Home / ಕವನ / ಅನುವಾದ / ಹಾಗೆ ಆಗಬಹುದಿತ್ತು ಸಮುದ್ರವೇ

ಹಾಗೆ ಆಗಬಹುದಿತ್ತು ಸಮುದ್ರವೇ

ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ,
ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ
ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ
ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ
ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ.

ತನ್ನ ಕುರಿತು, ಪರರ ಕುರಿತು,
ಕ್ಷಣಕ್ಕೊಂದು ರೂಪತಾಳಿ ಜಾರಿ ಹೋಗುವ
ಬದುಕನ್ನು ಕುರಿತು ಚಿಂತೆಯನ್ನು ಹೊದ್ದುಕೊಂಡೆ.
ಬಡಿಯಲೋ ಕೊಲ್ಲಲೋ ಕೈಯೆತ್ತುವ ಮುನ್ನ
ತುಯ್ಯಲಾಡುವ ಮನದವನಾದೆ.

ಬೆಕ್ಕು ಸುಳಿದಂತೆ ಲೋಕದಲ್ಲಿ ಸುಳಿವ
ಕೆಡುಕನ್ನು ಕಣ್ಣಾರೆ ಕಾಣಲು ಬಯಸಿದೆ.
ಜಗದ ಯಂತ್ರದ ಚಲನೆ ತಟ್ಟನೆ
ನಿಲ್ಲಿಸುವ ಸನ್ನೆ ಗೋಲು ಎಲ್ಲೆಂದು ತಡುಕಿದೆ.

ಕ್ಷಣದರ್ಧದಲ್ಲಿ ಲೋಕದೆಲ್ಲ ಸಂಭವಗಳು ಛಿದ್ರವಾಗುವವು
ಎಂದರಿತು ನನ್ನದೇ ಹಾದಿ ಮಾಡಿಕೊಂಡು
ನಾನು ಸಾಗಿದ್ದೆ. ನನ್ನ ಮನಸ್ಸು
ತನ್ನ ಸೆಳೆವ ಮತ್ತೊಂದು ಹಾದಿಯಲ್ಲಿ ನಡೆದಿತ್ತು.

ನಿರ್ಧರಿಸುವ ಮನಸ್ಸು, ನಿರ್ವಚನಗೊಂಡ ಮನಸ್ಸು
ಎರಡನ್ನೂ ಕತ್ತರಿಸಿ ಬೇರೆ ಮಾಡುವ ಚೂರಿ
ಬೇಕಾಗಿತ್ತೋ ಏನೋ. ನಿನ್ನ ಸಿಡಿಲಕ್ಷರಗಳು
ಕಿಕ್ಕಿರಿದ ಗ್ರಂಥವಲ್ಲ, ಬೇರೆಯದೇ ಪುಸ್ತಕ
ಬೇಕಾಗಿತ್ತು ನನಗೆ. ಆದರೂ ಬೇಸರವಿಲ್ಲ.
ನಿನ್ನ ಹಾಡು ಅಂತರಾಳದ ಗಂಟುಗಳ ತೊಡಕು ಸಡಿಲಿಸುವುದು
ಈ ಕ್ಷಣದ ನಿನ್ನ ಆರ್‍ಭಟ ನಕ್ಷತ್ರಗಳ ಮುಟ್ಟುವುದು.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...