Home / ಕವನ / ಹಾಯ್ಕು / ಹತ್ತು ಹಾಯ್ಕುಗಳು

ಹತ್ತು ಹಾಯ್ಕುಗಳು


ಈ ಕದಡಿದ ಕೊಳ ತಿಳಿಯಾಗುವುದಿಲ್ಲ.
ಯಾಕೆಂದರೆ ಅದು ಸ್ಫಟಿಕಜಲದಾಗರವಲ್ಲ
ಕೆಂಪು ಕೆಂಪು ಓಕುಳಿಯ ಸುರಿಸುವ ಸಂತೆ


ಬಿಳಿತೊಗಲಿನ ಗೋಡೆಯ ಮೇಲೆ
ಬೆಳೆಯುತ್ತಿದೆ ಊರು ನಗರ
ಕೆತ್ತಸಿಕೊಂಡ ಮುಖಗಳಲ್ಲಿ ಮಾರ್ದವತೆಯಿಲ್ಲ.


ತರು ಲತೆಗಳು ಅಲ್ಲಿಲ್ಲಿ ಬೋಳಿಸಿಕೊಂಡ
ಸುಂದರಾಂಗಿಯರು, ಕಾರ್ಬನ್ನಿನ ಕ್ರೀಮಿಗೆ
ಕಪ್ಪುಂಡು ಅಮವಾಸ್ಯೆಯ ಬಣ್ಣ.


ಶಾಂತಿಗಾಗಿ ಕ್ರಾಂತಿ ಎನ್ನುವ ಭ್ರಾಂತಿ.
ಜಾತಿಯಂತಕನ ನಾಲಿಗೆಗೆ
ಭಕ್ಷ ಭೋಜನ ರಕ್ತಸಿಂಚನ
ಆಂಧ್ರ ತೆಲಂಗಾಣ.
ಮರ್ಯಾದಾ ಹತ್ಯೆ ಬಾಣದ ಇನ್ನೊಂದು ತುದಿ.


ನೆರಳಿನಲ್ಲಿ ನೇಗಿಲು ಕಟ್ಟುವ ಜನ
ಮಹಡಿಯ ಮನೆಗಳಲ್ಲಿ ಮಿಂಚುವ ಮೋಹನಾಂಗಿಯರು
ಪವಿತ್ರತೆಗೆ ಹಲಬುತ್ತ ಒಳಗೊಳಗೆ ಪುಡಿಪುಡಿ


ಸಹನೆಗೆ ಉಪಸರ್ಗ ಬೆರೆಸಿ
ಬೆಳೆಸಿದ್ದೆ ತಪ್ಪಾಯ್ತೇ ಅಸಹನೆ ಈಗ
ವಿಷಯವ್ಯಾಪಿ. ವಿಶ್ವ ವ್ಯಾಪಿ.

೭.
ಅಲ್ಲಿ ಸಿಯಾಚಿನ್ನಲ್ಲಿ ಹೆತ್ತೊಡಲ ಮರೆತು
ಹೊತ್ತೊಡಲ ಋಣಹರಿಸಿ ಹುತಾತ್ಮರು
ಮಣ್ಣಬಯಕೆಗೆ ಹೊನ್ನಹೊದಿಕೆಗೆ
ಇಲ್ಲಿ ತಾಯ್ಗರ್ಭ ಸೀಳಿದರು.


ಕಗ್ಗತ್ತಲ ಕ್ಷಣಗಳಲ್ಲೆ ರಕ್ತ ಬೀಜಾಸುರರ
ಚಿತ್ರಗಳು ರೂಪಗೊಳ್ಳುತ್ತವೆ.
ಮದಿರೆ, ಮಾನಿನಿ, ಮಣ್ಣು ಮೋಕ್ಷಗೊಳ್ಳದ
ಮಂತ್ರಗಳು ಪ್ರಳಯಕಾಲದವರೆಗೂ


ಸರಕಾರಿಗಂಗಳದಿ ಉಣ್ಣುತ್ತಲೇ
ರಹಸ್ಯ ವರದಿ ಸರಕು ವ್ಯಾಪಾರ
ನೆರೆಮನೆಯ ದೊರೆಯಣ್ಣಗಳ ಮಾರುಕಟ್ಟೆಯಲ್ಲಿ ಬಿಸಿಬಿಸಿ
ಆದರೆ ಬಡಪಾಯಿ ವೇಮುಲಗೆ
ಕಟ್ಟಿದ್ದು ಬಹು ದೊಡ್ಡ ಪಟ್ಟ

೧೦
ಶತ ಶತಮಾನಗಳ ಚರಿತ್ರೆಯ ಚೀಲ
ತುಂಬಿಕೊಂಡಿದ್ದು ಬದಲಿಲ್ಲ.
ರಾಜಕಾರಣಕ್ಕೇನು? ಗೊತ್ತಿರುವುದಿಷ್ಟೇ
ತಮ್ಮವಾದದ ಶವಪೆಟ್ಟಿಗೆಗೆ ಹೆಣ ಯಾರದ್ದಾದರೇನು?
ಮೊಳೆ ಹೊಡೆದು ಸಿದ್ಧಮಾಡುವುದೇ ಪರಮಗುರಿ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...