Home / ಕವನ / ಕವಿತೆ / ಕ್ಲಿಂಟನ್

ಕ್ಲಿಂಟನ್

“ಪಾಪ! ಅಂವ ಮಾಡಬಾರದ್ದ
ತಪ್ಪೇಽನ ಮಾಡ್ಯಾನ
ಮನುಷ್ಯಾ ಮಾಡ್ದ ಏನ್
ಹೆಣಾ ಮಾಡ್ತತಿ”
“ಮೋನಿ ಅಷ್ಟ ಮೋಡೀಽನ ಮಾಡ್ಯಾಳ
ಅಂದ ಮ್ಯಾಲ ಅವಂದಽ ತಪ್ಪಂತ
ಹೆಂಗಂತೀರಿ, – ಆಕಿಂದನೂ ತಪ್ಪಽ
ಹೌದಲ್ಲೋ ಮತ್ತಽ”

“ಅಂವ ಪ್ರೆಸಿಡೆಂಟ್ ಆದ್ರ ಏನಾಽತು
ಮನಷ್ಯಾನ ಹೌದಲ್ಲೋ ಮತ್ತಽಽ”
“ಆಗಿದ್ದಾಗಿ ಹೋತ್ರಪಾ
ಅದನಽ ದೊಡ್ದದ ಮಾಡಬಾರದ
ನಿಮಗಽ ಬ್ಯಾರೆ ಕೆಲಸ – ಬಗಸಿ ಇಲ್ಲೇನು,
ಟಿ.ವಿ. ದಾಗ ಅವ್ರು ಹೇಳಿದ್ರು
ಪೇಪರದಾಗ ನೀವು ಓದಿದ್ರಿ –
ದೊಽಡ್ಡ ಮಾತಾಡಕ್ಹತ್ತಾರ”

“ನಿಮಗ ಏನಽರ ಗೊತ್ತತ್ತೇನ
ಲವ್ವ ಗಿವ್ವು ( love, give)
ಅಂದರ ಏನಂತ –
‘ಹೆಂಡತಿ ಅದಾಽಳಲ್ಲ’
ಆಕಿಽ ಕಿಮ್ಮತ್ತು ಆಕೀಗೆ ಇದ್ದ ಇರ್‍ತತಿ
ಈ ಮೋನಿ ಇದ್ರ ಇರವಳ್ಯಾಕ
ಅದರ ಕಿಮ್ಮತ್ತು ಅದಕ ಇದ್ದಽ ಇರತತಿ
ಇಂವ ಆಟಽ ತುಡುಗು ಬೆಣ್ಣಿ
ತಿಣ್ಣಾಕ ಹೋಗಿ ಸಿಗಬಾರ್‍ದಿತ್ತು, ಸಿಕ್ಕ
ಇನ್ನೇನ ಮಾಡಕ ಆಗ್ತತಿ
ಇಂವು ಆಟಽ ಸುದ್ದಿ ಆಗೋದಕ್ಕಿಂತ
ಮೊದಲ ಹೇಳಬೇಕಾಗಿತ್ತು ಹೇಳಲಿಲ್ಲ
ಆಮೇಲರೆಽ ಆಟ ‘ಹೂಂ’ ಅಂದೀಽರ
ಮುಗಿತಿತ್ತು”

“ಅಬರು ಉಳಿಸಿಕೊಳ್ಯಾಕ ಹೋಗ್ಯಾನ
ಖರೇ ಆಕಿ ಬಿಡತಾಳೇಽನ
ಅರವಿ ಅಂಚಡಿ ಸಹಿತ ಧಾಖಲ ಮಾಡಿ
ಅಂವ ಹ್ಯಾಂಗ ಪ್ರೀತಿಸ್ತಿದ್ದ ಅನ್ನೋದು
ಎದಿ ಉಬ್ಬುಬ್ಬಿಸಿ ಹೇಳಿ
ತನ್ನ ಹಳೇಽ ಸೇಡ ಏನೇನೋ
ಇರಬೇಕಽ ತೀರಿಸಿಕೊಂಡಬಿಟ್ಲ.
ಈಗ ಇಂವನ ಮುಖಾ
ಇಂಗ ತಿಂದ ಮಂಗ್ಯಾನ ಹಂಗ ಆಗೇತಿ
ನೋಡಿದ್ರಿಲ್ಲೋ ಟಿ.ವಿ.ದಾಗ”

“ಹಿಂಗಽ ಮನಿ ವಿಷಯ
ಬೀದಿಗೆ ಎಳಿಬಾರ್‍ದಿತ್ತು’
“ಆಗಿದ್ದಾಗಿಹೋತು ಬಿಡ್ರಪ್ಪ ಇನ್ನ
ಹೊಳ್ಳಿಽ ಹೊಳ್ಳಿಽ ಅದಽ ಮಾತಾಡವ್ರು
ಅಂವ ದೇಶಕ್ಕೆ ಏನೇನ
ಸಾಧನಾ ಮಾಡ್ಯಾನಽ ಬಿಟ್ಟಾನಽ
ಆನ್ನೋದಟ ಮಾತಾಡ್ರಿ”
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...