Home / ಲೇಖನ / ಇತರೆ / ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಸಾರಾ ಆರ್. ರೈಡ್‌ಮಾನ್ ಅವರು ಬರೆದ ‘ಅಣುವಿನ ಹಿಂದಿನ ಪುರುಷರು ಮತ್ತು ಮಹಿಳೆಯರು’ ಎಂಬ ಪುಸ್ತಕವನ್ನು ನಾನು ಕೊಂಡ ಮೇಲೆ ೫೦ ವರ್ಷಗಳು ಕಳೆದಿವೆ. ಇಂದಿಗೂ ಈ ಪುಸ್ತಕವು ನನ್ನ ಕೊಠಡಿಯ ಮೇಜಿನ ಮೇಲೆ ಪ್ರಮುಖ ಸ್ಥಾನದಲ್ಲಿ ಕಂಗೊಳಿಸುತ್ತಿದೆ. (ಲೇಖಕಿ ಆಕೆಯ ಪುಸ್ತಕವನ್ನು ನಾನು ಓದಬೇಕೆಂದು, ಮತ್ತೆ ಮತ್ತೆ ಓದಬೇಕೆಂದು ಇಚ್ಛಿಸಿರಬಹುದು.)

ಅದು ಸುಮಾರು ೧,೦೦೦ ಪ್ಯಾರಾಗಳನ್ನು ಹೊಂದಿದೆ. ಎಲ್ಲ ಪ್ಯಾರಾಗಳೂ ಭವ್ಯ ಪ್ಯಾರಾಗಳು (ಪ್ಯಾರ್ ಕಾ ಪ್ಯಾರಾ). ಮೊದಲನೇ ಪ್ಯಾರಾವು ೧೯೫೬ ಅಕ್ಟೋಬರ್ ೧೭ ರಂದು ಆದ ಪ್ರಪಂಚದ ಮೊಟ್ಟ ಮೊದಲನೇ ಪೂರ್ಣ ಪ್ರಮಾಣದ ಅಣುಶಕ್ತಿ ಕೇಂದ್ರದ ಉದ್ಘಾಟನೆಯ ಬಗ್ಗೆ ತಿಳಿಸುತ್ತದೆ.

ಆ ಪುಸ್ತಕವು ಭಾರತದಲ್ಲಿ ಔದ್ಯೋಗಿಕ ವಿಕಾಸದಲ್ಲಿ ಅಣುಶಕ್ತಿ ಸ್ಥಾವರಗಳ ಪಾತ್ರವನ್ನು ನಮಗೆ ತಿಳಿಸುತ್ತದೆ.

ಈ ಸಂದರ್ಭದಲ್ಲಿ ನಾವು, ನಮ್ಮರಾಷ್ಪ್ರವು ನಾಗರಿಕ ಪ್ರಯೋಜನಕ್ಕಾಗಿ ಅಣುಶಕ್ತಿ ಒಪ್ಪಂದಕ್ಕೆ ರುಜು ಹಾಕಿ ಖಾತರಿಪಡಿಸುವುದರಲ್ಲಿ ಶ್ರಮಿಸಿದ ಪುರುಷ ಮತ್ತು ಮಹಿಳೆಗೆ ಕೃತಜ್ಞರಾಗಿರಬೇಕು. ಆ ಇಬ್ಬರು ಮಹಾವ್ಯಕ್ತಿಗಳು ಯಾರು ? ಅಣು ಒಪ್ಪಂದದ ಹಿಂದಿನ ಪುರುಷ ನಮ್ಮ ಪ್ರಿಯ ಡಾ|| ಮನಮೋಹನ್ ಸಿಂಗ್, ಪ್ರಧಾನ ಮಂತ್ರಿಗಳು ಮತ್ತು ಅಣು ಒಪ್ಪಂದದ ಹಿಂದಿನ ಮಹಿಳೆ ನಮ್ಮ ಜನಪ್ರಿಯ ಶ್ರೀಮತಿ ಸೋನಿಯಾ ಗಾಂಧಿ, ಯುಪಿ‌ಎದ ಮಾನ್ಯ ಅಧ್ಯಕ್ಷೆ.

ಈ ಅಣುಶಕ್ತಿ ಒಪ್ಪಂದದ ಫಲವನ್ನು ಉಪಯೋಗಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲ ಮುಖ್ಯಮಂತ್ರಿ ನಮ್ಮ ಪ್ರೀತಿಯ ಡಾ || ಬಿ. ಎಸ್. ಯಡಿಯೂರಪ್ಪ ಅವರು ಈಗಾಗಲೇ ಕೇಂದ್ರಕ್ಕೆ ಬರೆದು ಪ್ರಸ್ತಾಪಿಸಲ್ಪಟ್ಟ ೨೧೦ ಎಂ. ಡಬ್ಲೂ. ಘಟಕಗಳ ಬದಲಾಗಿ ಎರಡು ೭೦೦ ಎಂ. ಡಬ್ಲೂ. ಅಣುಶಕ್ತಿ ಘಟಕಗಳನ್ನು ವಿಸ್ತರಣಕ್ಕಾಗಿ ಕೈಗಾದಲ್ಲಿ ಸ್ಥಾಪಿಸಲು ಕೇಳಿದ್ದಾರೆ. ಅವರು ರಾಜ್ಯದಲ್ಲಿ ದೊಡ್ಡಗಾತ್ರದ ಅಣು ರಿಯಾಕ್ಟರ್‌ಗಳನ್ನೊಳಗೊಂಡ ಅಣುಶಕ್ತಿ ಪಾರ್ಕನ್ನು ಸ್ಥಾಪಿಸಲೂ ಒತ್ತಾಯಿಸಹುದು.

ನಮ್ಮ ಮುಖ್ಯಮಂತ್ರಿಗಳ ವಿರೋಧಿಗಳು ನಮ್ಮ ಮುಖ್ಯಮಂತ್ರಿ ಅವರು ಬಹಳ ‘ಪವರ್ ಹಂಗ್ರಿ’ ಎಂದು ಹೇಳುತ್ತಾರೆ. ಆದರೆ ನಮ್ಮ ಜನಪ್ರಿಯ ಮುಖ್ಯಮಂತ್ರಿಯವರಿಗೆ ಪವರ್ ಅಂದರೆ ಥರ್ಮಲ್ ಪವರ್ (ತಾಪಶಕ್ತಿ), ನ್ಯೂಕ್ಲಿಯರ್ ಪವರ್ (ಅಣುಶಕ್ತಿ), ಸೋಲಾರ್ ಪವರ್ (ಸೌರಶಕ್ತಿ), ಹೈಡಲ್ ಪವರ್ (ಜಲವಿದ್ಯುಚ್ಛಕ್ತಿ) ಮತ್ತು ವಿಂಡ್‌ಪವರ್ (ವಾಯುಶಕ್ತಿ). ಅವರು ಅನೇಕ ಶಕ್ತಿಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ರಾಜ್ಯವು ಕ್ರಿ.ಶ. ೨೦೧೪ ರ ಹೊತ್ತಿಗೆ ೧೪,೦೦೦ ಎಂ.ಡಬ್ಲೂ. ಶಕ್ತಿಯನ್ನು ಉತ್ಪಾದಿಸಿ ಸಾಕಷ್ಟು ಶಕ್ತಿಯನ್ನು ಪಡೆದುಕೊಳ್ಳುವುದೆಂದು ನನಗೆ ನಂಬಿಕೆ ಇದೆ.

ನನಗೆ ಅಣುವು ಯಾವಾಗಲೂ ಒಂದು ಗಹನ ಸೌಂದರ್ಯವಾಗಿತ್ತು. ಅಣುವಿನ ಕೇಂದ್ರ ನನಗೆ ಸಿಲುಕದೆಂದು ನನಗೆ ಗೊತ್ತಿತ್ತು. ಆದರೂ ಅದನ್ನು ತಲುಪುವುದಕ್ಕಾಗಿ ಸರ್. ಜಾರ್ಜ್. ಥಾಮಸನ್ ಮತ್ತು ಅನೇಕ ಪುಸ್ತಕಗಳನ್ನು ಓದಿ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೂ ಅಣುವಿನ ಕೇಂದ್ರದತ್ತ ನನ್ನ ದೂರ ಪ್ರಯಾಣದಲ್ಲಿ ಮೊದಲ ಮೈಲಿಯಲ್ಲೇ ನಾನೇಕೆ ನಿಂತು ಹೋಗಿದ್ದೇನೋ ನನಗೆ ನಿಜವಾಗಿಯೂ ತಿಳಿಯದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...