Home / ಲೇಖನ / ವಿಜ್ಞಾನ / ಇರೋಡಿಯಂ ಪ್ರಾಜೆಕ್ಟರ್

ಇರೋಡಿಯಂ ಪ್ರಾಜೆಕ್ಟರ್

ಒಂದು ಕಾಲವಿತ್ತು ಒಂದು ಫಿಲ್ಮ್ ಮೂಲಕ ಬೆಳಕನ್ನು ಹರಿಸಿ ಫಿಲ್ಮಿನಲ್ಲಿರುವ ಚಿತ್ರಗಳನ್ನು ದೊಡ್ಡದನ್ನಾಗಿ ತೋರಿಸುವ ವಿಧಾನ. ಇದನ್ನು ತೋರಿಸುವ ಯಂತ್ರಕ್ಕೆ ಪ್ರೋಜೆಕ್ಟರ್ ಎಂದು ಕರೆದರೂ ಹೊಸ ಆವಿಷ್ಕಾರ ಬಂದ ನಂತರ ವಿನೂತನ ಪ್ರಯೋಗಗಳಾಗಿ ಹೊಸ ನಮೂನೆಯ ಪ್ರೋಜೆಕ್ಟರ್‌ಗಳು ಬಂದಿವೆ. ಹಳೆಯದರದಲ್ಲಿ ಅನೇಕ ನ್ಯೂನ್ಯತೆಗಳಿದ್ದ ಕಾರಣವೂ ಸಹ ಅವು ಮೂಲೆ ಗುಂಪಾದವು. ಈದೀಗ ಸುಧಾರಣೆಗೊಂಡು ನೂತನ ತಂತ್ರಜ್ಞಾನ ‘ಇರೀಡಿಯಂ’ ಮಸೂರದ ಪ್ರೋಜೆಕ್ಟರ್ ಹೊರಬಂದಿವೆ.

ಇರೀಡಿಯಂ ತಂತ್ರಜ್ಞಾನದ ಈ ಪ್ರೋಜೆಕ್ಟರ್ ಬಹಳ ಚಿಕ್ಕದ್ದು ಇದನ್ನು ಬೇಕಾದರೆ ಮಡಚಿ ಜೇಬಿನಲ್ಲಿಟ್ಟುಕೊಳ್ಳಬಹುದು. ಇದರ ಮಸೂರ (ಲೆನ್ಸ್)ನಲ್ಲಿ ಇರೀಡಿಯಂ ಪದಾರ್ಥದ ಲೇಪನವಿರುತ್ತದೆ. ಇದರಲ್ಲಿ ಹರಿಯುವ ಬೆಳಕನ್ನು ಅದು ವಿದ್ಯುನ್ಮಾನಮಯ ‘ಡಯೋಡ್’ ಟ್ಯೂಬ್‌ಗಳಿಗೆ ಕಳಿಸುತ್ತದೆ. ಈ ಬಿಂಬ ಸಂಕೇತಗಳು ವಿದ್ಯುತ್ ಸಂಕೇತಗಳಾಗಿರುತ್ತವೆ. ಈ ಡಯೋಡ್ ಟ್ಯೂಬುಗಳು ನಂತರ ಮರು ಬೆಳಕಿಗೆ ಪರಿವರ್ತಿಸಿ ಪರದೆಯ ಮೇಲೆ ಬೀಳುತ್ತವೆ. ಈ ಚಿತ್ರಗಳು ಅತ್ಯಂತ ಸ್ಪಷ್ಟವಾಗಿರುತ್ತವೆ. ಇನ್ನೊಂದು ವಿಶೇಷವೇನೆಂದರೆ ಇದಕ್ಕೆ ವಿದ್ಯುತ್ ಶಕ್ತಿಯ ಅವಶ್ಯಕತೆ ಇಲ್ಲವಿರುವುದು. ಈ ಪ್ರೋಜೆಕ್ಟರ್ ದುಬಾರಿಯಾದರೂ ಕೆಲಸ ಮಾಡುವುದು ಸುಲಭ.

ಈ ಪ್ರಯೋಗಗಳು ಯಶಸ್ವಿಯಾಗಿ ವಿದೇಶಗಳಲ್ಲಿ ಮತ್ತು ಕೆಲವು ನಿವಾಸಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಎಲ್ಲೆಂದರಲ್ಲಿ ಸಾಗಿಸಬಹುದಾದ ಇದರ ಸಾಧನೆ ಹಿರಿದಾಗಿದೆ. ಮುಂದಿನ ದಿನಗಳಲ್ಲಿ ಶ್ರೀಮಂತರೆಲ್ಲರ ಮನೆಗಳಲ್ಲಿಯೂ ರಂಜಿಸುವ ದಿನ ದೂರವಿಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...