Home / ಕವನ / ಕವಿತೆ / ದೇಶದ ಕೃಷಿಕನೇ

ದೇಶದ ಕೃಷಿಕನೇ

ಕೃಷಿ ಮಾಡುವ ರೈತನೆ ನೀನು
ರಾಷ್ಟ್ರದ ಶ್ರೇಷ್ಠ ವ್ಯಕ್ತಿತ್ವ ನಿನ್ನದು
ದೇಶದ ಸಹಸ್ರಾರು ಜನತೆಗೆ ಬದುಕುಳಿಯಲು
ಆಹಾರ ಧಾನ್ಯವು ಪೂರೈಸುವ ದೇಶದ ರೈತ ನೀನು

ಹಗಲಿರುಳು ಎನ್ನದೇ ಹೊಲದಲ್ಲಿ ದುಡಿದು
ಆಹಾರ ಧಾನ್ಯ ಬೆಳೆ ಬೆಳೆಸುವನು ನೀನು
ತನ್ನ ಸಹಾಯಕ್ಕಾಗಿ ಎರಡೆತ್ತು ತೆಗೆದು
ಹೊಲವನ್ನು ಚನ್ನಾಗಿ ಉಳುಮೆ ಮಾಡುವನು ನೀನು.

ಹೊಲವನ್ನು ಚನ್ನಾಗಿ ಉಳುಮೆ ಮಾಡಿ
ಬೀಜ ಉತ್ತಿಬಿತ್ತಿ ಮಳೆಯರಾಯನಿಗಾಗಿ ಕಾಯುವನು ನೀನು
ಮಳೆರಾಯ ಸರಿಯಾಗಿ ಸಮಯಕ್ಕೆ ಬಂದರೆ
ಭೂತಾಯಿ ಬೆಳೆದು ಹೊತ್ತುಕೊಂಡು ನಿಲುವಳು.

ರಿಕ್ತತೆಯ ಬಡತನದಿ ಬಳಲುತ
ಸುಖಮಯ ಜೀವನ ಸಾಗಿಸುವನು ನೀನು
ಭೂಮಿತಾಯಿ ಹೊತ್ತುಕೊಂಡು ನಿಂತ ಬೆಳೆ
ಕಂಡು ಹೃದಯದಿ ಸಂತಸ ಪಡುವನು ನೀನು.

ಬಡಜನರಿಂದ ಕೂಡಿದ ಶ್ರೀಮಂತ ರಾಷ್ಟ್ರವೆಂದು
ಅರಿತು ಆರ್ಥಿಕ ಪ್ರಗತಿ ಸಾಧಿಸುವನು ನೀನು
ಹಬ್ಬ ಹರಿದಿನಗಳಲ್ಲಿ ಭೂತಾಯಿಗೆ ಗೌರವದಿ
ಪೂಜ್ಯನೆ ಭಾವದಿ ಆರಾಧಿಸುವನು ನೀನು.

ಯಾರ ಜೀವನದ ಬಗ್ಗೆ ಅವಹೇಳನ ಬಯಸದೇ
ತನ್ನ ಜೀವನದಿ ತಾ ಒಳಿತನು ಬಯಸುವನು
ಯಾರ ವಿಮರ್ಶೆಗೆ ಬಲಿಯಾಗದೇ ತಾ
ಸರೋವರದಂತೆ ಜೀವನ ಸಾಗಿಸುವನು ನೀನು.

ಗುರಿ ಮುಟ್ಟುವದಕ್ಕೆ ಸತತ ಸಾಧನೆ ಗೈದಿ
ಧಾನ್ಯ ಬೆಳೆಸುವಲ್ಲಿ ನೀ ಸಫಲನಾದಿ
ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪನಾದಿ
ಜಗವಿರುವವರೆಗೆ ಜಗಭರಿತ ರೈತ ನೀ ನಾದಿ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...