Home / ಕವನ / ಕವಿತೆ / ಒಂದು ದಿನ…

ಒಂದು ದಿನ…

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ, ಏನಾಗಬಹುದು?
ಏನೆಲ್ಲ ಆಗಬಹುದು…
ಸಂಸ್ಥೆಗೆ ನಶ್ಟವಾಗಬಹುದು
ಪ್ರಯಾಣಿಕರಿಗೆ ಕಶ್ಟವಾಗಬಹುದು
ರಿಕ್ಷಾ, ಟೆಂಪೋ, ಮೆಟಡೋರ್‍, ಲಾರಿ, ಟ್ರಕ್ಕು, ಖಾಸಗಿ ಬಸ್ಸು…
ಎನೆಲ್ಲ ತುಂಬಿ, ಆ ದಿನದ, ಮೀಟರ್‍ ದರಗಳು,
ಮುಗಿಲು ಮುಟ್ಟಬಹುದು!
*

ಮತ್ತೇನಾಗಬಹುದು?
ಶಾಲೆ, ಕಾಲೇಜಿಗೆ, ಕುರುಡ, ಕುಂಟರಿಗೆ,
ಪತ್ರಿಕಾ ಪ್ರತಿನಿಧಿಗಳಿಗೆ, ಉಸಿರುಗಟ್ಟಿ
ವ್ಯಾಪಾರ, ವೈವಾಟು ತಲೆಕೆಳಗಾಗಿ,
ಸಾಮಾನ್ಯರ ಪಾಡು, ನರಕಯಾಥನೆಯಾಗಿ,
ಹಳ್ಳಿ ಹಳ್ಳಿಗಳೂ ದೂರ ಸರಿದು,
ಶಾಲೆ, ಕಾಲೇಜು, ಸಿನಿಮಾ, ನಾಟಕ, ನಾಡ ಕಛೇರಿಗಳೆಲ್ಲ…
ಒಣ ಒಣ! ಭಣ ಭಣಗುಟ್ಟಿ,
ಅಘೋಶಿತ ಬಂದ್ ನಿರ್ಮಾಣವಾಗಬಹುದು!
ಸೂರ್‍ಯ, ಚಂದ್ರ, ತಾರೆ, ಗ್ರಹಗಳೆಲ್ಲ ತ್ಯಾಪೆ ಮೊರೆಲಿ, ಮರೆಯಾಗಬಹುದು!
ಮುಪ್ಪಿನವರೂ ಒಪ್ಪದಲಿ, ನಡೆದೂ ಮನೆ ಸೇರಬಹುದು
ಅಂದು-ಟೀವಿ, ರೇಡಿಯೋ, ಪತ್ರಿಕೆಗಳಲ್ಲಿ ವಿಶೇಷ ಸುದ್ದಿಯೆನಿಸಿ,
ಜನ ಸೋಮಾರಿ ಕಟ್ಟೆ ಏರಿ,
ಜೊಂಪು ನಿದ್ದೆ ಸೇರಿ,
ಮೋಟು ಬೀಡಿಗೆ, ಹುಡುಕಾಡಬಹುದು!
*

ಮುಷ್ಕರದ ಬಿಸಿಗೆ; ಒಬ್ಬರ ಮೇಲೆ ಒಬ್ಬರು, ಬಿದ್ದು ಎದ್ದು,
ಇದ್ದುಬದ್ದುದ್ದನ್ನೆಲ್ಲ ಕಳಕೊಂಡು…
ಮುರುಕಲ ಗಾಡಿ, ಮನೆ ಮಾರು ಸೇರಲಿಬಹುದು.
ಗುಜರಿ ಸೈಕಲ್, ಬೈಕ್, ಕಾರು, ಜೀಪುಗಳೂ…
ಮರುಹುಟ್ಟು ಪಡೆದು, ಅಲ್ಲಲ್ಲಿ ಕೆಟ್ಟು ನಿಲ್ಲಬಹುದು!
ಖಾಸಗೆರಿಗೆ ಚೆಲ್ಲಾಟ,
ಪ್ರಯಾಣಿಕರಿಗೆ ಪ್ರಾಣ ಸಂಕಟವಾಗಿ,
ಗದ್ದುಗೆ ಹಿಡಿದವರಿಗೆ, ಕಂಟಕವಾಗಬಹುದು!
*

ಒಂದೇ ದಿನದಲಿ; ಖಾಸಗಿಕರಣ ಹಿಗ್ಗಿ ಹಿರೇಕಾಯಿಯಾಗಿ,
ಸಂಸ್ಥೆ ಮೇಲಿನ, ವಿಶ್ವಾಸ ಕುಗ್ಗಿ, ನರಸತ್ತ ನಾಮರ್ಧನನಂತೆ,
ಅದಲು ಬದಲು ಕಂಚೀ ಕದಲು, ಮಿಂಚಿನ ಮುಷ್ಕರದ ಜೊಂಪಿಗೇ
ರಸ್ತೆಗಳು ನಿಟ್ಟೂಸಿರ ಸೂಸಿ,
ನಿದ್ರೆಲ್ಲದೆ, ಮಗ್ಗುಲಿಗೆ ಮುಖವಿಟ್ಟು, ಮಲಗಬಹುದು!
*

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ…
ಏನೆಲ್ಲ ಆಗಬಹುದು?!
ಕಾಯಿಪಲ್ಲೆ, ಮಾರ್ಕೆಟ್ ರೇಟು, ರೇಸಿನಂತೆ
ರೈಜಾಗಿ, ಬಡಬಗ್ಗರ ಕನಸ್ಸುಗಳು ಬಿಕರಿಯಾಗಿ,
ಹುಬ್ಬಳ್ಳಿಯ… ಕಮರಿಪೇಟೆಯಾಗಬಹುದು!
*

ಸಂಸ್ಥೆ ಬಸ್ಸುಗಳು: ಒಂದು ದಿನ ನಿಂತರೆ,
ಇಶ್ಟೆಲ್ಲ ಆಗಬಹುದು!!
ಇದಕ್ಕಿಂತ ಮಿಗಿಲೂ ಆಗಬಹುದು
ಮುಗಿಲು ಕಳಚಿ ಬೀಳಲೂಬಹುದು
ಭೂಮಿ-ಆಕಾಶ ಒಂದಾಗಬಹುದು
ಜಲ ಬತ್ತಿ, ಬಡ ಕಾರ್ಮಿಕರು, ಬೀದಿ ಪಾಲಾಗಬಹುದು!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...