Home / ಲೇಖನ / ವಿಜ್ಞಾನ / ತಂತಿ ರಹಿತ ಟೆಲಿಫೋನಗಳು

ತಂತಿ ರಹಿತ ಟೆಲಿಫೋನಗಳು

ಇಂದಿನ ಕಾಲಮಾನದಲ್ಲಿ ಕಾರ್ಡ್‌ಲೆಸ್ ಫೋನ್‌ಗಳು ಸರ್ವೆಸಾಮಾನ್ಯವಾಗಿವೆ ಮತ್ತು ಅಷ್ಟೇನು ಜನಸಾಮಾನ್ಯರ ಸಂಪರ್ಕ ಸಾಧ್ಯವಾಗಿಲ್ಲ. ಇಂಥಹ ತಂತಿ ರಹಿತ ಫೋನ್‌ಗಳನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧನವನ್ನಾಗಿ ಮಾಡಲು ಅಸಂಖ್ಯಾತವಾಗಿ ನಿರ್‍ಮಾಣ ಮಾಡಲಾಗುತ್ತದೆ.

ಅಮೇರಿಕಾ ವ್ಯಾಂಡನ್‌ಬಗ್ ವಾಯುದಳದ ನೆಲೆಯಿಂದ ಡೆಲ್ಟಾ-೨ ಉಡಾವಣಾ ನೌಕೆಯಿಂದ ಹಾರಿಸಲಾದ ಐದು ಹೊಸ ಉಪಗ್ರಹಗಳಿಂದ ಇದು ಕೆಳಮಟ್ಟದ ಭೂಕಕ್ಷೆಯಲ್ಲಿ ಇರುವ ಇನ್ನಿತರ ಉಪಗ್ರಹದೊಂದಿಗೆ ಸೇರಿಕೊಂಡು ಇವು ‘ಐರಿಡಿಯಂ’ ಎಂಬ ಜಾಗತಿಕ ಸಂಪರ್ಕ ಜಾಲವನ್ನು ನಿರ್ಮಿಸುತ್ತವೆ. ಈ ವ್ಯವಸ್ಥೆಯಿಂದಾಗಿ ಯಾರಾದರೂ ಯಾವ ಸಮಯಕ್ಕಾದರೂ ಜಗತ್ತಿನ ಯಾವ ಮೂಲೆಯೇ ಇರಲಿ, ಟೆಲಿಫೋನ್ ಅಥವಾ ಪೇಜರ್‌ನೊಡನೆ ಸಂಪರ್ಕ ಸಾಧಿಸಬಹುದಾಗಿದೆ. ಇದು ೧೯೯೮ ರ ಸೆಪ್ಟೆಂಬರ್‍ನಿಂದ ಕಾರ್ಯರೂಪಕ್ಕೆ ಬಂದಿದೆ. ‘ಮೋಟೊರೋಲಾ’ ಮತ್ತು ಇತರ ಅನೇಕ ಖಾಸಗಿ ಕಂಪನಿಗಳ ಜಂಟಿ ಯೋಜನೆಯಿಂದ ಇದರ ನಿರ್ಮಾಣವಾಗುತ್ತದೆ. ‘ಐರಿಡಿಯಂ’ ವ್ಯವಸ್ಥೆಯಲ್ಲಿ ೬೬ ಗ್ರಹಗಳಿವೆ. ಅವು ವಿವಿಧ ಆರು ಕಕ್ಷಾಪಾತಗಳಲ್ಲಿ ಭೂಮಿಯನ್ನು ಸುತ್ತುತ್ತ ಪರಸ್ಪರ ಸಂಪರ್ಕ ಹೊಂದುತ್ತವೆ. ಈ ಜಾಲವು ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತನ್ನು ಆವರಿಸುತ್ತವೆ.

ಆಗ ಜಗತ್ತು ಮುಷ್ಠಿಯೊಳಗೆ, ಎಂಬಂತಾಗಿ ಯಾವ ತಂತಿಯ ಸಂಪರ್ಕವಿಲ್ಲದೇ ಎಲ್ಲೆಂದರಲ್ಲಿಗೆ ಫೋನಾಯಿಸಿ ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು. ಸಂವಹನ ಮಾಧ್ಯಮದಲ್ಲಿ ಇದು ಉತ್ಕೃಷ್ಟ ಸಾಧನವೆಂದು ಹೇಳಲಾಗಿದೆ.
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...