್ಲಿ ಸಂದೇಹವೇ ಇಲ್ಲ. ನೀನೇನೆನ್ನುತ್ತೀ ಸಖೀ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...