Home / ಲೇಖನ / ವಿಜ್ಞಾನ / ಕಂಪ್ಯೂಟರ್ ವೈರಸ್?!

ಕಂಪ್ಯೂಟರ್ ವೈರಸ್?!

ಮಾನವ ದೇಹದ ವೈರಸ್ ಒಂದು ಜೈವಿಕ ಅಂಶ. ಮಾನವ ದೇಹಕ್ಕೆ ಜೈವಿಕ ವೈರಸ್ನ ವಿರುದ್ಧ ಹೋರಾಡುವ ಶಕ್ತಿ ಇದೆ. ಆದರೆ ಕಂಪ್ಯೂಟರ್ ವೈರಸ್ ಹಾಗಲ್ಲ. ಇದೊಂದು ಪ್ರೋಗ್ರಾಂ. ಕಂಪ್ಯೂಟರನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದಲೇ ಬರೆಯಲಾಗುತ್ತದೆ. ಈ ಪ್ರೋಗಾಂ ಕಂಪ್ಯೂಟರ್ ಅರಿವಿಗೆ ಬಾರದಂತೆ ಪ್ರವೇಶಿಸುತ್ತದೆ. ನಂತರ ತನ್ನಂತೆ ಇರುವ ಪ್ರೋಗ್ರಾಂಗಳನ್ನು ಸೃಷ್ಟಿಸುತ್ತದೆ. ನಂತರ ಕಂಪ್ಯೂಟರ್ ವಿಚಿತ್ರವಾಗಿ ವರ್ತಿಸುವಂತೆ ಮಾಡುತ್ತದೆ. ಕಂಪ್ಯೂಟರ್ ವೈರಸ್ಸಿಗೂ ಮಾನವ ದೇಹದ ವೈರಸ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಭೌತಿಕ ಹೋಲಿಕೆಯೂ ಇಲ್ಲ. ಆದರೆ ಈ ಎರಡು ವೈರಸ್‌ಗಳು ಮಾಡುವ ವಿಧ್ವಂಸಕ ಕೃತ್ಯಗಳು ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ.

ಕಂಪ್ಯೂಟರ್‌ನಲ್ಲಿ ಶೇಖರವಾಗಿರುವ ಇತರ ಪ್ರೋಗ್ರಾಂಗಳು, ಬೇರೆ ಬೇರೆ ಮಾಹಿತಿಗಳನ್ನು ಈ ವೈರಸ್ ನಾಶಗೊಳಿಸಲು ಪ್ರಾರಂಭಿಸುತ್ತದೆ.

ವೈರಸ್‌ಗಳ ಹುಟ್ಟು : ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ಮತ್ತೊಂದು ಪ್ರೋಗ್ರಾಂ ಬರೆದು ಹಾಳು ಮಾಡಬಹುದೆಂಬ ಐಡಿಯಾ, ಕಂಪ್ಯೂಟರ್‌ಗಳು ಚಲಾವಣೆಗೆ ಬಂದ ಹಲವಾರು ವರ್ಷ ಯಾರಿಗೂ ಗೊತ್ತಿರಲ್ಲಿಲ್ಲ. ಮೊದಲಬಾರಿಗೆ ‘ಜಾನ್‌ವಾನ್ ನ್ಯೂಮ್ಯಾನ್’ ಎಂಬುವವರು ೧೯೫೦ ರಲ್ಲಿ ಇಂತಹ ಪ್ರೋಗ್ರಾಂಗಳನ್ನು ಬರೆಯಬಹುದೆಂದು ಪ್ರತಿಪಾದಿಸಿದ್ದರು. ಇವರ ಮಾತನ್ನು ಯಾರೂ ಕೇಳಲಿಲ್ಲ ನಂತರ ಅಮೇರಿಕಾದ ಎ.ಟಿ ಯಂಡ್ ಟಿ. ಪ್ರಯೋಗಶಾಲೆಯ ವಿಜ್ಞಾನಿಗಳಲ್ಲಿ ಕೆಲವರು ಇಂತಹ ಸಾಧ್ಯತೆ ಇದೆ ಎಂದು ಮನಗಂಡರು ಮತ್ತು ಈ ದೆಸೆಯಲ್ಲಿ ಕಾರ್ಯಪ್ರವೃತ್ತರಾದರು. ಕೆನ್.ಥಾಮಸ್ ಎಂಬುವವರು ಇಂತಹ ಪ್ರೋಗ್ರಾಂಗಳನ್ನು ಬರೆಯಲು ಸಾಧ್ಯವಿದೆ ಎಂದು ಒಮ್ಮೆ ವಿಶ್ವಕ್ಕೆ ತಿಳಿಸಿದರು. ಇವರು ಹೇಳಿದ ಕೆಲವೇ ದಿನಗಳಲ್ಲಿ ಇಂತಹ ಹಲವು ವೈರಸ್‌ಗಳು ಹುಟ್ಟಿಕೊಂಡವು. ಮೊದಮೊದಲು ಹುಟ್ಟಿಕೊಂಡ ವೈರಸ್‌ಗಳು ಹಲವು ಕಿಡಿಗೇಡಿ ಬುದ್ದಿವಂತ ಜನರಿಂದ ರೂಪಿತವಾಗಿದ್ದವು. ಬೇರೆಯವರ ಕಂಪ್ಯೂಟರ್‌ಗಳನ್ನು ನಾಶಗೊಳಿಸುವುದೇ ಇವರ ಉದ್ದೇಶವಾಗಿತ್ತು. ವೈರಸ್‌ಗಳಲ್ಲಿ ಎರಡು ವಿಧಗಳಿವೆ. ಒಂದು ಫೈಲ್ ವೈರಸ್, ಮತ್ತೊಂದು ಬೂಟ್‍ಸೆಕ್ಟರ್ ವೈರಸ್. ಈ ಎರಡು ರೀತಿಯ ವೈರಸ್‌ಗಳು ಪ್ಲಾಪಿಗಳ ಮೂಲಕ ಒಂದೆಡೆಯಿಂದ ಮತ್ತೊಂದೆಡೆಗೆ ಪಯಣಿಸುತ್ತದೆ. ಕಂಪ್ಯೂಟರ್‌ನಲ್ಲಿ ನಾವು ಮಾಡಿದ ಲೆಕ್ಕಪತ್ರಗಳನ್ನು ಹಾರ್ಡ್‌ಡಿಸ್ಕಿನಲ್ಲಿ ಶೇಖಕರಿಸುತ್ತವೆ. ಹೀಗೆ ಶೇಖರವಾಗಿರುವ ಪ್ರತಿ ಕಡತಕ್ಕೂ ಒಂದು ಹೆಸರು ನೀಡಬೇಕು. ನಾವು ನೀಡುವ ಹೆಸರಿನ ಮುಂದೆ ಆ ಕಡತಕ್ಕೆ ಅನ್ವಯವಾಗುವ ರೀತಿಯಲ್ಲಿ ಮೂರು ಅಕ್ಷರಗಳ ವಿಸ್ತರಣಾ ಹೆಸರನ್ನು ಕಂಪ್ಯುಟರ್ ನೀಡುತ್ತದೆ. ಈ ರೀತಿಯ ವಿಸ್ತೀರ್ಣಗಳಲ್ಲಿ COM ಮತ್ತು EXE ಇದೆ. ಫೈಲ್ ವೈರಸ್‌ಗಳು ಈ ವಿಸ್ತೀರ್ಣ ನಾಮಧೇಯವುಳ್ಳ ಕಡತಗಳನ್ನು ನಾಶಗೆಡವುತ್ತದೆ. ಬೂಟ್‌ಸೆಕ್ಟರ್ ವೈರಸ್‌ಗಳು ಪ್ಲಾಪಿಡಿಸ್ಕಿನ ಬೂಟ್ ಸೆಕ್ಟರ್‌ನಲ್ಲಿ ಸೇರಿಕೊಂಡು ಅಲ್ಲಿಂದ ಎಲ್ಲೆಡೆ ಪಸರಿಸುತ್ತವೆ.

ಈ ವೈರಸ್‌ಗಳ ದುರುದ್ದೇಶಗಳು : ಮಾಹಿತಿಗಳನ್ನು ಮತ್ತು ಶೇಖರಣಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವುದು. ಕಂಪ್ಯೂಟರ್ ಕಾರ್ಯನಿರ್ವಹಣಾ ವೇಗವನ್ನು ಕಡಿತಗೊಳಿಸುವುದು. ಕಂಪ್ಯೂಟರ್‌ನ ಶೇಖರಣಾ ಸಾಮರ್ಥ್ಯವನ್ನು ಕಡಿಮೆ ಮಾಡುವುದು. ಮಾನೀಟರ್ ತೆರೆಯ ಮೇಲೆ ಚಿತ್ರ ವಿಚಿತ್ರ ಸಂಕೇತಗಳನ್ನು ಮೂಡಿಸಿ ಬಳಕೆದಾರನಿಗೆ ಗಲಿಬಿಲಿಯುಂಟು ಮಾಡುವುದೇ ಆಗಿದೆ. ಆಗ ಕಂಪ್ಯೂಟರ್ ರೋಗಗ್ರಸ್ತವಾಗುತ್ತದೆ.

ಈ ವೈರಸ್ ತಡೆಯುವ ಕ್ರಮಗಳು : ಕಂಪ್ಯೂಟರ್ ವೈರಸ್ – ಎಲ್ಲರನ್ನೂ ಎಲ್ಲ ಕಂಪ್ಯೂಟರ್‌ಗಳನ್ನು ಚಿಂತೆಗೀಡು ಮಾಡಬಲ್ಲದು. ಆದರೆ ಸಾಕಷ್ಟು ಮುಂಜಾಗ್ರತೆ ವಹಿಸಿದಲ್ಲಿ ಇದರ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು.
೧. ಸಾಧ್ಯವಿದ್ದಷ್ಟು ಬೇರೆಯವರ ಪ್ಲಾಪಿಗಳನ್ನು ಬಳಸಬಾರದು.
೨. ಕಂಪ್ಯೂಟರ್‌ನ್ನು ಪ್ಲಾಪಿಯಿಂದ ಆರಂಭಿಸಬಾರದು (ಬೂಟ್ ಮಾಡಬಾರದು)
೩. ಪ್ರತಿ ಪ್ಲಾಪಿಯಲ್ಲಿಯೂ ‘ರೈಟ್ ಪ್ರೊಟೆಕ್ಟ್‌’ ಎಂಬ ಸೌಲಭ್ಯವಿದೆ. ಈ ಸೌಲಭ್ಯವನ್ನು ಉಪಯೋಗಿಸಿದರೆ ಅಂತಹ ಪ್ಲಾಪಿಯ ಮೇಲೆ ಯಾವುದೇ ರೀತಿಯಲ್ಲಿ ವೈರಸ್ ಬರಲಾರವು.
೪. ಬೇರೆಯವರ ಅಧಿಕೃತ ಸಾಫ್ಟ್‌ವೇರ್ ಅನ್ನು ನಕಲು ಮಾಡಿದರೆ ಅದರಲ್ಲಿವೈರಸ್ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
೫. ವೈರಸ್‌ಗಳ ವಿರುದ್ಧ ಸಮರ ಸಾರಿರುವ ಕಂಪನಿಗಳು ರೂಪಿಸಿರುವ ವೈರಸ್ ವಿರೋಧಿ ಪ್ರೋಗ್ರಾಂಗಳನ್ನು ಕೊಳ್ಳಬೇಕು.
೬. ಪ್ರತಿಪ್ಲಾಪಿಗಳಲ್ಲಿಯೂ ವೈರಸ್‌ಗಳ ನಕಲಿ ಸಹಿಯನ್ನು ಹಾಕಿಡಬೇಕು. ವೈರಸ್‌ಗಳು ಅಂತಹ ಪ್ಲಾಪಿಗೆ ವರ್ಗಾವಣೆಯಾಗುವುದಿಲ್ಲ.

ವೈರಸ್ ಪತ್ತೆದಾರಿ: ಕಂಪ್ಯೂಟರ್ ವೈರಸ್‌ಗಳು ತಮ್ಮಸಂಖ್ಯೆಯನ್ನು ದ್ವಿಗುಣಗೂಳಿಸಿ ಕೊಳ್ಳುವಾಗ ಒಂದೇ ರೀತಿಯ ಸಂಕೇತಗಳನ್ನು ಉಳಿಸಿಕೊಳ್ಳುತ್ತವೆ. ಒಂದೇ ರೀತಿಯ ಸಂಕೇತಾಕ್ಷರಗಳು ಅಸಂಖ್ಯವಿದ್ದಾಗ ಕಂಪ್ಯೂಟರ್‌ನ ಶೇಖರಣಾ ಸಾಮರ್ಥ್ಯ ತಗ್ಗುತ್ತದೆ. ವೈರಸ್‌ನ ಒಂದೇ ರೀತಿಯ ಸಂಕೇತಾಕ್ಷರಗಳನ್ನು ಅದರ ಸಹಿ ಅಥವಾ ‘ವೈರಸ್ ಸಿಗ್ನೇಚರ್’ ಎಂದು ಕರೆಯುತ್ತಾರೆ. ಈ ಸಿಗ್ನೇಚರ್‌ಗಳನ್ನು ಗುರುತಿಸುವುದರ ಮೂಲಕ ಎಂತಹ ವೈರಸ್ ಇದೆ ಎಂದು ಕಂಡು ಹಿಡಿಯಬಹುದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...