Home / ಕವನ / ಕವಿತೆ / ಸ್ವಾತಂತ್ರ್ಯ ಬಂದಿದೆ

ಸ್ವಾತಂತ್ರ್ಯ ಬಂದಿದೆ

ನಮಗೆ ಸ್ವಾತಂತ್ರ್ಯ ಬಂದಿದೆ ಸ್ವಾಮೀ ನಮಗೆ ಸ್ವಾತಂತ್ರ್ಯ ಬಂದಿದೆ,
ನಮ್ಮ ಹಡೆದ ತಂದೆ ತಾಯಿಗಳ ಕಾಲಿಂದೊದೆಯಲು
ನಮ್ಮ ತಿದ್ದಿ ಬೆಳೆಸಿದ ಗುರು ಹಿರಿಯರನೂ ಅಲ್ಲಗಳೆಯಲು
ಆಡಳಿತದಾಡುಂಬೊಲದಲ್ಲಿ ಬೇಲಿ ಎದ್ದು ಹೊಲ ಮೇಯಲು
ಜನಸೇವಾ ಭವನಗಳಲ್ಲಿ ಇಲಿ ಹೆಗ್ಗಣಗಳು ಕೊಬ್ಬಲು
ಕುರಿಮಂದಿಯ ಕರಾರಿಲ್ಲದೆ ತಿಂಬ ತೋಳಗಳು ಬೆಳೆಯಲು
ದೀನ ದಲಿತರ ಹೆಸರು ಕೂಗಿಕೂಗಿ ದಬ್ಬಾಳಿಕೆಯ ಬಸಿರುಬ್ಬಿಸಲು

ನಮ್ಮ ಹೂದೋಟಗಳಲ್ಲಿ ಮುಳ್ಳುಕಂಟಿಗಳ ಧಾರಾಳ ಬೆಳೆಸಲು
ನಮ್ಮ ಮನೆಯಂಗಳಗಳಲ್ಲೆ ತಿಪ್ಪೆಯೊಟ್ಟಿಕೊಳ್ಳಲು
ಪೂರ್ವ ಶಿಖಿಯ ಕತ್ತರಿಸಲು ಪಾಶ್ಚಾತ್ಯ ಕಸಿಯ ತಲೆತುಂಬಾ
ಸಿಕ್ಕಾಪಟ್ಟೆ ಬೆಳೆಸಲು ಸ್ವಾತಂತ್ರ್ಯ ಬಂದಿದೆ.

ಬೇಕು ಬೇಕಾದವರ ಬೇಕಾದೆಡೆಗಳಲ್ಲಿ ತುಂಬಿಸಿಕೊಳ್ಳಲು
ಬೇಡಾದವರ ಆಗದವರ ಮೇಲೆಲ್ಲಾ ರೊಚ್ಚೆ ಚಿಮ್ಮಿಸಲು
ದುಡಿದು ತಿಂಬವರ ಒಡಲ ತುಳಿದು ನಮ್ಮ ಬೊಜ್ಜು ಬೇಕಾದಂತೆ
ಬೆಳೆಸಲು ಸ್ವಾತಂತ್ರ್ಯ ಬಂದಿದೆ

ಕುಡಿದು ಬೇಕಾದಷ್ಟು ಬೀದಿಯಲ್ಲಿ ಹೊರಳಾಡಿ ಸ್ವರ್ಗಕಾಣಲು
ಮಾತುಗಳೊಲೆಯ ಮೇಲೆ ಸ್ವಾರ್ಥದಡಿಗೆ ಬೇಯಿಸಿಕೊಳ್ಳಲು
ಬುದ್ದಿ ಶಕ್ತಿ, ಯೋಗ್ಯತೆ, ಗುಣಗಳನ್ನು
ಹೆಣಮಾಡಿ ಹೂಳಿಡಲು
ಗೂಂಡಾ ಗುಂಪುಗಾರಿಕೆ, ಹಣಗಳನ್ನು ಸಿಂಹಾಸನಕ್ಕೇರಿಸಲು
ಕೆಳಬಿದ್ದವರನೆಬ್ಬಿಸುವ ನೆಪದಲ್ಲಿ ಎದ್ದವರ ಹೊಡೆದು ಬೀಳಿಸಲು
ಸ್ವಾತಂತ್ರ್ಯ ಬಂದಿದೆ.
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...