Home / ಕವನ / ಕವಿತೆ / ಅಂತರಾಳ

ಅಂತರಾಳ

ನಾನು ಹೆಣ್ಣು ಯುಗದ ಕಣ್ಣು
ದಾತ ದಾತನ ದಾತೆಯು,
ಮುಗಿಲಿನೆದೆಗೂ ಮಿಗಿಲು ನಾನು
ವಿಶ್ವ ಸೃಷ್ಟಿಯ ತಾಯಿಯು,
ಕಡಲ ಒಡಲಿನಾಳದಾಳ ನಾನು
ಜಗದ ಜೋಗುಳ ಗೀತೆಯು |

ಉರಿಯು ತಂಪು ತಾರಾ ಮಿಣುಪು
ಸಗ್ಗ ಋತುವಿನ ಸೋನೆಯು,
ಶೃಂಗ ಶೃಂಗದ ಶೃಂಗ ನಂದನ
ಭೃಂಗದೆದೆಯ ಮಿಡಿತವು,
ದಟ್ಟ ಝರಿ ವನ ಬನ ರಾಜಿ ನಾನು
ಧಮನಿ ಧಮನಿಗೂ ರುಧಿರವು |

ಇರದ ದೇವರನಿರವ ರೂಪಿನ
ತ್ಯಾಗ ಭೋಗ ಭಾಗ್ಯದ ಭರಣಿಯು,
ಬಿತ್ತು ಬಿತ್ತಿಗೆ ರೂಪ ರೂಹನು
ತಿದ್ದಿ ತೀಡೋ ಭ್ರೂಣ ಲತಿಕೆಯು,
ಪುರುಷ ನಿನಗೆ ಪ್ರಕೃತಿ ನಾನು
ಉಳಿವು ಬೆಳೆವಿನ ನಿಯತಿಯು |

ಅಂದು ಇಂದು ಹಿಂದೆಂದಿನಿಂದೋ
ಬಂಧ ಬಂಧದ ದಿಗ್ಭಂಧನ
ಸೃಷ್ಟಿ ದಿಟ್ಟಿಯ ಪುರುಷ ನಿನ್ನಯ
ಕೈಯಲುಗಿನೆದೆಯ ಚಂದನ
ಪಡೆದ ಕೊಸರೊಲವ ಋಣಿಯು ನಾನು
ತೆರುವ ವಡ್ಡಿ ಚಕ್ರದ ದಾಳವು |

ಆವ ಮನುವಿನ ಸ್ಮೃತಿ ವಿಸ್ಮೃತಿಯೋ
ಸೆಲೆಯ ಬಲೆಯ ಜಾಲವೊ
ಆವಕ್ಕರದಕ್ಕರಕೂ ನನ್ನ ನೆತ್ತರೆ ಶಾಯಿಯು
ವ್ಯಕ್ತಾವ್ಯಕ್ತ ಭೀತಿಯ ಛಾಯೆಯು
ಬರೆದ ಬರಹದ ಹೊಗೆಯ ಹಗೆಯ ನೀನು
ನನ್ನ ಬಸಿರ ಪ್ರಸೂತನು |

ಸುರತಿ ಸುಖದಾ ಬಯಲ ಬತ್ತಲೋ
ಹುತ್ತ ಹೊಕ್ಕ ಶುಕ್ರನ ಧಾರಿಣಿ
ವಿರತಿ ಶೃತಿಗೂ ರಾಗರತಿಯನುರಾಗಿಯು
ಒಲವ ಹೂಮಳೆ ಶೃಂಗಾರಿಣಿ
ಹುಟ್ಟು ಬೆಳೆವು ಮುಳುಗಟ್ಟು ಕಟ್ಟ ಬಟ್ಟೆ ನಾನು
ಭಾವ ಶೂನ್ಯ ಜನದೆದೆ ಜಗದಲಿ |

ಯಶದ ಯಶದಾಧಾರ ಧಾರ ತೊರೆಯು
ಯಶವಂತನಾ ಬೆನ್ನ ನೆರಳಲಿ
ಶೂದ್ರಸ್ಪುಶ್ಯ ಮೋಹ ಕಾಮಿ ಮಾಯೆಯು
ಕ್ರೂರ ಪುರುಷ ಕಲ್ಪದ ಸರಳಲಿ
ರಸದ ಜನನಕೆ ವಿರಸ ಮರಣಕೆ
ಸಮರಸದ ಬದುಕಿನ ದೀಪ ಕನ್ನಿಕೆ |
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...