Home / ಲೇಖನ / ವಿಜ್ಞಾನ / ಸಾಗರದ ಬಸ್ (ಸೀಬಸ್)

ಸಾಗರದ ಬಸ್ (ಸೀಬಸ್)

ಚಿತ್ರ: ಡೇವಿಡ್ ಮಾಕ್ ಕೌಗ್ಹೆ
ಚಿತ್ರ: ಡೇವಿಡ್ ಮಾಕ್ ಕೌಗ್ಹೆ

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚಳವಾದಾಗ ಅಥವಾ ಪ್ರವಾಸಿಗರ ಒತ್ತಡವಾದಾಗ ಸಿಟಿಬಸ್, ಸ್ಪೆಷಲ್ ಬಸ್, ಜಾತ್ರಾಸ್ಪೆಷಲ್‌ಗಳೆಂದು ರಸ್ತೆಸಾರಿಗೆ ಸಂಸ್ಥೆ ಹೊಸ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತದೆ. ಇದರಂತೆ ಸಮುದ್ರಯಾನದ ಜನಸಂಖ್ಯೆಯಲ್ಲಿ ಹೆಚ್ಚಳವಾದಾಗಲೂ ಸಹ ‘ಮಿನಿ ಸೀಬಸ್’ ಚಿಕ್ಕ ಸಮುದ್ರ ಬಸ್‌ನ್ನು ರೂಪುಗೊಳಿಸಲಾಗುತ್ತದೆ. ಸೀಬಸ್ ವಾಹನಕ್ಕೆ ರೆಕ್ಕೆಗಳಿದ್ದು ಇಟಲಿಯ ‘ಸಬೀನೋರಾಕ್‌ಟೆಲ್ಲ’ ಇದನ್ನು ವಿನ್ಯಾಸಗೊಳಿಸಿದೆ. ಇದಲ್ಲದೇ ಯೂರೋಪಿನ ೧೪ ಕಂಪನಿಗಳೂ ಸಹ ಈ ಸೀಬಸ್‌ನ ನಿರ್ಮಾಣ ಕಾರ್ಯದಲ್ಲಿತೊಡಗಿವೆ.

ಒಂದು ಸೀಬಸ್ನಲ್ಲಿ ೬೮೦ ಜನ ಕುಳಿತುಕೊಳ್ಳಬಹುದಾಗಿದ್ದು ಈ ಮಿನಿ ಸೀಬಸ್ ಹಡಗಿಗಿಂತಲೂ ವೇಗವಾಗಿ ಚಲಿಸುತ್ತದೆ. ಅಟ್ಲಾಂಟಿಕ್ ಸಾಗರವನ್ನು ೨೪ ಗಂಟೆಗಳಲ್ಲಿ ಇದು ದಾಟಿದರೆ ಅತಿವೇಗದ ಹಡಗು ಈ ದೂರವನ್ನು ಕ್ರಮಿಸಲು ಒಂದು ವಾರ ಕಾಲ ಸಮಯಬೇಕು. ಇದರಿಂದಾಗಿ ಈ ಬಸ್‌ನ ವೇಗದ ಮಿತಿ ಅರ್ಥವಾಗುತ್ತದೆ. ಈ ಸೀಬಸ್‌ಗಿರುವ ಎರಡು ಎಡಬಲದ ರೆಕ್ಕೆಗಳು ಸಮುದ್ರವನ್ನು ಸಂಚರಿಸಲು ಅನುಕೂಲವಾಗುತ್ತವೆ. ಅಂದರೆ ತೀವ್ರಗತಿಯಲ್ಲಿ ನೀರನ್ನು ಯಂತ್ರಗಳ ಸಹಾಯದಿಂದ ಹಿಂದಕ್ಕೆ ತಳ್ಳುತ್ತವೆ. ಇನ್ನೂ ಚಿಕ್ಕ ಮಿನಿಬಸ್‌ಗಳು ತಯಾರಾಗುತ್ತಿದ್ದು ಇದರಲ್ಲಿ ೨೦೦ ಜನ ಪ್ರಯಾಣಿಕರು ಕುಳಿತುಕೊಳ್ಳಬಹುದು. ಸಣ್ಣ ಬಂದರುಗಳನ್ನು ತಲುಪಬೇಕಾದಾಗ ಇದರ ರೆಕ್ಕೆಗಳು ಸ್ವಯಂ ಚಾಲಿತವಾಗಿ ಮಡಚಿಕೊಳ್ಳುತ್ತವೆ. ಆಗ ಸಾರಾಗವಾಗಿ ನಿಲ್ದಾಣದೊಳಗೆ ಹೋಗಬಹುದು. ಈ ಸೀಬಸ್‌ಗಳ ನಿರ್ಮಾಣವು ಸಮುದ್ರಯಾನಕ್ಕೊಂದು ಕ್ರಾಂತಿಕಾರಕ ಬದಲಾವಣೆಯೆಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ದುಬಾರಿ ಹಣತೆತ್ತು ತಿಂಗಳುಗಟ್ಟಲೆ ಸಮುದ್ರದಲ್ಲಿ ಯಾನ ಮಾಡುವ ಪ್ರವಾಸಿಗರಿಗೆ ಇದೊಂದು ವರದಾನವಾಗಲಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...