Home / ಲೇಖನ / ಇತರೆ / ದೀರ್ಘಾಯುಷ್ಯದ ಗುಟ್ಟು

ದೀರ್ಘಾಯುಷ್ಯದ ಗುಟ್ಟು

ನೀವು ನೂರು ವರ್‍ಷ ಬಾಳಬೇಕೆನ್ನುವಿರಾ? ಹಾಘಾದರೆ, ನೂರು ವರ್‍ಷ ಬಾಳಬೇಕೆನುವವರಿಗೆ ನೂರು ವರ್‍ಷ ಬಾಳಿದ ಡಾ || ಎಂ ವಿಶ್ವೇಶ್ವರಯ್ಯ (೧೫-೦೯-೧೮೬೦-೧೯೬೦) ರವರ ಕೆಲ ಸಲಹೆಗಳಿವೆ. ಅವು:

೧) ನಿಮ್ಮ ಮನಸಾಕ್ಷಿಯನ್ನು ಪೀಡಿಸಿ ಕ್ಷಯಿಸುವಂಥ ಕೆಲಸಗಳನ್ನು ಮಾಡಬೇಡಿರಿ. ಕೊರೆಯುವ ಮನಸಾಕ್ಷಿಯ ಮೂಲಕವೇ ಬಹಳ ಜನರ ಆರೋಗ್ಯ ಕೆಟ್ಟು ಅವರು ವೃದ್ಧರಾಗುತ್ತಾರೆ.

೨) ಉಲ್ಲಾಸಚಿತ್ತರಾಗಿರುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ. ಉಲ್ಲಾಸವು ಮುದುಕನಲ್ಲಿರುವ ತಾರುಣ್ಯಕ್ಕೆ ಸಾಕ್ಷಿಯಾಗಿರುತ್ತದೆ.

೩) ಅಗತ್ಯವಿರುವಷ್ಟೇ ತಿನ್ನಿರಿ; ಪೌಷ್ಠಿಕ ಅನ್ನವನ್ನಲ್ಲದೆ ವಿಷಯುಕ್ತವಾದ ಮಿಠಾಯಿಗಳನ್ನು ಖಂಡಿತಾ ತಿನ್ನಬೇಡಿರಿ.

೪) ಪ್ರತಿ ೨೪ ತಾಸುಗಳಲ್ಲಿಯೂ ನಿಯಮಿತವಾಗಿ ಒಂದಿಷ್ಟು ತಾಸು ಎಂದು ನಿಶ್ಚಯಿಸಿಕೊಂಡು ನಿದ್ದೆ ಮಾಡಿರಿ. ನಾಳೆ ಮಾಡಿದರಾಯಿತು ಎಂದು ಇಂದಿನ ನಿದ್ದೆಯನ್ನು ಕೆಡಿಸಿಕೊಳ್ಳುವ ಚಟಕ್ಕೆ ತುತಾಗಬೇಡಿರಿ.

೪) ವಿನೋದದಲ್ಲಿ ಕಾಲ ಕಳೆಯಿರಿ. ವಿನೋದ ಎಂದರೆ ಕ್ರಿಕೆಟ್ ಅಥವಾ ಗೋಲ್ಫ್ (ಒಂದು ತರದ ಆಟ)ಗಳಲ್ಲ! ಏಕೆಂದರೆ ಈ ಆಟಗಳೂ ಕೂಡ ಒಂದು ಬಗೆಯ ಕೆಲಸವೇ ಅಗಿವೆ. ಇದಕ್ಕಿಂತಲೂ ಸರಳವಾದ ಮಕ್ಕಳೊಂದಿಗೆ ಚಿನ್ನಾಟವಾಡುವಂಥ ವಿನೋದಗಳಲ್ಲಿ ಕಾಲಕಳೆಯಿರಿ.

೬) ನಿಮ್ಮ ಉತ್ಪನ್ನದ ಮಿತಿಯಲ್ಲಿ ಜೀವನ ಸಾಗಿಸಿರಿ. ನಿಮ್ಮ ಸಂತೋಷ ಪ್ರಾಪ್ತಿಗೆ ಒಂದು ಧ್ಯೇಯ ಇತರರಿಗೆ ಲಾಭದಾಯಕವಾಗುವಂತಿರಲಿ.

೭) ದಿನಂಪ್ರತಿ ಇಂತಿಷ್ಟು ಸಮಯ ಎಂದು ನಿರ್‍ಧರಿಸಿ ತಪ್ಪದೇ ವ್ಯಾಯಾಮ ಮಾಡಿರಿ.

೮) ಬೀಡಿ, ಸಿಗರೇಟು, ಗಾಂಜಾ ಮಧ್ಯ ಇಂಥ ಯಾವ ಆರೋಗ್ಯ ವಿಘಾತಕ ಕೆಟ್ಟ ವ್ಯಸನಗಳನ್ನು ರೂಢಿಸಿಕೊಳ್ಳಬೇಡಿರಿ. ಇವುಗಳಿಂದ ಸಂಪೂರ್‍ಣವಾಘಿ ದೂರವಿರಿ.

ವಿಶ್ವೇಶ್ವರಯ್ಯನವರು ಮೇಲೆ ಹೇಳಿದ ೮ ಸುಸೂತ್ರಗಳನ್ನು ಚೆನ್ನಾಗಿ ನೆನಪಿಟ್ಟು ತಪ್ಪದೇ ಪಾಲಿಸಿರಿ. ಆಗ ನೀವು ದೀರ್ಘಾಯುಷಿಯಾಗಲು ಸಂದೇಹವೇ ಇಲ್ಲ.
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...