Home / ಲೇಖನ / ವಿಜ್ಞಾನ / ಸಮುದ್ರದಲ್ಲಿ ಏನಡಗಿದೆ!

ಸಮುದ್ರದಲ್ಲಿ ಏನಡಗಿದೆ!

೧೯೮೦ ರಲ್ಲಿ ನಡೆಯಿಸಿದ ಸಾಗರ ಅಧ್ಯಯನದಿಂದ ಸಮುದ್ರ ತಳವನ್ನು ಸ್ಪರ್ಶಿಸಿ ಅಲ್ಲಿಯ ನಿಗೂಢತೆಯನ್ನು ಬೇಧಿಸಲಾಗಿದೆ. ಸಮುದ್ರದೊಳಗೊಂದು ಪಾತಾಳಲೋಕವಿದೆ. ನಾಗಲೋಕವಿದೆ, ಎಂದು ಹೇಳುವ ಪೌರಾಣಿಕ ಮಿಥ್ಯಗಳಿಗೆ ಈಗ ಉತ್ತರ ಸಿಕ್ಕಿದೆ.

ಅಮೇರಿಕೆಯ ನ್ಯುಜರ್ಸಿ ಕರಾವಳಿ ಪ್ರದೇಶದ ಸಾಗರ ತಳದಲ್ಲಿ ಆಳವಾದ ಕಮರಿಗಳಿದ್ದರೆ, ಫ್ಲೂರಿಡಾದ ಕರಾವಳಿ ಸಾಗರದಲ್ಲಿ ಮೈಲುಗಟ್ಟಲೇ ಎತ್ತರವಾದ ಶಿಖರಗಳಿವೆ, ಬರೆಗಾನ್ ಬಳಿ ಏರಿಳಿತಕ್ಕೊಳಗಾಗುವ ಮರಳು ದಿಣ್ಣೆಗಳಿವೆ. ಅಮೇರಿಕಾದ ಕರಾವಳಿ ಪ್ರದೇಶದ ತಳವನ್ನು ಶ್ರವಣಾತೀತ ಧ್ವನಿ ತರಂಗಗಳಿಂದ ಅಧ್ಯಯನ ಮಾಡಲಾಯಿತು.
ಅದರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಆದರಿಸಿ ಸಾಗರದ ತಳದ ನಕ್ಷೆಯನ್ನು ಚಿತ್ರಿಸಿದಾಗ ಮೇಲೆ ಹೇಳಿದ ರೋಚಕ ವಿಷಯಗಳು ಬೆಳಕಿಗೆ ಬಂದವು. ಅದೇ ರೀತಿ ಮೆಕ್ಸಿಕೋ ಆಖ್ಯಾತದಲ್ಲಿ ಅಧ್ಯಯನ ನಡೆಯಿಸಿದಾಗ ಸಾಗರದ ಆಳವು ಚಂದ್ರನ ಮೈಯಂತೆ ಇರುವುದು ಕಂಡು ಬಂದಿದೆ. ಅಂದರೆ ಒಂದೆಡೆ ಆಳವಾಗಿ ಕಮರಿಗಳಿದ್ದರೆ, ಇನ್ನೊಂದೆಡೆ ಎತ್ತರವಾದ
ಶಿಖರಗಳಿವೆ. ಅವುಗಳಲ್ಲಿ ಕೆಲವೊಂದು ಕಮರಿಗಳು ಎಷ್ಟು ಆಳವಾಗಿದೆ ಎಂದರೆ ಅವು ಒಂದೊಂದು ದ್ವೀಪವನ್ನೆ ಒಡಲೊಳಗೆ ಅಡಗಿಸಿಟ್ಟುಕೊಳ್ಳಬಹುದು. ಇದಕ್ಕೆ ಕಾರಣ ಸಮುದ್ರ ತಳದಲ್ಲಿರುವ ಉಪ್ಪಿನ ದಿಣ್ಣೆಗಳ ಚಲನೆ ಇರಬೇಕೆಂದು ವಿಜ್ಞಾನಿಗಳು ನಂಬಿದ್ದಾರೆ.

ಈಗ ವಿಜ್ಞಾನಿಗಳು ಸಂಪರ್ಕಕ್ಕೋಸ್ಕರ ಸಾಗರದಾಳದಲ್ಲಿ ದ್ಯೂತಿತಂತು ಕೇಬಲ್‌ಗಳನು ಹಾಕಲು ಸಾಗರದ ತಳದ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯಿಂದ ಅವರಿಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆಯಬಹುದಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...