Home / ಕವನ / ಕವಿತೆ / ಒಂದು ದಿನ…

ಒಂದು ದಿನ…

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ, ಏನಾಗಬಹುದು?
ಏನೆಲ್ಲ ಆಗಬಹುದು…
ಸಂಸ್ಥೆಗೆ ನಶ್ಟವಾಗಬಹುದು
ಪ್ರಯಾಣಿಕರಿಗೆ ಕಶ್ಟವಾಗಬಹುದು
ರಿಕ್ಷಾ, ಟೆಂಪೋ, ಮೆಟಡೋರ್‍, ಲಾರಿ, ಟ್ರಕ್ಕು, ಖಾಸಗಿ ಬಸ್ಸು…
ಎನೆಲ್ಲ ತುಂಬಿ, ಆ ದಿನದ, ಮೀಟರ್‍ ದರಗಳು,
ಮುಗಿಲು ಮುಟ್ಟಬಹುದು!
*

ಮತ್ತೇನಾಗಬಹುದು?
ಶಾಲೆ, ಕಾಲೇಜಿಗೆ, ಕುರುಡ, ಕುಂಟರಿಗೆ,
ಪತ್ರಿಕಾ ಪ್ರತಿನಿಧಿಗಳಿಗೆ, ಉಸಿರುಗಟ್ಟಿ
ವ್ಯಾಪಾರ, ವೈವಾಟು ತಲೆಕೆಳಗಾಗಿ,
ಸಾಮಾನ್ಯರ ಪಾಡು, ನರಕಯಾಥನೆಯಾಗಿ,
ಹಳ್ಳಿ ಹಳ್ಳಿಗಳೂ ದೂರ ಸರಿದು,
ಶಾಲೆ, ಕಾಲೇಜು, ಸಿನಿಮಾ, ನಾಟಕ, ನಾಡ ಕಛೇರಿಗಳೆಲ್ಲ…
ಒಣ ಒಣ! ಭಣ ಭಣಗುಟ್ಟಿ,
ಅಘೋಶಿತ ಬಂದ್ ನಿರ್ಮಾಣವಾಗಬಹುದು!
ಸೂರ್‍ಯ, ಚಂದ್ರ, ತಾರೆ, ಗ್ರಹಗಳೆಲ್ಲ ತ್ಯಾಪೆ ಮೊರೆಲಿ, ಮರೆಯಾಗಬಹುದು!
ಮುಪ್ಪಿನವರೂ ಒಪ್ಪದಲಿ, ನಡೆದೂ ಮನೆ ಸೇರಬಹುದು
ಅಂದು-ಟೀವಿ, ರೇಡಿಯೋ, ಪತ್ರಿಕೆಗಳಲ್ಲಿ ವಿಶೇಷ ಸುದ್ದಿಯೆನಿಸಿ,
ಜನ ಸೋಮಾರಿ ಕಟ್ಟೆ ಏರಿ,
ಜೊಂಪು ನಿದ್ದೆ ಸೇರಿ,
ಮೋಟು ಬೀಡಿಗೆ, ಹುಡುಕಾಡಬಹುದು!
*

ಮುಷ್ಕರದ ಬಿಸಿಗೆ; ಒಬ್ಬರ ಮೇಲೆ ಒಬ್ಬರು, ಬಿದ್ದು ಎದ್ದು,
ಇದ್ದುಬದ್ದುದ್ದನ್ನೆಲ್ಲ ಕಳಕೊಂಡು…
ಮುರುಕಲ ಗಾಡಿ, ಮನೆ ಮಾರು ಸೇರಲಿಬಹುದು.
ಗುಜರಿ ಸೈಕಲ್, ಬೈಕ್, ಕಾರು, ಜೀಪುಗಳೂ…
ಮರುಹುಟ್ಟು ಪಡೆದು, ಅಲ್ಲಲ್ಲಿ ಕೆಟ್ಟು ನಿಲ್ಲಬಹುದು!
ಖಾಸಗೆರಿಗೆ ಚೆಲ್ಲಾಟ,
ಪ್ರಯಾಣಿಕರಿಗೆ ಪ್ರಾಣ ಸಂಕಟವಾಗಿ,
ಗದ್ದುಗೆ ಹಿಡಿದವರಿಗೆ, ಕಂಟಕವಾಗಬಹುದು!
*

ಒಂದೇ ದಿನದಲಿ; ಖಾಸಗಿಕರಣ ಹಿಗ್ಗಿ ಹಿರೇಕಾಯಿಯಾಗಿ,
ಸಂಸ್ಥೆ ಮೇಲಿನ, ವಿಶ್ವಾಸ ಕುಗ್ಗಿ, ನರಸತ್ತ ನಾಮರ್ಧನನಂತೆ,
ಅದಲು ಬದಲು ಕಂಚೀ ಕದಲು, ಮಿಂಚಿನ ಮುಷ್ಕರದ ಜೊಂಪಿಗೇ
ರಸ್ತೆಗಳು ನಿಟ್ಟೂಸಿರ ಸೂಸಿ,
ನಿದ್ರೆಲ್ಲದೆ, ಮಗ್ಗುಲಿಗೆ ಮುಖವಿಟ್ಟು, ಮಲಗಬಹುದು!
*

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ…
ಏನೆಲ್ಲ ಆಗಬಹುದು?!
ಕಾಯಿಪಲ್ಲೆ, ಮಾರ್ಕೆಟ್ ರೇಟು, ರೇಸಿನಂತೆ
ರೈಜಾಗಿ, ಬಡಬಗ್ಗರ ಕನಸ್ಸುಗಳು ಬಿಕರಿಯಾಗಿ,
ಹುಬ್ಬಳ್ಳಿಯ… ಕಮರಿಪೇಟೆಯಾಗಬಹುದು!
*

ಸಂಸ್ಥೆ ಬಸ್ಸುಗಳು: ಒಂದು ದಿನ ನಿಂತರೆ,
ಇಶ್ಟೆಲ್ಲ ಆಗಬಹುದು!!
ಇದಕ್ಕಿಂತ ಮಿಗಿಲೂ ಆಗಬಹುದು
ಮುಗಿಲು ಕಳಚಿ ಬೀಳಲೂಬಹುದು
ಭೂಮಿ-ಆಕಾಶ ಒಂದಾಗಬಹುದು
ಜಲ ಬತ್ತಿ, ಬಡ ಕಾರ್ಮಿಕರು, ಬೀದಿ ಪಾಲಾಗಬಹುದು!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...