ಮುಖಾ ಮುಖಿ

ನಾನು
‘ಅವನನ್ನು’ ಕಾಣ ಹೋದೆ
ಬೇಡಿಕೆ ಪಟ್ಟಿ
ಹನುಮನ ಬಾಲದಂತಿತ್ತು.

ಎದುರಿಗೆ ನಿಂತು
ಇಲ್ಲದ ಭಯ, ಭಕ್ತಿ ನಟಿಸುತ್ತ
“ನೀನೆ ನನಗೆ ಎಲ್ಲ
ನಿನ್ನದೇ ಇದು ಎಲ್ಲ
ನಾನು, ನನ್ನದೆಂಬುದೇನೂ ಇಲ್ಲ”

ನನ್ನ ಊನ, ವಕ್ರ ನೋಡಬೇಡ
ನಿನಗೇನು ಗುನ್ನ ಗೂಸ ಇಲ್ಲ
ಯಾರೂ… ಏನು ಬೇಕಾಗಿಲ್ಲ;

ನೀನು ನಾವಲ್ಲ!
ಧ್ಯಾನಿಸಬೇಕೆಂಬುದರ ವಿನಃ
ಅನ್ಯ ನಿರೀಕ್ಷೆಯಿಲ್ಲ.

ನೀನು ನಮ್ಮ ಧಣಿ!
ನಮ್ಮ ಕೋರಿಕೆ ಸಲ್ಲಿಸು
ನಿನ್ನನ್ನು ನೀನು ಸಾಬೀತು ಮಾಡಿಕೊ…
ಎಂದೊದರಿದೆ
ಎಂದಿನಂತೆ ಒಂದೇ ಉಸಿರಿಗೆ.

ಅವನು
ಮುಸು, ಮುಸು ನಕ್ಕಂತಾಗಿ
ಗಲಿ, ಬಿಲಿಗೊಂಡೆ.

ಇಲ್ಲಿ
ಎಲ್ಲವನ್ನು ಸೃಷ್ಟಿಸಿ
ಬಿಟ್ಟಿಹನು.

ನಾವು
ಯಾವುದು ಎಷ್ಟು ಬೇಕೋ ಅಷ್ಟು
ಬಳಸಿಕೊಳ್ಳಬೇಕು
ಬದುಕು ಕಟ್ಟಿಕೊಳ್ಳಬೇಕು.

ಬಾಳಿನಲ್ಲಿ
ಕಷ್ಟ, ಸುಖದ ತಟ್ಟೆಗಳು
ಎಂದೆಂದಿಗೂ ಸರಿದೂಗವೆಂದು
ಯಾರಿಗೆ ತಿಳಿದಿಲ್ಲ ?

ಮಕ್ಕಳಂತೆ
ದಿಗಿಲು ಬಿದ್ದು
ಪ್ರತಿ ಬಾರಿ ಓಡಿಹೋಗಿ
ದುಂಬಾಲು ಬೀಳೋದು
ನಮಗೆ, ನಮ್ಮದಕ್ಕೆ, ಅರ್ಥವನ್ನು ತರುವುದೇ?

ಜಿಜ್ಞಾಸೆ ಎದ್ದಿತು
ಸುಮ್ಮನೆ ಹೊರಬಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳಕೊಂಡವನು
Next post ಆನು ಪೇಳಿದೆಲ್ಲವನು ಮಾಡದೊಡೇನಂತೆ ?

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…