Home / ಕವನ / ಕವಿತೆ / ನೆರೆ

ನೆರೆ

ಮೊನ್ನೆ ಸುರಿದ ಭಾರಿ ಮಳೆಗೆ
ಮನೆ-ಮನೆಗಳು ಒಡೆದು
ಬಯಲು ಆಲಯವಾಯ್ತು
ಸುತ್ತಿ ಸುಳಿದು ತಿರುಗಿದ ಇತಿಹಾಸ
ಗಿರಿಗಿಟ್ಟಿಯಾಗಿ ಆಕಾಶ ನದಿ ಹಳ್ಳ
ಕೊಳ್ಳಗಳು ವಿಕಾರಗಳಾದವು.

ಅನ್ನ, ಹಸಿವು ನೀರು ನೀರಡಿಕೆ
ಕರುಳಿಗೆ ಅಂಟಿಕೊಂಡ ಮಕ್ಕಳು
ದಿಕ್ಕು ದಿಸೆಯಿಲ್ಲದ ಅಲೆಮಾರಿ ಬದುಕು
ಹರಿದ ನೀರಿಗೆ ನಿದ್ದೆಬಾರದೇ
ಹೊರಳಾಡಿದ ರಾತ್ರಿಗಳು ಚಿಂದಿ
ಮನಸ್ಸುಗಳು ತೋಯ್ದು ತಪ್ಪಡಿ ಮುದ್ದೆಯಾಯಿತು.

ಸ್ಮಶಾನದ ಸಂಜೆ ಕೆಟ್ಟ ಗಾಳಿ ಬೀಸಿ
ಚಳಿಗೆ ಥರಗುಟ್ಟಿವೆ ಕೂಸು ಕುನ್ನಿಗಳು
ಕಣ್ಣ ತುಂಬ ಕಂಬನಿ ಹೊತ್ತ ಜೀವ ಭಯ
ಸಾವಿಗೆ ಹೆದರಿದ ಮೂಕ ಮರ್ಮರ
ವಿಶಾಲ ಬಯಲಿನ ತುಂಬ ಹೆರಿಗೆ ಮನೆ
ನೋವು ಸಂಕಟಗಳು ಹರಿಕೊಂಡವು.

ಬಾಡಿಗೆಗೆ ಮನೆಮಠವಿಲ್ಲ ಶಾಲೆಗಳಿಲ್ಲ
ಕರ್ಫೂ ತುಂಬಿದ ದಿನಗಳು ಚಾಕರಿಗೆ
ಬೇಕಿಲ್ಲ ಗಂಜೀ ಕುದಿಸಲು ಕಟ್ಟಿಗೆ ಇಲ್ಲ
ಹೊದೆಯಲು ವಸ್ತ್ರವಿಲ್ಲ, ಹುಣ್ಣುಗಳ
ಗಾಯಕ್ಕೆ ಮುಲಾಮು ಸವರುವವರ್‍ಯಾರು
ಪ್ರಜಾಪ್ರಭುತ್ವಕ್ಕೆ ಬೇಗ ಪ್ರಾರ್ಥನೆಯ ಭಾಷೆ ತಿಳಿಯುವುದಿಲ್ಲ.

ನೀರಲಿ ತೇಲಿದ ಮನೆ ಮಠ ಗುಡಿ
ಬಟ್ಟೆಯೇ ಹೊದಿಸದ ಹೆಣಗಳು
ಅರ್ಧ ದಾರಿಯಲಿ ಬಿಟ್ಟು ಹೋದವರ ಗೋಳು
ಮನೆ ಗೂಡಿ ಮುರಿದು ಬಿದ್ದಿವೆ ಹಕ್ಕಿಗಳು
ಹಸಿರು ಕಾಣದೇ ಎತ್ತಲೋ ಹಾರಿ ಹೋಗಿವೆ
ಮೋಡಗಳು ಕಣ್ಣೀರು ಸುರಿಸುವುದ ನಿಲ್ಲಿಸಲಿ
ನಾವು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡೋಣ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...