Home / ಲೇಖನ / ವಿಜ್ಞಾನ / ಸಾಗರದ ಬಸ್ (ಸೀಬಸ್)

ಸಾಗರದ ಬಸ್ (ಸೀಬಸ್)

ಚಿತ್ರ: ಡೇವಿಡ್ ಮಾಕ್ ಕೌಗ್ಹೆ
ಚಿತ್ರ: ಡೇವಿಡ್ ಮಾಕ್ ಕೌಗ್ಹೆ

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚಳವಾದಾಗ ಅಥವಾ ಪ್ರವಾಸಿಗರ ಒತ್ತಡವಾದಾಗ ಸಿಟಿಬಸ್, ಸ್ಪೆಷಲ್ ಬಸ್, ಜಾತ್ರಾಸ್ಪೆಷಲ್‌ಗಳೆಂದು ರಸ್ತೆಸಾರಿಗೆ ಸಂಸ್ಥೆ ಹೊಸ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತದೆ. ಇದರಂತೆ ಸಮುದ್ರಯಾನದ ಜನಸಂಖ್ಯೆಯಲ್ಲಿ ಹೆಚ್ಚಳವಾದಾಗಲೂ ಸಹ ‘ಮಿನಿ ಸೀಬಸ್’ ಚಿಕ್ಕ ಸಮುದ್ರ ಬಸ್‌ನ್ನು ರೂಪುಗೊಳಿಸಲಾಗುತ್ತದೆ. ಸೀಬಸ್ ವಾಹನಕ್ಕೆ ರೆಕ್ಕೆಗಳಿದ್ದು ಇಟಲಿಯ ‘ಸಬೀನೋರಾಕ್‌ಟೆಲ್ಲ’ ಇದನ್ನು ವಿನ್ಯಾಸಗೊಳಿಸಿದೆ. ಇದಲ್ಲದೇ ಯೂರೋಪಿನ ೧೪ ಕಂಪನಿಗಳೂ ಸಹ ಈ ಸೀಬಸ್‌ನ ನಿರ್ಮಾಣ ಕಾರ್ಯದಲ್ಲಿತೊಡಗಿವೆ.

ಒಂದು ಸೀಬಸ್ನಲ್ಲಿ ೬೮೦ ಜನ ಕುಳಿತುಕೊಳ್ಳಬಹುದಾಗಿದ್ದು ಈ ಮಿನಿ ಸೀಬಸ್ ಹಡಗಿಗಿಂತಲೂ ವೇಗವಾಗಿ ಚಲಿಸುತ್ತದೆ. ಅಟ್ಲಾಂಟಿಕ್ ಸಾಗರವನ್ನು ೨೪ ಗಂಟೆಗಳಲ್ಲಿ ಇದು ದಾಟಿದರೆ ಅತಿವೇಗದ ಹಡಗು ಈ ದೂರವನ್ನು ಕ್ರಮಿಸಲು ಒಂದು ವಾರ ಕಾಲ ಸಮಯಬೇಕು. ಇದರಿಂದಾಗಿ ಈ ಬಸ್‌ನ ವೇಗದ ಮಿತಿ ಅರ್ಥವಾಗುತ್ತದೆ. ಈ ಸೀಬಸ್‌ಗಿರುವ ಎರಡು ಎಡಬಲದ ರೆಕ್ಕೆಗಳು ಸಮುದ್ರವನ್ನು ಸಂಚರಿಸಲು ಅನುಕೂಲವಾಗುತ್ತವೆ. ಅಂದರೆ ತೀವ್ರಗತಿಯಲ್ಲಿ ನೀರನ್ನು ಯಂತ್ರಗಳ ಸಹಾಯದಿಂದ ಹಿಂದಕ್ಕೆ ತಳ್ಳುತ್ತವೆ. ಇನ್ನೂ ಚಿಕ್ಕ ಮಿನಿಬಸ್‌ಗಳು ತಯಾರಾಗುತ್ತಿದ್ದು ಇದರಲ್ಲಿ ೨೦೦ ಜನ ಪ್ರಯಾಣಿಕರು ಕುಳಿತುಕೊಳ್ಳಬಹುದು. ಸಣ್ಣ ಬಂದರುಗಳನ್ನು ತಲುಪಬೇಕಾದಾಗ ಇದರ ರೆಕ್ಕೆಗಳು ಸ್ವಯಂ ಚಾಲಿತವಾಗಿ ಮಡಚಿಕೊಳ್ಳುತ್ತವೆ. ಆಗ ಸಾರಾಗವಾಗಿ ನಿಲ್ದಾಣದೊಳಗೆ ಹೋಗಬಹುದು. ಈ ಸೀಬಸ್‌ಗಳ ನಿರ್ಮಾಣವು ಸಮುದ್ರಯಾನಕ್ಕೊಂದು ಕ್ರಾಂತಿಕಾರಕ ಬದಲಾವಣೆಯೆಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ದುಬಾರಿ ಹಣತೆತ್ತು ತಿಂಗಳುಗಟ್ಟಲೆ ಸಮುದ್ರದಲ್ಲಿ ಯಾನ ಮಾಡುವ ಪ್ರವಾಸಿಗರಿಗೆ ಇದೊಂದು ವರದಾನವಾಗಲಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...