Home / ಕವನ / ಕವಿತೆ / ಕನಸು

ಕನಸು

ಅಪ್ಸರೆಯರೊಡನೆ ಚಂದ್ರಲೋಕದಲ್ಲಿ ತಿರುಗಾಡಿ
ಆನಂದಿಸುವ ಕನಸನ್ನು
ಚಿರುಗುಮೀಸೆಯ ಹುಡುಗ ಕಾಣದಿದ್ದರೆ,

ಒಂದು ಮನೆ, ಒಂದು ಆಸರೆಯ ಮರ, ಬಳ್ಳಿಗೆ ಹೂವು ಹಣ್ಣು,
ತನ್ನ ಅಂಗಳದ ರಂಗೋಲಿ, ತನ್ನ ಸರದಾರನೊಡನೆ ಬದುಕಿನ
ಹೋಲಿರಂಗು,
ಇವನೆಲ್ಲ ಮೊಗ್ಗು ಹುಡುಗಿ ಕನಸದಿದ್ದರೆ,

ಕೂಸಿನ ಹಾಲು ನಗು, ಜೇನು ತೊದಲು,
ಅವ್ವು-ಅಮ್ಮಿ ಇವನೆಲ್ಲ
ಗರ್ಭಿಣಿಯು ಕನಸು ಕಾಣದಿದ್ದರೆ,

ತನ್ನ ಮಗನ ನಿಲುವಂಗಿ-ಡಿಗ್ರಿ, ಆಫೀಸರ್ ಗಿರಿ
ಅವನ ಸೂಟು-ನೋಟು
ಇವನ್ನು ತನ್ನ ಮೀಸೆ ತಿರುವಿನಲ್ಲಿ ಬೀಗಿ ತಂದೆಯು ಕಲ್ಪಿಸದಿದ್ದರೆ,

ತನ್ನ ಮಗನ ಹೆಂಡತಿ ತನ್ನನೋಲೈಸಿ ಸೇವೆ ಮಾಡಿ,
ಬಯ್ದರೂ-ತಿವಿದರೂ ತಲೆ‌ಎತ್ತದೆ ಬಾಗಿ ನಡಕೊಳ್ಳುವ
ಅತ್ತೆತನವ ತಾಯಿ ತನ್ನ ಮಗುವಿನ ಮುಂದೆ ಊಹಿಸಿ ಉಬ್ಬದಿದ್ದರೆ,

ಇಷ್ಟೆಲ್ಲ ಆಗಿ ತನ್ನ ಒಣಕೈಯಲ್ಲಿ
ಒಂದು ಹಸುಗೂಸು ತನ್ನಂತೆ ಬೊಚ್ಚು ಬಾಯಿ ತೆರೆದು
ಹಾಲುಗುಳುತ್ತ ಜಾಜಾ ಜೀಜೀ ಎಂಬುದನ್ನು
ಮೊಮ್ಮಗನ ಪಡೆಯದ ಅತ್ತೆ ಆಶಿಸದಿದ್ದರೆ,

ಕೂಸಾಗಿ-ಬೆಳೆದು-ನಂತರ
ಜೋಡಿ ಪಾರಿವಾಳಗಳಂತೆ ಒಂದು ಪುಟ್ಟ ಹೆಣ್ಣಿನೊಡನೆ ತನ್ನ
ಮುಂದೆ ಹಸೆಮೇಲೆ ಕುಳಿತಿರುವುದನ್ನು
ಮುದುಕಿ ತನ್ನ ಮಬ್ಬುಗಣ್ಣಿನಿದಿರು ಕಟ್ಟಿಕೊಳ್ಳದಿದ್ದರೆ

ಮನುಜರೆಲ್ಲ ತಮಗಿರುವುದಕ್ಕಿಂತ
ಇನ್ನು ಹೆಚ್ಚು ಹೆಚ್ಚು ಸುಖಗಳಿಗಾಗಿ ಹಂಬಲಿಸಿ-ಕನಸಿ-ನನಸದಿದ್ದರೆ
ಈ ಬದುಕಿನಲ್ಲಿ ಬಾಳಬೇಕು ಎಂಬಂಥಾದ್ದು ಏನಿದ್ದಿತು
ಇಲ್ಲ-ಬದುಕನ್ನು ನಡೆಸುವುದೇ ಕನಸು
ನಾಳಿನ ಸವಿಗನಸು
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...