Home / ಕವನ / ಅನುವಾದ / ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

ಬರಲಿರುವ ಕಾಲದ ಯುವಕರೇ,
ಇನ್ನೂ ಕಟ್ಟದಿರುವ ನಗರಗಳಲ್ಲಿ
ಹುಟ್ಟದಿರುವ ಎಳೆಯ ಜೀವಗಳೇ,
ಕ್ಷುದ್ರವಾಗಿ ಸತ್ತ ಈ ಮುದುಕನ ಮಾತನ್ನು ಕೇಳಿ.

ತನ್ನ ಹೊಲವನ್ನು ಉತ್ತು ಬಿತ್ತದ ರೈತನಂತೆ.
ಮನೆಯ ಚಾವಣಿಗೆ ತೊಲೆ ಕೂಡಿಸಿವುದನ್ನು ಅರ್‍ಧಕ್ಕೇ ಬಿಟ್ಟು ಓಡಿದ ಬಡಗಿಯಂತೆ

ನಾನೂ ಕಾಲ ದಂಡಮಾಡಿದೆ,
ದಿನಗಳನ್ನು ಸುಮ್ಮನೇ ಕಳೆದೆ.
ಹೇಳದೆ ಉಳಿದಿರುವುದನ್ನೆಲ್ಲ ನೀವು ಹೇಳಿ.
ಮಾಡದೆ ಉಳಿದಿರುವುದನ್ನೆಲ್ಲ ನೀವು ಮಾಡಿ.
ನನ್ನನ್ನು ಮರೆತುಬಿಡಿ. ನನ್ನ ನಿದರ್ಶನ
ನಿಮ್ಮ ದಾರಿ ತಪ್ಪಿಸದಿರಲಿ.

ಬಿತ್ತದ ಬೆಳೆಯದ ಜನರೊಂದಿಗೆ ಕೂತು
ಅವರು ಬೇಯಿಸದ ಔತಣವನ್ನು ಮೆಚ್ಚಿಮೆಚ್ಚಿ ಉಂಡೆ, ಏಕೆ?
ನನ್ನ ಸುಂದರ ಸೂಕ್ತಿಗಳನ್ನು ಅವರ ಹರಟೆಗೆ
ಉಪ್ಪಿನಕಾಯಿ ಹಾಗೆ ಒದಗಿಸಿದೆ, ಏಕೆ?
ಅಕ್ಷರಕ್ಕಾಗಿ ಹಸಿದವರು, ಕವಿತೆಗೆ ಬಾಯಾರಿದವರು
ಬೀದಿಯಲ್ಲಿ ಸುಮ್ಮನೇ ಸುತ್ತುತ್ತಿದ್ದರು.

ಊರುಗಳನ್ನು ಕಟ್ಟುವ ಎಡೆಯಲ್ಲಿ ನನ್ನ ಕವಿತೆಯೇಕೆ ಚಿಗುರುವುದಿಲ್ಲ?
ವೇಗವಾಗಿ ಓಡುವ ಸಿಟಿಯ ರೈಲುಗಳ ಹೊಗೆ
ಆಕಾಶದಲ್ಲಿ ಒಂದಷ್ಟು ಕಾಲ ಉಳಿಯುವಂತೆ
ನನ್ನೆ ಕವಿತೆಯೇಕೆ ಉಳಿಯುವುದಿಲ್ಲ?

ದುಡಿವವರ ಪಾಲಿಗೆ ನನ್ನ ಮಾತು
ಬಾಯಿಗೆ ಹೊಯ್ದ ಬೂದಿಯಂತೆ,
ಕುಡುಕನ ತೊದಲಿನಂತೆ.

ಯುವಕರೇ, ನಿಮಗೆ ಒಂದು ನುಡಿಯನ್ನೂ ಕಲಿಸಲಾರೆ.
ನಡುಗುವ ಬೆರಳೆತ್ತಿ ಇಗೋ ಈ ದಾರಿ ಸರಿ ಎವ್ನಲಾರೆ.
ಎಂದೂ ಎಲ್ಲೂ ಹೋಗದವನು ದಾರಿ ಹೇಗೆ ತೋರಬಲ್ಲ?

ಬದುಕು ದಂಡ ಮಾಡಿದವನು ನಾನು ಹೇಳುವುದಿಷ್ಟೆ-
ನಮ್ಮ ಕೊಳೆತ ಬಾಯಿ ಮುಕ್ಕಳಿಸುವ ಯಾವ ಮಾತನ್ನೂ ಕೇಳಬೇಡಿ.
ಸೋತ ಬೇಸತ್ತ ನಮ್ಮ ಯಾವ ಆದೇಶವನ್ನೂ ಪಾಲಿಸಬೇಡಿ.

ನಾವು ಹಾಳು ಮಾಡಿದ ಹೊಲ ಮತ್ತೆ ವಸುಂಧರೆಯಾಗಲು,
ನಾವು ವಿಷ ತುಂಬಿದ ನಗರ ಜನ ಬದುಕಲು ಯೋಗ್ಯವಾಗಲು
ಏನು ಮಾಡಿದರೆ ಒಳಿತೆಂದು ನಿಮಗೆ ತೋರುವುದೋ ಹಾಗೆ ಮಾಡಿ.
*****
ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...