Home / ಕವನ / ಕವಿತೆ / ಈ ಸಲದ ಯುಗಾದಿ

ಈ ಸಲದ ಯುಗಾದಿ

ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ
ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ
ಹೊರಟು ಹೋಯಿತು ನೆಲವನ್ನು ತೊಯ್ಯದೆ

ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು
ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ
ಮಾಡೋಣವೆಂದು ಕುಳಿತರೆ ಸಾಕು ಆಕ್ರಮಿಸುತ್ತವೆ

ಸೊಳ್ಳೆಗಳು! ಈ ಯುಗದ ಆದಿಯಲ್ಲಿ ನೀನು,
ಕೊನೆಯಲ್ಲಿ ನಾವು ಎಂದು ಹಾಡುತ್ತವೆ. ಹೆದರಲಾರೆ
ಕೊಂಡು ತಂದಿರುವೆ ಹೊಸತೊಂದು ಸೊಳ್ಳೆ ಪರದೆ

ಕಳೆದ ಯುಗಾದಿಯಂತಲ್ಲ ಈ ಯುಗಾದಿಯೆಂಬು-
ದೀ ಕ್ರಿಮಿಕೀಟಗಳಿಗೇನು ಗೊತ್ತು? ಕಳೆದ ಯುಗಾದಿಗೆ
ಗಸಗಸೆ ಪಾಯಸ, ಸೀಕರಣೆ, ಹೊಸ ಬಟ್ಟೆ ಬರೆ

ಸಿನೆಮ, ಸ್ತ್ರೀಸಂಗ, ಬಹಳ ಮಜವಿತ್ತು ನಿಜ; ಈ ಬಾರಿ
ಇವೊಂದೂ ಇಲ್ಲ. ನೆನಪುಗಳಷ್ಟೆ ಇವೆ. ಕಾರಣ
ವಾಸ್ತವಕ್ಕಿಂತ ಅದರ ನೆನಪೇ ಹೆಚ್ಚು ಸವಿಯೆಂದು

ಸವಿಯುವೆನು ಗಾಳಿಯನು, ಗಾಳಿಯಲಿ ತೇಲಿ ಬರುವ
ನೆರೆಮನೆಯ ಸುಂದರಿಯ ಅಡುಗೆಯ ಸುವಾಸವನು!
ಈ ಸಲದ ಯುಗಾದಿಗೆ ಗ್ರೀಕರ ನಾಟಕಗಳು

ಅಯನೆಸ್ಕೊ ಕಥೆಗಳು, ಅನಂತಮೂರ್ತಿಯ ‘ಅವಸ್ಥೆ’
ಸಾಕಲ್ಲ ಒಬ್ಬ ಲೇಖಕನಿಗಿನ್ನೇನು ಬೇಕು?
ಅಲ್ಲದೆ ನನ್ನದೂ ಕೆಲವು ತುಣುಕುಗಳಿವೆ ಬಿಡಿಯಾಗಿ

ಗಾಳಿಯಲ್ಲಿ ಹಾರಿಹೋಗದಂತೆ ಹರಿದ್ವಾರದಿಂದ ತರಿಸಿದ
ಕಲ್ಲೊಂದನಿರಿಸಿರುವೆ. ಎಷ್ಟೋ ಸಾವಿರ ವರುಷ
ಗಂಗೆಯಲಿ ಮೈ ತೊಳೆದು ನುಣುಪಾದ ದುಂಡುಕಲ್ಲು

ಕುಳಿತಿದೆ ನಿಜಕ್ಕೂ ನನ್ನ ಮನಸ್ಸಾಕ್ಷಿಯ ಮೇಲೆ
ನನ್ನ ವಾಗರ್ಥಗಳ ಪಾಪವನ್ನು ತನ್ನೊಳಗೆ ಹೀರುತ್ತ
ನಿಮಿಷ ನಿಮಿಷವೂ ಅದರ ಭಾರ ಹೆಚ್ಚುತ್ತ
****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...