Home / ಕವನ / ಕವಿತೆ / ಹಳ್ಳಿಯ ಜೀವನ

ಹಳ್ಳಿಯ ಜೀವನ

ಎತ್ತಿನ ಕತ್ತಿನ ಗೆಜ್ಜೆಯ ಸರವು
ಮೊರೆಯಿತು ಘಲ್ ಘಲ್ ಘಲ್ಲೆಂದು
ಹಳ್ಳಿಯ ಸರಳದ ಜೀವನ ನೆನೆದು
ಕುಣಿಯಿತು ಎನ್ನೆದೆ ಥೈ ಎಂದು

ಸೂರ್ಯನ ಅಸ್ತಮ ಸಮಯದ ಚೆಲುವು
ಪಚ್ಚೆಯ ಪಯಿರಿನ ನೋಟದ ಸುಖವು
ಹಕ್ಕಿಗಳೋಟದ ಗುಂಪಿನ ಸೊಗವು
ವಿಶ್ವವ ತುಂಬಿದ ಆಗಸವು

ಏರಿಯ ನೀರಿನ ಅಲೆಗಳ ತೆರೆಯು
ಗದ್ದೆಯ ಬದುವಿನ ಸಾಲಿಗೆ ಜನರು
ವನಿತೆಯರಾಡುವ ಶ್ರಾವ್ಯದ ಪದವು
ಶ್ರಮೆಯನು ಮರೆಸುವ ಆ ವಿಧವು

ಕಣ್ಣಿಗೆ ಬಣ್ಣದ ಕಾಮನಬಿಲ್ಲು
ಬಾಲಕರಾಡುವ ಚಿಣ್ಣಿಯ ಕೋಲು
ಮಲ್ಲಿಗೆ ಚಪ್ಪರ ಮನೆಗಳ ಮುಂದೆ
ಊರಿಗೆ ಮರಳುವ ತುರು ಮಂದೆ

ಮಾವಿನ ತೋಪಿನ ಮರಗಳ ತಂಪು
ಕೋಗಿಲೆ ಕೂಗುವ ಶಬ್ದದ ಇಂಪು
ತಾವರೆ ಪುಷ್ಪದ ಕೊಳಗಳ ತುಳುಕು
ಚಂದ್ರನ ಉದಯದ ಆ ಬೆಳಕು

ಊರಿನ ಮುಂದಿನ ದೇವರ ಗುಡಿಯು
ಬಕುತಿಯ ಪೂಜೆಯ ಗಂಟೆಯ ದನಿಯು
ಸ್ವಾಮಿಗೆ ಚಿಗುರಿನ ಉರುವೆಯ ಮೊರೆಯು
ಊರನು ಸುತ್ತುವ ಪಲ್ಲಕಿಯು

ಹೊರೆಗಳ ಕಣಗಳಿಗೊಯ್ಯುವ ಓಟ
ಗ್ರಾಮದಿ ರೈತರ ಮನೆಗಳ ಊಟ
ಥಾಕಿಟ ಥಾಕಿಟ ಶಬ್ದದ ಕೂಟ
ಝೋಕಿಲಿ ಹಾಕುವ ಕೋಲಾಟ

ಹಳ್ಳಿಯ ಜನಗಳ ಬೀಸುವ ಪದವು
ಬಿತ್ತಿದ ಹೊಲಗಳ ತೆನೆಗಳ ಕೊಯ್ಲು
ಕಣದಲಿ ರಾಶಿಯನಳೆಯುವ ಮುದವು
ಜನಕಜೆ ಮನಕದು ಬಲು ಹಿತವು
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...