Home / ಲೇಖನ / ಇತರೆ / ಮನಸಿನಾಳವು ಮಿಗಿಲು

ಮನಸಿನಾಳವು ಮಿಗಿಲು

ಪ್ರಿಯ ಸಖಿ,

ಪ್ರಪಂಚದಲ್ಲೇ ಅತಿ ಶ್ರೇಷ್ಠ ಜೀವಿ ಮಾನವನೆನ್ನುತ್ತಾರೆ. ಏಕೆಂದರೆ ಅವನು ಚಿಂತಿಸಬಲ್ಲ, ಮಾತಾಡಬಲ್ಲ, ವಿವೇಚಿಸಬಲ್ಲ  ಎಲ್ಲಕ್ಕಿಂತಾ ಹೆಚ್ಚಾಗಿ ಎಲ್ಲವನ್ನೂ ಪ್ರೀತಿಸಬಲ್ಲ ಮನಸ್ಸೊಂದು ಅವನಲ್ಲಿದೆ. ಅದೇ ಅವನ ಹಿರಿಮೆಯನ್ನು ಹೆಚ್ಚಿಸಿದೆ. ಕವಿ ಕುವೆಂಪು ಅವರು ತಮ್ಮ ಒಂದು ಕವನದಲ್ಲಿ,

ಕಡಲಿನಾಳವು ಮಿಗಿಲುManasu
ಕಡಲಿಗಿಂತಲು ಮಿಗಿಲು
ಮನಸಿನಾಳ
ಬಾನಿನಗಲವು ಮಿಗಿಲು
ಬಾನಿಗಿಂತಲು ಮಿಗಿಲು
ಮನುಜನೆದೆಯು

ಎಂದಿದ್ದಾರೆ. ಕಡಲಿನ ಆಳವನ್ನು ಬಾನಿನ ಅಗಲವನ್ನು ಯಾರಿಂದಲೂ ಅಳೆಯಲಾಗಲಿಲ್ಲ. ಅದಕ್ಕಿಂತಾ ಆಳ ಹಾಗೂ ಅಗಲವಾದದ್ದು ಮಾನವನ ಮನಸ್ಸು ಎಂದಿದ್ದಾರೆ ಕವಿ. ನಿಜಕ್ಕೂ ಹೀಗಾದರೆ ಎಷ್ಟು ಚೆನ್ನ ಅಲ್ಲವೇ ಸಖೀ? ಈ ಮಟ್ಟಕ್ಕೆ ನಮ್ಮ ಮನಸ್ಸನ್ನು ನಾವು ಉಪಯೋಗಿಸಿಕೊಳ್ಳುತ್ತಿದ್ದೇವೆಯೇ? ಎಂದು ಒಂದು ಪ್ರಶ್ನೆ ಹಾಕಿಕೊಳ್ಳಲೇಬೇಕು. ನಮ್ಮ ಜನ್ಮವನ್ನು ವ್ಯರ್ಥವಾಗಿಸುತ್ತಿರುವುದನ್ನು ಕಂಡೇ ದಾಸರು “ಮನುಜ ಜನ್ಮ ದೊಡ್ಡದು ಅದ ಹಾನಿ ಮಾಡಬೇಡಿರೋ
ಹುಚ್ಚಪ್ಪಗಳಿರಾ” ಎಂದಿರುವುದು.

ಒಳಿತು-ಕೆಡಕುಗಳೆರಡೂ ವ್ಯಕ್ತಿಯೊಬ್ಬನಲ್ಲಿ ಸಮಪ್ರಮಾಣದಲ್ಲಿ ಮಿಳಿತವಾಗಿರುತ್ತದೆ. ಯಾವುದಕ್ಕೆ ನಾವು ಬದುಕಿನಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡುತ್ತಾ ಹೋಗುತ್ತೇವೋ ಅದು ನಮ್ಮಲ್ಲಿ ಒಂದಾಗುತ್ತಾ ಹೋಗುತ್ತದೆ. ನಮ್ಮ ವ್ಯಕ್ತಿತ್ವವಾಗಿ, ಗುಣವಾಗಿ ನಾವು ಬೆಳೆದಂತೆಲ್ಲಾ ಬೆಳೆಯ ತೊಡಗುತ್ತದೆ. ನಾವು ಮನಃಪೂರ್ವಕವಾಗಿ ತಿರಸ್ಕರಿಸಿದ್ದು ನಮ್ಮಿಂದ ಕಳೆದುಹೋಗುತ್ತಾ ಬರುತ್ತದೆ. ಆದ್ದರಿಂದಲೇ ಇಲ್ಲಿ ಆಯ್ಕೆಗೆ ಹೆಚ್ಚಿನ ಮಹತ್ವವಿದೆ.

ಸಾಫೋಕ್ಲಿಸ್ ಹೀಗೆ ಹೇಳುತ್ತಾನೆ. “ಅದ್ಭುತಗಳು ಅನೇಕ. ಆದರೆ ಮನುಷ್ಯನನ್ನು ಮೀರಿದ ಅದ್ಭುತ ಇಲ್ಲ” ಎಂದು ವ್ಯಕ್ತಿಯೊಬ್ಬನಲ್ಲಿ ಎಷ್ಟೊಂದು ಅದ್ಭುತ ಶಕ್ತಿಗಳು ಇರಬಹುದು. ಅದನ್ನು ಕಂಡುಕೊಳ್ಳುವ ಜವಾಬ್ದಾರಿ ವ್ಯಕ್ತಿಯದೇ ಆಗಿರುತ್ತದೆ. ಅವನು ಮನಸ್ಸು ಮಾಡಿದರೆ ಯಾವುದನ್ನೂ ಸಾಧಿಸಬಲ್ಲ. ತನ್ನಲ್ಲಿರುವ ಒಳಿತನ್ನು, ಪ್ರೀತಿಯನ್ನು ಜಾಗೃತಗೊಳಿಸಿ ಕಡಲಿನ ಆಳಕಿಂತಲೂ ಮಿಗಿಲು, ಬಾನಿನಗಲಕ್ಕಿಂತಲೂ ಮಿಗಿಲಾದ ಮನಸ್ಸನ್ನು ಹೊಂದಿದರೆ ಸಾಮಾನ್ಯ ಮಾನವನೂ ವಿಶ್ವಮಾನವನಾಗುವುದರಲ್ಲಿ ಸಂದೇಹವೇ ಇಲ್ಲ. ನೀನೇನೆನ್ನುತ್ತೀ ಸಖೀ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...