Home / ಕವನ / ಅನುವಾದ / ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

ಬರಲಿರುವ ಕಾಲದ ಯುವಕರೇ,
ಇನ್ನೂ ಕಟ್ಟದಿರುವ ನಗರಗಳಲ್ಲಿ
ಹುಟ್ಟದಿರುವ ಎಳೆಯ ಜೀವಗಳೇ,
ಕ್ಷುದ್ರವಾಗಿ ಸತ್ತ ಈ ಮುದುಕನ ಮಾತನ್ನು ಕೇಳಿ.

ತನ್ನ ಹೊಲವನ್ನು ಉತ್ತು ಬಿತ್ತದ ರೈತನಂತೆ.
ಮನೆಯ ಚಾವಣಿಗೆ ತೊಲೆ ಕೂಡಿಸಿವುದನ್ನು ಅರ್‍ಧಕ್ಕೇ ಬಿಟ್ಟು ಓಡಿದ ಬಡಗಿಯಂತೆ

ನಾನೂ ಕಾಲ ದಂಡಮಾಡಿದೆ,
ದಿನಗಳನ್ನು ಸುಮ್ಮನೇ ಕಳೆದೆ.
ಹೇಳದೆ ಉಳಿದಿರುವುದನ್ನೆಲ್ಲ ನೀವು ಹೇಳಿ.
ಮಾಡದೆ ಉಳಿದಿರುವುದನ್ನೆಲ್ಲ ನೀವು ಮಾಡಿ.
ನನ್ನನ್ನು ಮರೆತುಬಿಡಿ. ನನ್ನ ನಿದರ್ಶನ
ನಿಮ್ಮ ದಾರಿ ತಪ್ಪಿಸದಿರಲಿ.

ಬಿತ್ತದ ಬೆಳೆಯದ ಜನರೊಂದಿಗೆ ಕೂತು
ಅವರು ಬೇಯಿಸದ ಔತಣವನ್ನು ಮೆಚ್ಚಿಮೆಚ್ಚಿ ಉಂಡೆ, ಏಕೆ?
ನನ್ನ ಸುಂದರ ಸೂಕ್ತಿಗಳನ್ನು ಅವರ ಹರಟೆಗೆ
ಉಪ್ಪಿನಕಾಯಿ ಹಾಗೆ ಒದಗಿಸಿದೆ, ಏಕೆ?
ಅಕ್ಷರಕ್ಕಾಗಿ ಹಸಿದವರು, ಕವಿತೆಗೆ ಬಾಯಾರಿದವರು
ಬೀದಿಯಲ್ಲಿ ಸುಮ್ಮನೇ ಸುತ್ತುತ್ತಿದ್ದರು.

ಊರುಗಳನ್ನು ಕಟ್ಟುವ ಎಡೆಯಲ್ಲಿ ನನ್ನ ಕವಿತೆಯೇಕೆ ಚಿಗುರುವುದಿಲ್ಲ?
ವೇಗವಾಗಿ ಓಡುವ ಸಿಟಿಯ ರೈಲುಗಳ ಹೊಗೆ
ಆಕಾಶದಲ್ಲಿ ಒಂದಷ್ಟು ಕಾಲ ಉಳಿಯುವಂತೆ
ನನ್ನೆ ಕವಿತೆಯೇಕೆ ಉಳಿಯುವುದಿಲ್ಲ?

ದುಡಿವವರ ಪಾಲಿಗೆ ನನ್ನ ಮಾತು
ಬಾಯಿಗೆ ಹೊಯ್ದ ಬೂದಿಯಂತೆ,
ಕುಡುಕನ ತೊದಲಿನಂತೆ.

ಯುವಕರೇ, ನಿಮಗೆ ಒಂದು ನುಡಿಯನ್ನೂ ಕಲಿಸಲಾರೆ.
ನಡುಗುವ ಬೆರಳೆತ್ತಿ ಇಗೋ ಈ ದಾರಿ ಸರಿ ಎವ್ನಲಾರೆ.
ಎಂದೂ ಎಲ್ಲೂ ಹೋಗದವನು ದಾರಿ ಹೇಗೆ ತೋರಬಲ್ಲ?

ಬದುಕು ದಂಡ ಮಾಡಿದವನು ನಾನು ಹೇಳುವುದಿಷ್ಟೆ-
ನಮ್ಮ ಕೊಳೆತ ಬಾಯಿ ಮುಕ್ಕಳಿಸುವ ಯಾವ ಮಾತನ್ನೂ ಕೇಳಬೇಡಿ.
ಸೋತ ಬೇಸತ್ತ ನಮ್ಮ ಯಾವ ಆದೇಶವನ್ನೂ ಪಾಲಿಸಬೇಡಿ.

ನಾವು ಹಾಳು ಮಾಡಿದ ಹೊಲ ಮತ್ತೆ ವಸುಂಧರೆಯಾಗಲು,
ನಾವು ವಿಷ ತುಂಬಿದ ನಗರ ಜನ ಬದುಕಲು ಯೋಗ್ಯವಾಗಲು
ಏನು ಮಾಡಿದರೆ ಒಳಿತೆಂದು ನಿಮಗೆ ತೋರುವುದೋ ಹಾಗೆ ಮಾಡಿ.
*****
ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...