Home / ಕವನ / ಕವಿತೆ / ಏನೊ ಏನೋ ಕೇಳಿದಂಗಾಯ್ತು

ಏನೊ ಏನೋ ಕೇಳಿದಂಗಾಯ್ತು

ಕರೆಯೂ ಬಂದದ ಕಾಣೇ ಅವ್ವ ಕೇಳು ಬಾರೆ ಕೇಳೆ ಅವ್ವ
ಮಲಗಿದವನ ಎಬ್ಬಿಸಿ ಬಿಡ್ತು ಕುಂತಿರುವವನ ಕುಲುಕಿ ಬಿಡ್ತು

ನಿಂತಿರುವವನ ಏರಿಸಿ ಬಿಡ್ತು ಏರಿಹಾರಿ ಕುಣಿವಂಗಾಯ್ತು
ಯಾವುದೋ ಲೋಕದಾಗ ಸುತ್ತಿದಂಗಾಯ್ತು
ಯಾವ್ದೊ ಸೀಮೇ ಸೇರಿದಂಗಾಯ್ತು

ಯಾವುದೋ ಜೇನು ಕುಡಿದಂಗಾಯ್ತು
ಯಾವ್ದೊ ಮಾತು ಕೇಳಿದಂಗಾಯ್ತು
ಗೋಪಾಲಕೃಷ್ಣನ ಕೊಳಲಿನ ಗಾನಾ | ಸರಸೋತಮ್ಮನ ವೀಣೆ ಗಾನಾ
ನಾರದ ರಾಯರ ತಂಬೂರಿ ಗಾನಾ | ದೇವಕನ್ನೇರ ಇಂಪಾದ ಗಾನಾ

ಏನೋ ಏನೋ ಕೇಳಿದಂಗಾಯ್ತು | ಹಾಲು ಬೆಲ್ಲ ಕುಡಿದಂಗಾಯ್ತು
ಏನೋ ಏನೋ ಕಂಡಂಗಾಯ್ತು | ಸವಿಸವಿ ಊಟ ಉಂಡಂಗಾಯ್ತು

ಗಂಗಿ ಉತ್ಯುಕ್ಕಿ ಹರದಂಗಾಯ್ತು
ತುಂಬಿ ತುಂತುಂಬಿ ಹಾಡಿದಂಗಾಯ್ತು
ಹೂವೂ ಗಮಗಮ ನಾರಿದಂಗಾಯ್ತು
ಸೀಯಾದ ಹಣ್ಣು ತಿಂದಂಗಾಯ್ತು

ಮಕ್ಳು ಸಕ್ರಿ ನಕ್ಕಂಗಾಯ್ತು | ಚಂದ್ರ ನಕ್ಕು ನಗಿಸಿದಂಗಾಯ್ತು
ಮೈಯಾಗೇನೋ ಹೊಕ್ಕಂಗಾಯ್ತು | ಇಮ್ಮಡಿ ಶಕ್ತಿ ಬಂದಂಗಾಯ್ತು

ಎಲ್ಲೆಲ್ಲೂ ರಸ ತುಂಬಿದಂಗಾಯ್ತು | ಕಸಾ ಕೂಡಾ ರಸವೆ ಆಯ್ತು
ಕಲ್ಲಿನ್ಯಾಗ ಸೆಲೇ ಉಕ್ಕಿದಂಗಾಯ್ತು | ಹೆಣದಾಗ ಜೀವ ಬಂದಂಗಾಯ್ತು

ಬೆಕ್ಕು ಕಣ್ಣು ಹೊಡೆದಂಗಾಯ್ತು| ಹೂವು ಹಾಡು ಹೇಳಿದಂಗಾಯ್ತು
ಎಲೆಗಳೇನೋ ನುಡಿದಂಗಾಯ್ತು| ಹುಲ್ಲೆ ಪಿಸುಮಾತಾಡಿದಂಗಾಯ್ತು

ಸೃಷ್ಟಿ ಸೆಡವು ಬಿಟ್ಟಂಗಾಯ್ತು| ಕೆಟ್ಟದ್ದಲ್ಲ ಸುಟ್ಟಂಗಾಯ್ತು
ಕಂಡೂ ಕಂಡೂ ತೋರ್ಸಾಕಾದ್ದು | ಕೇಳಿ ಕೇಳೀ ಹೇಳಾಕಾಗ್ದು

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...