Home / ಲೇಖನ / ಇತರೆ / ಗುರುಗಳು ಇಲ್ಲಿದ್ದಾರೆ

ಗುರುಗಳು ಇಲ್ಲಿದ್ದಾರೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,

ಶಾಲೆಯಲ್ಲಿ ಪಾಠ ಕಲಿಸುವವರನ್ನು ತಾವು ಶಿಕ್ಷಕರೆನ್ನುತ್ತೇವೆ. ಹಾಗೇ ಬದುಕಿನ ಪಾಠಗಳನ್ನು ಕಲಿಸುವವರು ಗುರುಗಳಾಗುತ್ತಾರೆ. ಹೀಗಾಗಿಯೇ ಶಿಕ್ಷಕರೆಲ್ಲರೂ ಗುರುಗಳಾಗಲು ಸಾಧ್ಯವಿಲ್ಲ. ಶಿಕ್ಷಕ, ಬುದ್ಧಿಗೆ ಕಸರತ್ತು ನೀಡುವ ಜ್ಞಾನವನ್ನು ತುಂಬುವ ವಿದ್ಯೆಯನ್ನು ಹೇಳಿಕೊಡುತ್ತಾನೆ. ಆದರೆ ಗುರು ಮನಸ್ಸನ್ನು ಅರಳಿಸುವ, ಆತ್ಮೋನ್ನತಿಯೆಡೆಗೆ ಕರೆದೊಯ್ಯುವ ವಿವೇಕವನ್ನು ಎಚ್ಚರಿಸುತ್ತಾನೆ. ಹೀಗಾಗಿಯೇ ಶಿಕ್ಷಕ ಹೇಳಿಕೊಟ್ಟ ಭೌತಶಾಸ್ತ್ರ, ಗಣಿತ, ಸಮಾಜಶಾಸ್ತ್ರ ನಮಗೆ ಮರೆತು ಹೋದರೂ ಗುರುಗಳು ಹೇಳಿಕೊಟ್ಟ ವಿವೇಕದ ಪಾಠ ಮರೆಯುವುದಿಲ್ಲ.

ಸಖಿ, ನೀನು ಯೋಚಿಸುತ್ತಿರಬಹುದು, ಬದುಕಿನ ಪಾಠ ಕಲಿಸುವ ಇಂತಹ ಗುರುಗಳು ಯಾರು ಎಂದು ನಿಜ, ಅಂತಹ ಆದರ್ಶ ಗುಣಗಳು ಎಲ್ಲ ವ್ಯಕ್ತಿಗಳಲ್ಲೂ ಇದೆ. ಆದರೆ ಅದನ್ನು ಕಾಣುವ ಕಣ್ಣು ನಮಗಿರಬೇಕು. ಆಗ…. ತನ್ನ ಕೆಲಸಕ್ಕೆ ಒಂದು ದಿನವೂ ಚಕ್ಕರ್ ಹೊಡೆಯದೇ ಸಮಯಕ್ಕೆ ಸರಿಯಾಗಿ ಬಂದು ಕಾಲೇಜಿನ ಬಾಗಿಲು ತೆರೆಯುವ ಕಾಲೇಜಿನ ಜವಾನ ಗಂಗಯ್ಯನ ಕರ್ತವ್ಯ ಪ್ರಜ್ಞೆ ಸಮಯ ಪರಿಪಾಲನೆಯಲ್ಲೂ ಗುರುವನ್ನು ಕಾಣಲು ಸಾಧ್ಯ.

ಸಾಲವಾಗಿ ತೆಗೆದುಕೊಂಡು ಹೋಗಿದ್ದ ಹತ್ತು ರೂಪಾಯಿಯನ್ನು ಹೇಳಿದ ದಿನ ಸರಿಯಾಗಿ ಹಿಂತಿರುಗಿಸುವ ಜಾಡಮಾಲಿಯ ಪ್ರಾಮಾಣಿಕತೆಯಲ್ಲೂ ಗುರುವನ್ನು ಕಾಣಲು ಸಾಧ್ಯ. ತನ್ನ ಶೋಷಣೆಯ ವಿರುದ್ಧ ಸದಾ ಹೋರಾಡುವ ಕೆಲಸದಾಳು ಮೇರಿಯಮ್ಮನ ಅಂತ್ಯದಲ್ಲೂ ಗುರುವನ್ನು ಕಾಣಲು ಸಾಧ್ಯ. ನೀನು ಮಾತ್ರ ಸುಳ್ಳು ಹೇಳಬಹುದು. ನಾನು ಮಾತ್ರ ಹೇಳಬಾರದು ಎನ್ನುತ್ತೀಯಲ್ಲಾ ? ಎಂದು ಮುಗ್ಧವಾಗಿ ಪ್ರಶ್ನಿಸುವ ಮಗುವಿನ ಸತ್ಯದ ಮಾತಿನಲ್ಲೂ ಗುರುವನ್ನು ಕಾಣಲು ಸಾಧ್ಯ. ನಾವು ಗಡಿಬಿಡಿಯಲ್ಲಿ ಹೆಚ್ಚಾಗಿ ಕೊಟ್ಟಿದ್ದ ಹಣವನ್ನು ಹಿಂತಿರುಗಿಸುವ ತರಕಾರಿ ಮಾರುವವನ ಪ್ರಾಮಾಣಿಕತೆಯಲ್ಲೂ ಗುರುವನ್ನು ಕಾಣಲು ಸಾಧ್ಯ.

ಈ ಕಾಲದಲ್ಲಿ ನಮಗೆ ಯಾವ ಆದರ್ಶ ವ್ಯಕ್ತಿಯೂ ಕಾಣಸಿಗುವುದಿಲ್ಲ ಎಂದು ಗೊಣಗುತ್ತಿರುತ್ತೇವೆ. ಆದರೆ ತಮ್ಮ ಸಣ್ಣ ಸಣ್ಣ ಕೆಲಸದಲ್ಲೂ ಆದರ್ಶ ಗುಣಗಳನ್ನು ಹೊಂದಿರುವ ನಮಗೆ ನಿತ್ಯ ಪಾಠ ಕಲಿಸುವ ಗುರುಗಳು ನೂರಾರು ಜನರು ಕಾಣಸಿಗುತ್ತಾರೆ. ಅವರನ್ನು ಗುರುಗಳೆಂದು ನಾವು ಪೂಜಿಸಬೇಕಿಲ್ಲ. ಆದರೆ ಅವರಿಂದ ಬದುಕಿನ ಪಾಠಗಳನ್ನೂ, ನೈತಿಕ ಮೌಲ್ಯಗಳನ್ನೂ, ವಿವೇಕವನ್ನೂ, ವೈಚಾರಿಕ ಪ್ರಜ್ಞೆಯನ್ನು ಕಲಿತು, ಬೆಳೆಸಿಕೊಂಡು, ರೂಢಿಸಿಕೊಂಡರೆ ಅದಕ್ಕಿಂತ ಸಾರ್ಥಕತೆ ಬೇರೇನಿದೆ ?

ಸಖಿ, ಸಣ್ಣ ವ್ಯಕ್ತಿಗಳಲ್ಲೂ, ಸಣ್ಣ ಸಂಗತಿಗಳಲ್ಲೂ, ಸಣ್ಣ ಘಟನೆಗಳಲ್ಲೂ ನಾವು ಸದಾ ಗುರುಗಳನ್ನು ಕಾಣಬಹುದು ಪಾಠಗಳನ್ನು ಕಲಿಯಬಹುದು. ಇಂತಹ ಗುರುಗಳನ್ನು ಕಾಣಲು ಮನಸ್ಸನ್ನು ಇಂದಿನಿಂದಲೇ ತೆರೆದಿಡೋಣ ಆಲ್ಲವೇ ? ನಿನ್ನ ಬದುಕಿನಲ್ಲೂ ಇಂತಹ ಗುರುಗಳು ಅನೇಕರಿರಬಹುದಲ್ಲವೇ ? ನೆನಪಾದರೆ ಮರೆಯದೇ ತಿಳಿಸು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...