Home / ಕವನ / ಕವಿತೆ / ಸ್ವಾತಂತ್ರ್ಯ ಬಂದಿದೆ

ಸ್ವಾತಂತ್ರ್ಯ ಬಂದಿದೆ

ನಮಗೆ ಸ್ವಾತಂತ್ರ್ಯ ಬಂದಿದೆ ಸ್ವಾಮೀ ನಮಗೆ ಸ್ವಾತಂತ್ರ್ಯ ಬಂದಿದೆ,
ನಮ್ಮ ಹಡೆದ ತಂದೆ ತಾಯಿಗಳ ಕಾಲಿಂದೊದೆಯಲು
ನಮ್ಮ ತಿದ್ದಿ ಬೆಳೆಸಿದ ಗುರು ಹಿರಿಯರನೂ ಅಲ್ಲಗಳೆಯಲು
ಆಡಳಿತದಾಡುಂಬೊಲದಲ್ಲಿ ಬೇಲಿ ಎದ್ದು ಹೊಲ ಮೇಯಲು
ಜನಸೇವಾ ಭವನಗಳಲ್ಲಿ ಇಲಿ ಹೆಗ್ಗಣಗಳು ಕೊಬ್ಬಲು
ಕುರಿಮಂದಿಯ ಕರಾರಿಲ್ಲದೆ ತಿಂಬ ತೋಳಗಳು ಬೆಳೆಯಲು
ದೀನ ದಲಿತರ ಹೆಸರು ಕೂಗಿಕೂಗಿ ದಬ್ಬಾಳಿಕೆಯ ಬಸಿರುಬ್ಬಿಸಲು

ನಮ್ಮ ಹೂದೋಟಗಳಲ್ಲಿ ಮುಳ್ಳುಕಂಟಿಗಳ ಧಾರಾಳ ಬೆಳೆಸಲು
ನಮ್ಮ ಮನೆಯಂಗಳಗಳಲ್ಲೆ ತಿಪ್ಪೆಯೊಟ್ಟಿಕೊಳ್ಳಲು
ಪೂರ್ವ ಶಿಖಿಯ ಕತ್ತರಿಸಲು ಪಾಶ್ಚಾತ್ಯ ಕಸಿಯ ತಲೆತುಂಬಾ
ಸಿಕ್ಕಾಪಟ್ಟೆ ಬೆಳೆಸಲು ಸ್ವಾತಂತ್ರ್ಯ ಬಂದಿದೆ.

ಬೇಕು ಬೇಕಾದವರ ಬೇಕಾದೆಡೆಗಳಲ್ಲಿ ತುಂಬಿಸಿಕೊಳ್ಳಲು
ಬೇಡಾದವರ ಆಗದವರ ಮೇಲೆಲ್ಲಾ ರೊಚ್ಚೆ ಚಿಮ್ಮಿಸಲು
ದುಡಿದು ತಿಂಬವರ ಒಡಲ ತುಳಿದು ನಮ್ಮ ಬೊಜ್ಜು ಬೇಕಾದಂತೆ
ಬೆಳೆಸಲು ಸ್ವಾತಂತ್ರ್ಯ ಬಂದಿದೆ

ಕುಡಿದು ಬೇಕಾದಷ್ಟು ಬೀದಿಯಲ್ಲಿ ಹೊರಳಾಡಿ ಸ್ವರ್ಗಕಾಣಲು
ಮಾತುಗಳೊಲೆಯ ಮೇಲೆ ಸ್ವಾರ್ಥದಡಿಗೆ ಬೇಯಿಸಿಕೊಳ್ಳಲು
ಬುದ್ದಿ ಶಕ್ತಿ, ಯೋಗ್ಯತೆ, ಗುಣಗಳನ್ನು
ಹೆಣಮಾಡಿ ಹೂಳಿಡಲು
ಗೂಂಡಾ ಗುಂಪುಗಾರಿಕೆ, ಹಣಗಳನ್ನು ಸಿಂಹಾಸನಕ್ಕೇರಿಸಲು
ಕೆಳಬಿದ್ದವರನೆಬ್ಬಿಸುವ ನೆಪದಲ್ಲಿ ಎದ್ದವರ ಹೊಡೆದು ಬೀಳಿಸಲು
ಸ್ವಾತಂತ್ರ್ಯ ಬಂದಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...