Home / ಕವನ / ಕವಿತೆ / ನಾನು ನನ್ನವಳ ಬಾಳು

ನಾನು ನನ್ನವಳ ಬಾಳು

ನಾನು, ನನ್ನವಳ ಬಾಳು
ಏನು ಬೇರೆ ಅಂತ ಹೇಳಿ ಕೊಳ್ಳೋಣ.

ಸಂಸಾರ ವ್ರತದಲಿ
ನನ್ನನ್ನವಳು ನಾನವಳನ್ನು
ಹಂಗಿಸಿ, ಜಂಖಿಸಿ ನಡೆವುದು
ಉದ್ದಕ್ಕೂ ಇದ್ದದ್ದೆ !
ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಕೂಡಿ ಬಾಳುವಾಗ
ಇದು ಸರ್ವೇ ಸಾಮಾನ್ಯತಾನೆ ?

ಎಲ್ಲದರಲಿ
ನನಗವಳು ನಾನವಳಿಗಿರಲಿ
ಅಂಕುಶವಿರಲಿ
ನ್ಯಾಯ, ಚಾರಿತ್ರ್ಯ ಕಡೆ ನಿಗಾ ಇರಲಿ
ಒಂದು ಮಾನದಂಡವಿರಲಿ ಸಿದ್ಧಾಂತ ಪಾಲಿಸುವೆವು.

ಸಮಯದಿ
ಇಬ್ಬರೂ ಕೋಣರಾಗದೆ
ಒಬ್ಬರಾದರೂ ಜಾಣರಾಗಿ
ಮೇಲು, ಕೀಳು ಸರಿ ಹೊಂದಿಸಿ
ಏರು ಇಳುವಿನಲ್ಲಿ ಮೋರೆ ತಿರುವದೆ
ಭಾವಾವೇಶದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗದೆ
ವಿವೇಕದಣೆಯಲ್ಲಿ… ನಿಂತು, ನಿಂತು, ಸಾಗುವೆವು.

ನಾವು
ಪರಸ್ಪರರ ಶಕ್ತಿ, ಯುಕ್ತಿಗಳ ಬಗ್ಗೆ ಬಹಳ ಆಡುವುದಿಲ್ಲ
ಉಬ್ಬಿ ಹೋಗುವುದು
ಕೀಳಿರಿಮೆಯಲ್ಲಿ ನರಳುವುದು
ಬೇಡವೆನ್ನುವೆವು
ಬದುಕಿನಲಿ
ಅನಿವಾರ್ಯವೆಂದು
ತ್ಯಾಗ, ಸೇವೆಗೆ ಮುಂದಾಗಿ
ರಾಜಿ ಮಾಡಿಕೊಳ್ಳುವೆವು.

ದೂರ, ದೂರ ಹೋಗಿ
ಎಲ್ಲಾ ರೀತಿಯ ಆರೋಗ್ಯಕ್ಕೆ ಎರವಾಗಿ
ದುರಂತಕ್ಕೆ ತಲೆಕೊಡುವ ಸಾಧ್ಯತೆಗಂಜಿ
ಯಾರಿಗೆ ತಾನೆ ಎಲ್ಲದರಲಿ ಸಮನಾಗಿರುವುದೆಂಬ
ವಾಸ್ತವವ ನಂಬಿ
ಕಳೆದು ಉಳಿದು ಕೊಳ್ಳುವ
ಛಲ, ಛಾತಿಯಲಿ ಮುಂದುವರಿಯುತಿಹೆವು

ಯಾವ ಮನ
ಇರುವುದರಲ್ಲಿ ಏನು ಕಾಣುವುದಿಲ್ಲ
ಅದ ಕಾಣದು ಇನ್ನಾವುದರಲ್ಲೂ…!
ಭೃಂಗದ ತೆರ
ಅದಕೆ, ಇದಕೆ, ಎದೆದಕೋ…
ಅಲೆದಲೆದು
ಬರಿದೆ ದಣಿವುದು; ಸಾವುದೆಂಬ
ಎಚ್ಚರಿಕೆ ಮನದಲಿರಿಸಿ ನಡೆಯುತಿಹೆವು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...