Home / ಕವನ / ಕವಿತೆ / ಮುಖಾ ಮುಖಿ

ಮುಖಾ ಮುಖಿ

ನಾನು
‘ಅವನನ್ನು’ ಕಾಣ ಹೋದೆ
ಬೇಡಿಕೆ ಪಟ್ಟಿ
ಹನುಮನ ಬಾಲದಂತಿತ್ತು.

ಎದುರಿಗೆ ನಿಂತು
ಇಲ್ಲದ ಭಯ, ಭಕ್ತಿ ನಟಿಸುತ್ತ
“ನೀನೆ ನನಗೆ ಎಲ್ಲ
ನಿನ್ನದೇ ಇದು ಎಲ್ಲ
ನಾನು, ನನ್ನದೆಂಬುದೇನೂ ಇಲ್ಲ”

ನನ್ನ ಊನ, ವಕ್ರ ನೋಡಬೇಡ
ನಿನಗೇನು ಗುನ್ನ ಗೂಸ ಇಲ್ಲ
ಯಾರೂ… ಏನು ಬೇಕಾಗಿಲ್ಲ;

ನೀನು ನಾವಲ್ಲ!
ಧ್ಯಾನಿಸಬೇಕೆಂಬುದರ ವಿನಃ
ಅನ್ಯ ನಿರೀಕ್ಷೆಯಿಲ್ಲ.

ನೀನು ನಮ್ಮ ಧಣಿ!
ನಮ್ಮ ಕೋರಿಕೆ ಸಲ್ಲಿಸು
ನಿನ್ನನ್ನು ನೀನು ಸಾಬೀತು ಮಾಡಿಕೊ…
ಎಂದೊದರಿದೆ
ಎಂದಿನಂತೆ ಒಂದೇ ಉಸಿರಿಗೆ.

ಅವನು
ಮುಸು, ಮುಸು ನಕ್ಕಂತಾಗಿ
ಗಲಿ, ಬಿಲಿಗೊಂಡೆ.

ಇಲ್ಲಿ
ಎಲ್ಲವನ್ನು ಸೃಷ್ಟಿಸಿ
ಬಿಟ್ಟಿಹನು.

ನಾವು
ಯಾವುದು ಎಷ್ಟು ಬೇಕೋ ಅಷ್ಟು
ಬಳಸಿಕೊಳ್ಳಬೇಕು
ಬದುಕು ಕಟ್ಟಿಕೊಳ್ಳಬೇಕು.

ಬಾಳಿನಲ್ಲಿ
ಕಷ್ಟ, ಸುಖದ ತಟ್ಟೆಗಳು
ಎಂದೆಂದಿಗೂ ಸರಿದೂಗವೆಂದು
ಯಾರಿಗೆ ತಿಳಿದಿಲ್ಲ ?

ಮಕ್ಕಳಂತೆ
ದಿಗಿಲು ಬಿದ್ದು
ಪ್ರತಿ ಬಾರಿ ಓಡಿಹೋಗಿ
ದುಂಬಾಲು ಬೀಳೋದು
ನಮಗೆ, ನಮ್ಮದಕ್ಕೆ, ಅರ್ಥವನ್ನು ತರುವುದೇ?

ಜಿಜ್ಞಾಸೆ ಎದ್ದಿತು
ಸುಮ್ಮನೆ ಹೊರಬಂದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...