Home / ಕವನ / ಕವಿತೆ / ಕ್ಲಿಂಟನ್

ಕ್ಲಿಂಟನ್

“ಪಾಪ! ಅಂವ ಮಾಡಬಾರದ್ದ
ತಪ್ಪೇಽನ ಮಾಡ್ಯಾನ
ಮನುಷ್ಯಾ ಮಾಡ್ದ ಏನ್
ಹೆಣಾ ಮಾಡ್ತತಿ”
“ಮೋನಿ ಅಷ್ಟ ಮೋಡೀಽನ ಮಾಡ್ಯಾಳ
ಅಂದ ಮ್ಯಾಲ ಅವಂದಽ ತಪ್ಪಂತ
ಹೆಂಗಂತೀರಿ, – ಆಕಿಂದನೂ ತಪ್ಪಽ
ಹೌದಲ್ಲೋ ಮತ್ತಽ”

“ಅಂವ ಪ್ರೆಸಿಡೆಂಟ್ ಆದ್ರ ಏನಾಽತು
ಮನಷ್ಯಾನ ಹೌದಲ್ಲೋ ಮತ್ತಽಽ”
“ಆಗಿದ್ದಾಗಿ ಹೋತ್ರಪಾ
ಅದನಽ ದೊಡ್ದದ ಮಾಡಬಾರದ
ನಿಮಗಽ ಬ್ಯಾರೆ ಕೆಲಸ – ಬಗಸಿ ಇಲ್ಲೇನು,
ಟಿ.ವಿ. ದಾಗ ಅವ್ರು ಹೇಳಿದ್ರು
ಪೇಪರದಾಗ ನೀವು ಓದಿದ್ರಿ –
ದೊಽಡ್ಡ ಮಾತಾಡಕ್ಹತ್ತಾರ”

“ನಿಮಗ ಏನಽರ ಗೊತ್ತತ್ತೇನ
ಲವ್ವ ಗಿವ್ವು ( love, give)
ಅಂದರ ಏನಂತ –
‘ಹೆಂಡತಿ ಅದಾಽಳಲ್ಲ’
ಆಕಿಽ ಕಿಮ್ಮತ್ತು ಆಕೀಗೆ ಇದ್ದ ಇರ್‍ತತಿ
ಈ ಮೋನಿ ಇದ್ರ ಇರವಳ್ಯಾಕ
ಅದರ ಕಿಮ್ಮತ್ತು ಅದಕ ಇದ್ದಽ ಇರತತಿ
ಇಂವ ಆಟಽ ತುಡುಗು ಬೆಣ್ಣಿ
ತಿಣ್ಣಾಕ ಹೋಗಿ ಸಿಗಬಾರ್‍ದಿತ್ತು, ಸಿಕ್ಕ
ಇನ್ನೇನ ಮಾಡಕ ಆಗ್ತತಿ
ಇಂವು ಆಟಽ ಸುದ್ದಿ ಆಗೋದಕ್ಕಿಂತ
ಮೊದಲ ಹೇಳಬೇಕಾಗಿತ್ತು ಹೇಳಲಿಲ್ಲ
ಆಮೇಲರೆಽ ಆಟ ‘ಹೂಂ’ ಅಂದೀಽರ
ಮುಗಿತಿತ್ತು”

“ಅಬರು ಉಳಿಸಿಕೊಳ್ಯಾಕ ಹೋಗ್ಯಾನ
ಖರೇ ಆಕಿ ಬಿಡತಾಳೇಽನ
ಅರವಿ ಅಂಚಡಿ ಸಹಿತ ಧಾಖಲ ಮಾಡಿ
ಅಂವ ಹ್ಯಾಂಗ ಪ್ರೀತಿಸ್ತಿದ್ದ ಅನ್ನೋದು
ಎದಿ ಉಬ್ಬುಬ್ಬಿಸಿ ಹೇಳಿ
ತನ್ನ ಹಳೇಽ ಸೇಡ ಏನೇನೋ
ಇರಬೇಕಽ ತೀರಿಸಿಕೊಂಡಬಿಟ್ಲ.
ಈಗ ಇಂವನ ಮುಖಾ
ಇಂಗ ತಿಂದ ಮಂಗ್ಯಾನ ಹಂಗ ಆಗೇತಿ
ನೋಡಿದ್ರಿಲ್ಲೋ ಟಿ.ವಿ.ದಾಗ”

“ಹಿಂಗಽ ಮನಿ ವಿಷಯ
ಬೀದಿಗೆ ಎಳಿಬಾರ್‍ದಿತ್ತು’
“ಆಗಿದ್ದಾಗಿಹೋತು ಬಿಡ್ರಪ್ಪ ಇನ್ನ
ಹೊಳ್ಳಿಽ ಹೊಳ್ಳಿಽ ಅದಽ ಮಾತಾಡವ್ರು
ಅಂವ ದೇಶಕ್ಕೆ ಏನೇನ
ಸಾಧನಾ ಮಾಡ್ಯಾನಽ ಬಿಟ್ಟಾನಽ
ಆನ್ನೋದಟ ಮಾತಾಡ್ರಿ”
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...