Home / ಕವನ / ಕವಿತೆ / ನೆಲಮಣ್ಣಿನ ಸ್ವಯಂ ಸ್ವಯಂವರ

ನೆಲಮಣ್ಣಿನ ಸ್ವಯಂ ಸ್ವಯಂವರ

ಅದೇ ಆ ಕೆಂಪುಮಣ್ಣಿನ
ಗದ್ದೆಯ ತುಂಬಾ
ಪ್ರತಿಸಲದಂತೆ ಈ ಸಲವೂ
ಹೊಸ ಬೀಜಗಳದ್ದೇ ಬಿತ್ತು.
ಮೋಹನ ರಾಗದ ಮಾಲಿಕೆಗಳ
ಜೊತೆ ತರವೇಹಾರಿ
ತಳಿಬೀಜಗಳ ಊರಿಹೋಗುವ
ಆತನಿಗೋ ಪುರಸೊತ್ತಿಲ್ಲದ ದಣಿವು.

ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ
ಬೀಜ ಹಾಕುವುದೇನು ಸಾಮಾನ್ಯವೇ?
ಆ ಮಣ್ಣಿನ ಹದ ಈ ನೆಲಕ್ಕಿಲ್ಲ.
ಈ ನೆಲದ ಗುಣ ಆ ಮಣ್ಣಿಗೆಲ್ಲಿ?
ನೆಲಮಣ್ಣಿನ ಕಾವು
ಆತನಿಗೆ ಮಾತ್ರ ಗೊತ್ತು.
ರಾಗ ಹೊರಡಿಸುವ, ಕೆರಳಿಸುವ
ಕೈಬೆರಳಿನಾಟವ ಹೂಡುವ ಆತನಿಗೋ
ಗದ್ದೆ ಗದ್ದೆಗಳ ಮೇಲೆಲ್ಲಾ ಮೋಹ.

ಲಾಗಾಯ್ತಿನಿಂದ ಸೀಮೆಗೊಪ್ಪುವ
ಬೀಜಗಳ ಹೊತ್ತು ಹೆತ್ತು
ಭಾರವಾದ ಗದ್ದೆಗಳಿಗೆ
ಈಗೀಗ ಉರಿ ನವೆಯ ಜಡ್ಡು.
ಹಾಗಾಗೇ ಬೀಜಕ್ಕೆ ತಕ್ಕ ಪೈರು
ಕೊಡುವ ಕೆಲಸ
ನೆನೆಗುದಿಗೆ ಬಿದ್ದಿದೆ.

ಮದುಮಗಳ ಹುಸಿ ಮೌನದಂತೆ
ತಣ್ಣಗೆ ಕುಳಿತು ಕಾಯುತ್ತಲೇ ಇವೆ
ಹೊಲಗದ್ದೆ ಬಯಲ ಮಹಲು.
ಮುಗಿಲು ಮುರಿದು ಬೀಳುವ
ಹೊತ್ತಿಗಾಗೇ ಹೊಂಚಿ ಕೂತಿದೆ.

ಕೇಳದ ಗಾನವನ್ನು ಎದೆಯಾಳದಿಂದಲೇ
ಮೀಟಿ ತೆಗೆಯುವ ಹುಕಿ ಹತ್ತಿಸಿಕೊಂಡ
ಗದ್ದೆಗಳ ಆಲಾಪ
ಬಾನಾಡಿಗಳಿಗಷ್ಟೇ ಶ್ರವಣಸಾಧ್ಯ.
ಗದ್ದೆಗಳೀಗ ಬಿತ್ತಿದ ಬೀಜಗಳ
ಫಸಲಿಗೆ ಪೈಪೋಟಿಗಿಳಿಯುತ್ತಿಲ್ಲ.
ಬೀಜದವನ ದಾರಿ ಕಾಯುತ್ತಲೂ ಇಲ್ಲ.
ಬೀಜಗಳನ್ನೆ ನಿರಾಕರಿಸುತ್ತಿವೆ.
ನೆಲಮಣ್ಣು ಮಣ್ಣನೆಲ
ಸ್ವಯಂ ಸ್ವಯಂವರದ ಸುಖ ಕಾಣುತ್ತಿವೆ.

ಅವಳೋ ಅವಳೆದೆಯ ಮೋಹನ ರಾಗಕ್ಕೆ
ಕಿವಿಯಾಗಿದ್ದಾಳೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...