Home / ಲೇಖನ / ಇತರೆ / ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಸಾರಾ ಆರ್. ರೈಡ್‌ಮಾನ್ ಅವರು ಬರೆದ ‘ಅಣುವಿನ ಹಿಂದಿನ ಪುರುಷರು ಮತ್ತು ಮಹಿಳೆಯರು’ ಎಂಬ ಪುಸ್ತಕವನ್ನು ನಾನು ಕೊಂಡ ಮೇಲೆ ೫೦ ವರ್ಷಗಳು ಕಳೆದಿವೆ. ಇಂದಿಗೂ ಈ ಪುಸ್ತಕವು ನನ್ನ ಕೊಠಡಿಯ ಮೇಜಿನ ಮೇಲೆ ಪ್ರಮುಖ ಸ್ಥಾನದಲ್ಲಿ ಕಂಗೊಳಿಸುತ್ತಿದೆ. (ಲೇಖಕಿ ಆಕೆಯ ಪುಸ್ತಕವನ್ನು ನಾನು ಓದಬೇಕೆಂದು, ಮತ್ತೆ ಮತ್ತೆ ಓದಬೇಕೆಂದು ಇಚ್ಛಿಸಿರಬಹುದು.)

ಅದು ಸುಮಾರು ೧,೦೦೦ ಪ್ಯಾರಾಗಳನ್ನು ಹೊಂದಿದೆ. ಎಲ್ಲ ಪ್ಯಾರಾಗಳೂ ಭವ್ಯ ಪ್ಯಾರಾಗಳು (ಪ್ಯಾರ್ ಕಾ ಪ್ಯಾರಾ). ಮೊದಲನೇ ಪ್ಯಾರಾವು ೧೯೫೬ ಅಕ್ಟೋಬರ್ ೧೭ ರಂದು ಆದ ಪ್ರಪಂಚದ ಮೊಟ್ಟ ಮೊದಲನೇ ಪೂರ್ಣ ಪ್ರಮಾಣದ ಅಣುಶಕ್ತಿ ಕೇಂದ್ರದ ಉದ್ಘಾಟನೆಯ ಬಗ್ಗೆ ತಿಳಿಸುತ್ತದೆ.

ಆ ಪುಸ್ತಕವು ಭಾರತದಲ್ಲಿ ಔದ್ಯೋಗಿಕ ವಿಕಾಸದಲ್ಲಿ ಅಣುಶಕ್ತಿ ಸ್ಥಾವರಗಳ ಪಾತ್ರವನ್ನು ನಮಗೆ ತಿಳಿಸುತ್ತದೆ.

ಈ ಸಂದರ್ಭದಲ್ಲಿ ನಾವು, ನಮ್ಮರಾಷ್ಪ್ರವು ನಾಗರಿಕ ಪ್ರಯೋಜನಕ್ಕಾಗಿ ಅಣುಶಕ್ತಿ ಒಪ್ಪಂದಕ್ಕೆ ರುಜು ಹಾಕಿ ಖಾತರಿಪಡಿಸುವುದರಲ್ಲಿ ಶ್ರಮಿಸಿದ ಪುರುಷ ಮತ್ತು ಮಹಿಳೆಗೆ ಕೃತಜ್ಞರಾಗಿರಬೇಕು. ಆ ಇಬ್ಬರು ಮಹಾವ್ಯಕ್ತಿಗಳು ಯಾರು ? ಅಣು ಒಪ್ಪಂದದ ಹಿಂದಿನ ಪುರುಷ ನಮ್ಮ ಪ್ರಿಯ ಡಾ|| ಮನಮೋಹನ್ ಸಿಂಗ್, ಪ್ರಧಾನ ಮಂತ್ರಿಗಳು ಮತ್ತು ಅಣು ಒಪ್ಪಂದದ ಹಿಂದಿನ ಮಹಿಳೆ ನಮ್ಮ ಜನಪ್ರಿಯ ಶ್ರೀಮತಿ ಸೋನಿಯಾ ಗಾಂಧಿ, ಯುಪಿ‌ಎದ ಮಾನ್ಯ ಅಧ್ಯಕ್ಷೆ.

ಈ ಅಣುಶಕ್ತಿ ಒಪ್ಪಂದದ ಫಲವನ್ನು ಉಪಯೋಗಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲ ಮುಖ್ಯಮಂತ್ರಿ ನಮ್ಮ ಪ್ರೀತಿಯ ಡಾ || ಬಿ. ಎಸ್. ಯಡಿಯೂರಪ್ಪ ಅವರು ಈಗಾಗಲೇ ಕೇಂದ್ರಕ್ಕೆ ಬರೆದು ಪ್ರಸ್ತಾಪಿಸಲ್ಪಟ್ಟ ೨೧೦ ಎಂ. ಡಬ್ಲೂ. ಘಟಕಗಳ ಬದಲಾಗಿ ಎರಡು ೭೦೦ ಎಂ. ಡಬ್ಲೂ. ಅಣುಶಕ್ತಿ ಘಟಕಗಳನ್ನು ವಿಸ್ತರಣಕ್ಕಾಗಿ ಕೈಗಾದಲ್ಲಿ ಸ್ಥಾಪಿಸಲು ಕೇಳಿದ್ದಾರೆ. ಅವರು ರಾಜ್ಯದಲ್ಲಿ ದೊಡ್ಡಗಾತ್ರದ ಅಣು ರಿಯಾಕ್ಟರ್‌ಗಳನ್ನೊಳಗೊಂಡ ಅಣುಶಕ್ತಿ ಪಾರ್ಕನ್ನು ಸ್ಥಾಪಿಸಲೂ ಒತ್ತಾಯಿಸಹುದು.

ನಮ್ಮ ಮುಖ್ಯಮಂತ್ರಿಗಳ ವಿರೋಧಿಗಳು ನಮ್ಮ ಮುಖ್ಯಮಂತ್ರಿ ಅವರು ಬಹಳ ‘ಪವರ್ ಹಂಗ್ರಿ’ ಎಂದು ಹೇಳುತ್ತಾರೆ. ಆದರೆ ನಮ್ಮ ಜನಪ್ರಿಯ ಮುಖ್ಯಮಂತ್ರಿಯವರಿಗೆ ಪವರ್ ಅಂದರೆ ಥರ್ಮಲ್ ಪವರ್ (ತಾಪಶಕ್ತಿ), ನ್ಯೂಕ್ಲಿಯರ್ ಪವರ್ (ಅಣುಶಕ್ತಿ), ಸೋಲಾರ್ ಪವರ್ (ಸೌರಶಕ್ತಿ), ಹೈಡಲ್ ಪವರ್ (ಜಲವಿದ್ಯುಚ್ಛಕ್ತಿ) ಮತ್ತು ವಿಂಡ್‌ಪವರ್ (ವಾಯುಶಕ್ತಿ). ಅವರು ಅನೇಕ ಶಕ್ತಿಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ರಾಜ್ಯವು ಕ್ರಿ.ಶ. ೨೦೧೪ ರ ಹೊತ್ತಿಗೆ ೧೪,೦೦೦ ಎಂ.ಡಬ್ಲೂ. ಶಕ್ತಿಯನ್ನು ಉತ್ಪಾದಿಸಿ ಸಾಕಷ್ಟು ಶಕ್ತಿಯನ್ನು ಪಡೆದುಕೊಳ್ಳುವುದೆಂದು ನನಗೆ ನಂಬಿಕೆ ಇದೆ.

ನನಗೆ ಅಣುವು ಯಾವಾಗಲೂ ಒಂದು ಗಹನ ಸೌಂದರ್ಯವಾಗಿತ್ತು. ಅಣುವಿನ ಕೇಂದ್ರ ನನಗೆ ಸಿಲುಕದೆಂದು ನನಗೆ ಗೊತ್ತಿತ್ತು. ಆದರೂ ಅದನ್ನು ತಲುಪುವುದಕ್ಕಾಗಿ ಸರ್. ಜಾರ್ಜ್. ಥಾಮಸನ್ ಮತ್ತು ಅನೇಕ ಪುಸ್ತಕಗಳನ್ನು ಓದಿ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೂ ಅಣುವಿನ ಕೇಂದ್ರದತ್ತ ನನ್ನ ದೂರ ಪ್ರಯಾಣದಲ್ಲಿ ಮೊದಲ ಮೈಲಿಯಲ್ಲೇ ನಾನೇಕೆ ನಿಂತು ಹೋಗಿದ್ದೇನೋ ನನಗೆ ನಿಜವಾಗಿಯೂ ತಿಳಿಯದು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...